ಹೊನ್ನಾವರ: ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊರ್ವ ಶಾಲೆಯ ಶೌಚಾಲಯದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ನಡೆದಿದೆ.
ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿರುವ ಗುಂಡಬಾಳ,ಮುಟ್ಟಾ ಮೂಲದ ಕ್ರಿಸ್ಟನ್ ರೈಮಂಡ್ ಡಿಸಲ್ವಾ(8) ಮೃತ ಪಟ್ಟ ವಿದ್ಯಾರ್ಥಿ. ಕಳೆದ ಒಂದುವರೆ ವರ್ಷಗಳಿಂದ ಮೂರ್ಚೆ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಒಳಪಟ್ಟಿದ್ದ ಎನ್ನಲಾಗಿದೆ. ಮದ್ಯಾಹ್ನ ಸಮಯ ಶಾಲೆಯಲ್ಲಿ ವಿಶ್ರಾಂತಿ ವೇಳೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಮೂರ್ಚೆಯಿಂದ ಮೃತಪಟ್ಟಿದ್ದು ವಿಷಯ ತಿಳಿದ ತಕ್ಷಣ ಶಾಲಾ ಸಿಬ್ಬಂದಿವರ್ಗದವರು ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದಾದರು ಅಷ್ಟರೋಳಗೆ ವಿದ್ಯಾರ್ಥಿಯ ಪ್ರಾಣ ಪಕ್ಷಿ ಹಾರು ಹೋಗಿದೆ. ಇನ್ನು ಇತನ ಇಬ್ಬರು ಸಹೋದರರು ಸಹ ಮೂರ್ಚೆ ಖಾಯಿಲೆಯಿಂದ ಮೃತಪಟ್ಟಿದ್ದು ಇತನು ಸಹ ಇದೇ ಖಾಯಿಲೆಯಿಮದ ಮೃತಪಟ್ಟಿದ್ದರಿಂದ ಮೃತ ಬಾಲಕನ ಪೋಷಕರ ಆಕೃಂದನ ಮುಗಿಲು ಮುಟ್ಟಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment