ಹೊನ್ನಾವರ: ಯಾವುದೇ ಪರವಾನಗಿ ಇಲ್ಲದೇ ಹೊರ ರಾಜ್ಯದಿಂದ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 30 ಜಾನುವಾರುಗಳನ್ನು ಆರೋಪಿಗಳ ಸಮೇತ ವಶಕ್ಕೆ ಪಡೆದ ಪ್ರಕರಣ ನಡೆದಿದೆ.
ತಾಲೂಕಿನ ಮಂಕಿ ಠಾಣಾ ವ್ಯಾಪ್ತಿಯ ಅನಂತವಾಡಿ ಚೆಕ್ ಪೊಸ್ಟ ಬಳಿ ರಾತ್ರಿ ಸಮಯದಲ್ಲಿ ವಾಹನವನ್ನು ತಪಾಸಣೆ ಮಾಡುತ್ತಿದ್ದಾಗÀ ಎಚ್.ಆರ್ 46 ಬಿ. 5391 ನೊಂದಣೆ ಸಂಖ್ಯೆ ಹೊಂದಿರುವ ಲಾರಿಯಲ್ಲಿ 25 ಕೋಣ ಹಾಗೂ 5 ಎಮ್ಮೆಗಳನ್ನು ಹಿಂಸಾತ್ಮಕವಾಗಿ ಉಸಿರಾಡಲು ಯೋಗ್ಯವಲ್ಲದ ರೀತಿಯಲ್ಲಿ ಸಾಗಾಟ ನಡೆಸಿದ್ದಾರೆ ಎನ್ನಲಾಗಿದೆ. ವಾಹನ ಸಮೇತ ಆರೋಪಿಗಳನ್ನು ವಶಪಡಿಸಿಕೊಂಡು ವಾಹನದಿಂದ ಎಮ್ಮೆಗಳನ್ನು ಕೆಳಕ್ಕೆ ಇಳಿಸಿದಾಗ ಅದರಲ್ಲಿ ಇದ್ದ ಒಂದು ಕೋಣವು ಸತ್ತು ಹೋಗಿದ್ದು ಉಳಿದ ಕೋಣಗಳು ತಿವ್ರ ಅಸ್ವಸ್ಥವಾಗಿದ್ದವು. ಕೂಡಲೇ ಆರಕ್ಷಕರು ಪಶು ವೈದ್ಯರನ್ನು ಕರೆಯಿಸಿ ಸೂಕ್ತ ಚಿಕಿತ್ಸೆ ನೀಡಿಸಿದ್ದಾರೆ. ಒಟ್ಟು ಆರು ಲಕ್ಷ ರೂಪಾಯಿ ಮೌಲ್ಯವುಳ್ಳ ಜಾನುವಾರುಗಳಾಗಿದ್ದು ಕೇರಳಕ್ಕೆ ಸಾಗಿಸುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದುಬಂದಿದೆ. ಲಾರಿಯ ಚಾಲಕ ಭಲೇರಾಮ ಸಿಂಗ್ (40) ಲಾರಿಯ ಕ್ಲಿನರ್ ಕಪೂರ್ ಅಮಿಲಾಲ್ (48), ರಾಮೇಶ್ವರ ಜಾಧವ ಮೂವರನ್ನು ಬಂದಿಸಿದ್ದಾರೆ. ಈ ಕುರಿತು ಮಂಕಿ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸೈ ನೀತು ಗೊಡೆ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment