ಹಳಿಯಾಳ: ಮಹಾನ್ ಪುರುಷರ ತತ್ವ ಸಿದ್ಧಾಂತ ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಸರ್ಕಾರಗಳು ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಿವೆ ಎಂದು ತಹಶೀಲದಾರ ವಿದ್ಯಾಧರ ಗುಳಗುಳಿ ಹೇಳಿದರು. ಅಪ್ಪಣ್ಣಾ ಹಡಪದರ 884ನೇ ಜಯಂತಿ ಅಂಗವಾಗಿ ಅವರ ಭಾವ ಚಿತ್ರವನ್ನು ಅಲಂಕೃತ ವಾಹನದಲ್ಲಿ ಪಟ್ಟಣದ ಪ್ರಮೂಖ ಬೀದಿಗಳಲ್ಲಿ ಸಮಾಜದವರು, ಸಾರ್ವಜನಿಕರು ಮೇರವಣಿಗೆ ನಡೆಸಿದ ಬಳಿಕ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಖ್ಯಾತ ಸಾಹಿತಿ, ವಚನಕಾರ ಅಪ್ಪಣ್ಣಾ ಹಡಪದರ 884ನೇ ಜಯಂತಿಯನ್ನು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉಧ್ಘಾಟಿಸಿ ತಹಶೀಲ್ದಾರ್ ಅವರು ಮಾತನಾಡಿದರು. ಸವಿತಾ ಕ್ಷೌರಿಕ ಸಮಾಜದ ತಾಲೂಕಾಧ್ಯಕ್ಷ ಈರಣ್ಣ ನಾವಲಗಿ ಮಾತನಾಡಿ ಅಪ್ಪಣ್ಣಾ ಹಡಪದ ರವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು, ಅವರು 270ಕ್ಕು ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಕೂಡಲ ಸಂಗಮದಲ್ಲಿ ಬಸವಣ್ಣನವರ ಸಮಾಧಿ ಪಕ್ಕದಲ್ಲಿ ಅಪ್ಪಣ್ಣಾನವರ ಸಮಾಧಿ ಇದೆ ಎಂದು ತಿಳಿಸಿದರು. ಧಾರ್ಮಿಕ ಚಿಂತಕ ಎಂ.ಎನ್.ತಳವಾರ ಉಪನ್ಯಾಸ ನೀಡಿದರು. ಸವಿತಾ ಸಮಾಜದ ನಗರಾಧ್ಯಕ್ಷ ಶ್ರೀನಿವಾಸ ಅನಗೊಂಡ, ಉಪಾಧ್ಯಕ್ಷ ರಮೇಶ ನವಲಗಿ,ಪ್ರಮುಖರಾದ ಸುನಿಲ ಪನಾಳಕರ, ಕಿಶೋರ, ಮಾರುತಿ ಸಾಲುಂಕೆ, ಪರುಶುರಾಮ ಪೋಪಳೆ, ಕಾಂತು ಆಯಟ್ಟಿ, ನಾಗೇಂದ್ರ, ನಾರಾಯಣ ಮುಕ್ತಲ, ಜೆ.ಡಿ.ಗಂಗಾಧರ, ರಾಘು ಮುಕ್ತಲ, ನಾಗರಾಜ ಢಾಂಘೆ, ಫಕೀರಪ್ಪ ನವಲಗಿ, ರಮೇಶ ಗಂಗಾಧರ ಇತರರು ಇದ್ದರು.
Leave a Comment