ಹೊನ್ನಾವರ .ನಾನು ನನ್ನ ವೃತ್ತಿ ಜೀವನವನ್ನು ತುಂಬಾ ಗೌರವಿಸಿದ್ದೇನೆ. ನನ್ನ ವೃತ್ತಿಗೆ ನಾನೆಂದು ನಿಷ್ಕಾಳಜಿ ಮಾಡಿಲ್ಲ. ಎಲ್ಲರೊಡನೆ ಬೆರೆತು, ಎಲ್ಲರೊಡನೆ ಸೇರಿ ನಾನು ಒಬ್ಬ ಸಣ್ಣ ವ್ಯಕ್ತಿಯೆಂದು ತಿಳಿದು ಕರ್ತವ್ಯ ಮಾಡಿದ್ದೇನೆ. ಇದೆ ನನ್ನ ಯಶಸ್ಸಿನ ಗುಟ್ಟು ಎಂದು ವಯೋನಿವೃತ್ತಿ ಹೊಂದಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಬ್ರಾಯ ಎನ್. ಗೌಡ ರವರು ನುಡಿದರು. ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ಸಭಾ ಭವನದಲ್ಲಿ ವಯೋನಿವೃತ್ತಿಯನ್ನು ಹೊಂದಿದ ಸುಬ್ರಾಯ ಎನ್. ಗೌಡ ರವರಿಗೆ ಅಭಿನಂದನಾ ಸಮಿತಿ ಮತ್ತು ವಿವಿಧ ಶಿಕ್ಷಕ ಸಂಘದ ಸಂಘಟನೆಗಳ ಸಹಕಾರದೊಂದಿಗೆ ನಡೆದ ಸಮಾರಂಭದಲ್ಲಿ ಸನ್ಮಾನವನ್ನು ಪಡೆದು ಮಾತನಾಡಿದರು. ಸುಬ್ರಾಯ ಎನ್. ಗೌಡರವರ ಕುರಿತು ಅಭಿನಂದನಾ ಗ್ರಂಥ “ಹಸನ್ಮುಖಿ” ಯನ್ನು ತಾಲೂಕಾ ಪಂಚಾಯತದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ ಜಿ. ನಾಯ್ಕ ರವರು ಬಿಡುಗಡೆಗೊಳಿಸಿ ಮಾತನಾಡುತ್ತಾ ಇವರು ಒಬ್ಬ ಅತ್ಯತ್ತಮ ಅಧಿಕಾರಿಯಾಗಿದ್ದರು. ಇವರ ಕರ್ತವ್ಯ ನಿಷ್ಠೆಯ ಬಗ್ಗೆ ತಾಲೂಕಿನಾದ್ಯಂತ ಉತ್ತಮ ಅಭಿಪ್ರಾಯ ಹೊಂದಿರುವುದರಿಂದ ಇಂದು ಅವರ ಕುರಿತು ಅಭಿನಂದನಾ ಗ್ರಂಥ ಹೊರತರುವಲ್ಲಿ ಸಹಕಾರಿಯಾಯಿತು. ಇದು ಅಧಿಕಾರಿ ಹಂತದಲ್ಲಿ ಪ್ರಪ್ರಥಮ ಬಾರಿಗೆ ನಡೆದ ಉದಾಹರಣೆ ಎಂದು ನುಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ವಹಿಸಿ ನನ್ನ ಕಾರ್ಯಾಲಯದ ಒಂದು ಸ್ಥಂಭ. ಇಂದು ವಯೋನಿವೃತಿಯಾಗುತ್ತಿರುವುದು ನಮಗೆಲ್ಲಾ ತುಂಬಲಾರದ ನಷ್ಟ. ನನ್ನ ಸೇವಾ ಅವಧಿಯಲ್ಲಿ ನಾಕಂಡ ಅಪರೂಪದ ಉತ್ತಮ ಸೌಜನ್ಯ ಮೂರ್ತಿಯ ಅಧಿಕಾರಿಗಳಲ್ಲಿ ಒಬ್ಬರು ಸನ್ಮಾನ್ಯ ಎಸ್.ಎನ್.ಗೌಡ ರವರು. ಆದುದರಿಂದಲೇ ಇಂದು ಇವರ ಬಗ್ಗೆ ಅಭಿನಂದನಾ ಗ್ರಂಥ ಹೊರತರಲು ಪ್ರೇರಣೆಯಾಯಿತು. ಹಾಗೂ ತಾಲೂಕಿನ ಪ್ರತಿಯೊಬ್ಬ ಶಿಕ್ಷಕರಲ್ಲಿ ಆತ್ಮೀಯತೆ, ಪ್ರೀತಿಯನ್ನು ಹೊಂದಿರುವಂತ ಇವರು ಸದಾ ಹಸನ್ಮುಖಿಯಾಗಿರುತ್ತಿದ್ದರು ಎಂದು ನುಡಿದರು. ಸುಬ್ರಾಯ ಎನ್. ಗೌಡರವರ ಕುರಿತು ಸತೀಶ ನಾಯ್ಕ, ಎನ್. ಎಸ್. ನಾಯ್ಕ, ಎಮ್.ಟಿ.ಗೌಡ, ಎಲ್.ಎಮ್.ಹೆಗಡೆ, ಎಮ್.ಜಿ.ನಾಯ್ಕ, ಮಹೇಶ ಶೆಟ್ಟಿ, ಸಾಧನಾ ಬರ್ಗಿ, ಸಂತೋಷಕುಮಾರ, ಜಿ.ಎಚ್.ನಾಯ್ಕ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ಎಮ್.ಟಿ.ಮೊಗೇರ, ಶುಭವತಿ, ಪ್ರತಿಮಾ ಹೆಗಡೆ, ಬಾಬು ನಾಯ್ಕ ಮತ್ತು ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಉಪಸ್ಥಿತರಿದ್ದರು. ಸಭೆಯ ಪ್ರಾರಂಭದಲ್ಲಿ ಜಲವಳಕರ್ಕಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ . ವಿಶ್ವೇಶ್ವರ ಭಟ್ಟರವರು ಪ್ರಾರ್ಥಿಸಿದರು. ಬಿ.ಆರ್.ಸಿ.ಯ ಸಮನ್ವಯಾಧಿಕಾರಿಗಳಾದ ್ರ ಜಿ.ಎಸ್.ನಾಯ್ಕ ರವರು ಪ್ರಾಸ್ತಾವಿಕವಾಗಿ . ಎಸ್.ಎನ್.ಗೌಡ ರವರ ಕುರಿತು ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಮೋಹನ ನಾಯ್ಕ ನಡೆಸಿದರು. ಕೊನೆಯಲ್ಲಿ ಸರ್ವರನ್ನು ಎಮ್.ಟಿ.ಗಣಪತಿ ವಂದಿಸಿದರು.
Leave a Comment