ಹಳಿಯಾಳ:- ಪಟ್ಟಣದ ಬಾಬುರಾವ ಹೋಟೆಲ್ ಮುಂದೆ ನಿಲ್ಲಿಸಿದ ಸಂದರ್ಭದಲ್ಲಿ ಕಳುವಾಗಿದ್ದ 20 ಲಕ್ಷ ರೂ. ಬೆಲೆ ಬಾಳುವ ಇನೋವಾ ಕ್ರಿಸ್ಟಾ ಕಾರು ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದು ಇನ್ನಿಬ್ಬರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಕಾರು ಕದ್ದ ಆರೋಪಿಯನ್ನು ಜಾವೇದ ರುಕಮುದ್ದಿನ್ ಶೇಖ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಪರಾರಿಯಾದ ಇನ್ನಿಬ್ಬರು ಆರೋಪಿಗಳಾದ ಗುಲ್ಬರ್ಗದ ಆವೇಜ್ ಹಾಗೂ ಸೈಪ್ನ ಶೋಧ ಕಾರ್ಯಕ್ಕೆ ವ್ಯಾಪಕ ಜಾಲವನ್ನು ಪೋಲಿಸರು ಬಿಸಿದ್ದು ಕೆಲವೆ ದಿನಗಳಲ್ಲಿ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿನ್ನೆಲೆ :- ಕಳೆದ ಜನೆವರಿ ತಿಂಗಳಲ್ಲಿ 16-01-18ರಂದು ಹಳಿಯಾಳ ಬಾಬುರಾವ್ ಹೋಟೆಲ್ ಆವರಣದಲ್ಲಿ ಪಾರ್ಕಿಂಗ್ ಮಾಡಿದ ಕಾರು ಕಳುವಾಗಿದ್ದ ಬಗ್ಗೆ ಮುಂಬೈ ಕಲ್ಯಾಣದ ನಿವಾಸಿ ಜಗದೀಶ ರಾಮಲಾಲ ನಿರ್ಮಲ ಎಂಬುವರು ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಳಿಯಾಳದಲ್ಲಿ ಯಾವುದೋ ಖಾಸಗಿ ಕಾರ್ಯಕ್ರಮ ಇದೇ ಎಂದು ಆರೋಪಿ ಹಾಗೂ ಇತನ ಇಬ್ಬರು ಸಹಚರರು ಮುಂಬಯಿಯಿಂದ ಕಾರು ಬಾಡಿಗೆಗೆ ತಂದು ಹಳಿಯಾಳ ಬಾಬುರಾವ್ ಹೋಟೆಲ ವಸತಿ ಗೃಹದಲ್ಲಿ ತಂಗಿದ್ದರು. ಜನೆವರಿ 16ರಂದು ಕಾರಿನ ಮಾಲಕ ಹಾಗೂ ಚಾಲಕರಾಗಿದ್ದ ಜಗದೀಶ ಬೆಳಗ್ಗೆ ಸ್ನಾನಗೃಹಕ್ಕೆ ತೆರಳಿದ್ದಾಗ ಮೂವರು ಆರೋಪಿಗಳು ಕಾರು ಕಳುವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿತರನ್ನು ಹಾಗೂ ಕಾರಿನ ಪತ್ತೆ ಕಾರ್ಯವನ್ನು ಹಳಿಯಾಳ ಪೋಲಿಸರು ನಡೆಸಿ ಮುಂಬಯಿಯ ಅಂದೇರಿಯ ಠಾಣೆಯಲ್ಲಿ 19-7-18ರಂದು ಇನೋವಾ ಕದ್ದು ಮಾರಾಟ ಮಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿ ಆರೋಪಿ ಜಾವೇದ ಹಳಿಯಾಳದಿಂದ ಕದೊಯ್ದ ಬಗ್ಗೆ ತಪ್ಪೋಪ್ಪಿ ಕೊಂಡಿದ್ದನು. ಈ ಪ್ರಕರಣದ ಜಾಡನ್ನು ಹಿಡಿದು ಮುಂಬಯಿಗೆ ತೆರಳಿದ ಹಳಿಯಾಳ ಪೋಲಿಸರು ಆರೋಪಿ ಜಾವೇದ ರುಕಮುದ್ದಿನ್ ಶೇಖನನ್ನು ಬಂದಿಸಿ ಕರೆತಂದು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸಿ.ಪಿ.ಐ ಸುಂದ್ರೇಶ ಹೊಳೆಣ್ಣನವರ ನೇತ್ರತ್ವದಲ್ಲಿ ಠಾಣೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೋಂಡಿದ್ದರು. ಎಎಸ್ಐ ಆನಂದ ಪಾವಸ್ಕರ, ಹವಾಲ್ದಾರ್ ಅಶೋಕ ಹುಬ್ಬಳ್ಳಿ, ಜಗದೀಶ ಇತರರು ಇದ್ದರು.
Leave a Comment