ಹಳಿಯಾಳ: ಪರಿಣಾಮಕಾರಿಯಾದ ಪಾಠಬೋಧನೆಗೆ ಕಲೆಗಳು ಪೂರಕ ವಾಗುತ್ತವೆ. ಕಲೆಗಳಲ್ಲಿ ಎಲ್ಲ ವಿಷಯಗಳು ಅಡಗಿದ್ದು ಇವುಗಳನ್ನು ಕಲಿಸುವುದರಿಂದ ಗುಣಾತ್ಮಕ ಶಿಕ್ಷಣ ನಿಡಲು ಸಾಧ್ಯ ಎಂದು ಅಂತರಾಷ್ಟ್ರೀಯ ಕಲಾವಿದ ಬಸಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು. ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಳಿಯಾಳ ಶಿರಸಿ ಶೈ.ಜಿಲ್ಲೆ ಉ.ಕ ಮತ್ತು ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ್ ಬೆಂಗಳೂರು ಅವರುಗಳು ಕಲಿ ಕಲಿಸು ಯೋಜನೆಯ ಅಡಿಯಲ್ಲಿ “ಕಲಾ ಅಂತರ್ಗತ ಕಲಿಕೆಯ ಕಲಾ ಯಾತ್ರೆ” ಯ ಶಾಲೆಗಳೊಡನೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಅಹಮ್ಮದ ಮುಲ್ಲಾ ಮಾತನಾಡಿ ಶಾಲೆಯಲ್ಲಿ ಮಕ್ಕಳ ಕ್ರೀಯಾಶೀಲ ಚಟುವಟಿಕೆಗಳಿಗೆ ನಾನು ಸಹಾಯ ಸಹಕಾರ ನೀಡುತ್ತೇನೆಂದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ ಭಾವಿಕೇರಿ, ರಂಗ ನಿದೇರ್ಶಕಿ ವಿಶ್ವೇಶ್ವರೀ ಹಿರೇಮಠ, ಮುಖ್ಯೋಪಾಧ್ಯಾಯ ಸುನಿಲ ಗಾಂವಕರ, ಬೆರೆ ಜಿಲ್ಲೆಗಳ ಕಲಾವಿದರಾದ ಪ್ರಜ್ಞಾ ಹೆಗಡೆ, ಅಪರ್ಣಾ ದೇಶಪಾಂಡೆ, ರಾಜೀವ ಗೌಡಾ, ಅರುಣ ಬಿಟಿ, ನಾಗರಾಜ ಹುಡೇದ, ವೆಂಕಟೇಶ ನಾಯ್ಕ, ಗಂಗಾಧರ ಎಸ್ ವೇದಿಕೆಯಲ್ಲಿದ್ದರು. ಶಿಕ್ಷಕ ಸಿದ್ದಪ್ಪಾ ಬಿರಾದಾರ ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ನಿರ್ವಹಿಸಿದರು.
Leave a Comment