ಹೊನ್ನಾವರ : ಶಾಸಕ ಸುನೀಲ ನಾಯ್ಕ ಸೋಮವಾರ ಪಟ್ಟಣದ ತಾ.ಪಂ. ಕಾರ್ಯಾಲಯದ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಬೆಳ್ಳುಕುರ್ವಾ ಹಿರಿಯ ಪ್ರಾಥಮಿಕ ಶಾಲೆ ದುರಸ್ತಿಗೆ 1 ಲಕ್ಷ ರೂ. ಗಳ ಅನುದಾನದಲಿ ಕಾಮಗಾರಿ ಆರಂಭಿಸುವಂತೆ ಬಿಇಓ ಅವರಿಗೆ ಸೂಚಿಸಿದರು.
ಹಡಿನಬಾಳ ಶಾಲೆಗೆ ಟೈಲ್ ಅಳವಡಿಸಲು 50 ಸಾವಿರ ರೂ. ಅನುದಾನ ಮಂಜೂರಾತಿ ನೀಡಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮನವಿಗಳನ್ನು ಸ್ವೀಕರಿಸಿದರು.
ಕುಳಕೋಡ ರಸ್ತೆಯ ಪಿಎಂಜಿಎಸ್ವಾಯ್ ಕಾಮಗಾರಿಯ ಬಗ್ಗೆ ಸಾರ್ವಜನಿಕರ ಆಕ್ಷೇಪಕ್ಕೆ ಸ್ಪಂದಿಸಿದ ಅವರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು.
50ಕ್ಕೂ ಹೆಚ್ಚು ಸಾರ್ವಜನಿರ ಅಹವಾಲುಗಳನ್ನು ಸ್ವೀಕರಿಸಿದ ಅವರು ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಕೇಶವ ನಾಯ್ಕ ಬಳಕೂರು, ಗೇರುಸೊಪ್ಪಾ ಮಂಜುನಾಥ ನಾಯ್ಕ, ವಿಘ್ನೇಶ ಹೆಗಡೆ, ಮಂಕಿ ಶ್ರೀಧರ ನಾಯ್ಕ, ಚಿತ್ತಾರ ಗಣಪತಿ ಗೌಡ ಮತ್ತಿತರರು ಉಪಸ್ಥಿತರಿದ್ದರು.
Leave a Comment