ಹೊನ್ನಾವರ : ನಮ್ಮ ವಿರೋಧಿಗಳು ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಸಿಲೆಂಡರ್ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು ಆದರೆ ನಾವು ಚುನಾವಣೆಯ ನಂತರವೂ ಕೂಡಾ ಸಿಲೆಂಡರ್ ನೀಡುತ್ತಿದ್ದೇವೆ ಎಂದು ಶಾಸಕ ದಿನಕರ ಶೆಟ್ಟಿ ವಿರೋಧಿ ಪಾಳಯಕ್ಕೆ ಟಾಂಗ್ ನೀಡಿದರು.
ತಾಲೂಕಿನ ಸಾಲ್ಕೋಡ ಗ್ರಾ.ಪಂ ಸಭಾಭವನದಲ್ಲಿ ನಡೆದ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣಾ ಹಾಗೂ ಅಭಿನಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ನಂತರ ಹಲವಾರು ಯೋಜನೆಯನ್ನು ತಂದಿದ್ದಾರೆ. ಅದರಲ್ಲಿ ಉಜ್ವಲ ಅನಿಲ ಯೋಜನೆ ಕೂಡ ಒಂದು. ಇದರ ಉದ್ದೇಶ ಹೊಗೆ ಮುಕ್ತ ಭಾರತ, ಪರಿಸರ ಮಾಲಿನ್ಯ ನಿಯಂತ್ರಣ, ಮಹಿಳೆಯರ ಆರೋಗ್ಯ ರಕ್ಷಣೆ ಎಲ್ಲಾ ದೃಷ್ಟಿಯಿಂದ ಉತ್ತಮ ಯೋಜನೆ ಇದಾಗಿದೆ ಎಂದು ಹೇಳಿದರು.
ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಮಹಿಳೆಯರು ಈ ಹಿಂದೆ ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮಾಡಲು ಮಾತ್ರ ಸೀಮಿತವಾಗಿದ್ದು, ಮೋದಿಯವರಿಗೆ ಮಹಿಳೆಯ ದಕ್ಷತೆಯ ಬಗ್ಗೆ ವಿಶ್ವಾಸ ಮತ್ತು ಗೌರವ ಎಷ್ಟಿದೇ ಎನ್ನುವುದಕ್ಕೆ ದೇಶದ ಅತಿ ಉನ್ನತ ಸ್ಥಾನ ಮಹಿಳೆಯರಿಗೆ ಕೊಟ್ಟಿರುವುದೇ ಸಾಕ್ಷಿ. ಹೆಚ್ಚಿಸುವ ಉದ್ದೇಶ ನರೇಂದ್ರ ಮೋದಿ ಸರ್ಕಾರ ಮಹಿಳೆಯರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ಮುದ್ರಾ ಯೋಜನೆ ಬೇಟಿ ಬಚಾವೊ- ಬೇಟಿ ಪಾಡಾವೊ, ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾ.ಪಂ ಅಧ್ಯಕ್ಷೆ ಶಾಂತಿ ನಾಯ್ಕ, ಸದಸ್ಯರಾದ ಶಶಿಕಲಾ ಆಚಾರಿ, ಬಾಲಚಂದ್ರ ನಾಯ್ಕ, ಶ್ರೀಧರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
Leave a Comment