ಹೊನ್ನಾವರ: ತಾಲೂಕಿನ ಮುಗ್ವಾ ಗ್ರಾಮದ ಮೂಡಕಟ್ಟೆಗೆ 35 ಲಕ್ಷ ವೆಚ್ಚದ ರಸ್ತೆ ಹಾಗೂ ಚಿಕ್ಕನಕೋಡ ಪಂಚಾಯತಿಯ ಗುಂಡಿಬೈಲ್ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿಗೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಬುಧವಾರ ಗುದ್ದಲಿಪೂಜೆ ನೇರವೇರಿಸಿದರು. ನಂತರ ಮಾತನಾಡಿ ಮುಗ್ವಾ ಗ್ರಾಮದ ಮೂಡಕಟ್ಟೆ ರಸ್ತೆಗೆ ಇದೇ ಪ್ರಥಮವಾಗಿ ಹಣ ಬಿಡುಗಡೆಯಾಗಿದೆ.ಇದೇ ರಸ್ತೆಯ ಪಕ್ಕದ ಮುಂದುವರೆದ ರಸ್ತೆಗೆ ಕೆಲವೇ ದಿನದಲ್ಲಿ ಟೆಂಡರ್ ಆಗಲಿದೆ. ನನ್ನ ಕನಸಾದ ಗುಂಡಬಾಳ ಮತ್ತು ಗುಂಡಿಬೈಲ್ … [Read more...] about 75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ
ಶ್ರೀಕಲಾ ಶಾಸ್ತ್ರಿ
ವಿದ್ಯಾರ್ಥಿಗಳಿಂದ ನಾಡು ಗುರುತಿಸುವಂತಾಗಿದೆ; ಶಾಸಕ ದಿನಕರ ಶೆಟ್ಟಿ
ಹೊನ್ನಾವರ: ಹೊಸಾಕುಳಿಯ ಜನ ನಮ್ಮ ಜೊತೆ ಅಧಿಕಾರ ಇದ್ದಾಗಲೂ ಅಧಿಕಾರ ಇಲ್ಲದಾಗಲೂ ಅಭಿಮಾನ ತೋರಿದ್ದಾರೆ. ಅವರ ಆಕಾಂಕ್ಷೆಗಳಿಗೆ ಖಂಡಿತ ಸ್ಪಂದಿಸುತ್ತೇನೆ. ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಹುದು. ಅದರಲ್ಲೂ ನನ್ನ ಕ್ಷೇತ್ರ ಇವತ್ತು ವಿದ್ಯಾರ್ಥಿಗಳಿಂದ ನಾಡು ಗುರುತಿಸುವಂತಾಗಿದೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು.ತಾಲೂಕಿನ ಹೊಸಾಕುಳಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆದ ಹೊಸಾಕುಳಿಯ ಹಳ್ಳಿಗೊಂದು ಘನತೆ ತಂದ … [Read more...] about ವಿದ್ಯಾರ್ಥಿಗಳಿಂದ ನಾಡು ಗುರುತಿಸುವಂತಾಗಿದೆ; ಶಾಸಕ ದಿನಕರ ಶೆಟ್ಟಿ
ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಶಾಸಕ ಸುನೀಲ ನಾಯ್ಕ ಚಾಲನೆ
ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ರ್ಕತಿಕ ಕಾರ್ಯಕ್ರಮದ ಕಡೆ ಗಮನ ನೀಡಬೇಕು ಆ ಮೂಲಕ ಕ್ರೀಡಾಪಟುಗಳಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೆತ್ರದ ಶಾಸಕ ಸುನಿಲ್ ನಾಯ್ಕ ಅಭಿಪ್ರಾಯಪಟ್ಟರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ … [Read more...] about ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಶಾಸಕ ಸುನೀಲ ನಾಯ್ಕ ಚಾಲನೆ
ಉಚಿತ ಗ್ಯಾಸ್ ವಿತರಣೆ
ಹೊನ್ನಾವರ : ನಮ್ಮ ವಿರೋಧಿಗಳು ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಸಿಲೆಂಡರ್ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು ಆದರೆ ನಾವು ಚುನಾವಣೆಯ ನಂತರವೂ ಕೂಡಾ ಸಿಲೆಂಡರ್ ನೀಡುತ್ತಿದ್ದೇವೆ ಎಂದು ಶಾಸಕ ದಿನಕರ ಶೆಟ್ಟಿ ವಿರೋಧಿ ಪಾಳಯಕ್ಕೆ ಟಾಂಗ್ ನೀಡಿದರು. ತಾಲೂಕಿನ ಸಾಲ್ಕೋಡ ಗ್ರಾ.ಪಂ ಸಭಾಭವನದಲ್ಲಿ ನಡೆದ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣಾ ಹಾಗೂ ಅಭಿನಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ಈ ದೇಶದ … [Read more...] about ಉಚಿತ ಗ್ಯಾಸ್ ವಿತರಣೆ
ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 4ನೇ ವರ್ಷಾಚರಣೆ;ಎಲ್ಲರ ಗಮನ ಸೆಳೆದ ಮಹಿಳಾಮೋರ್ಚಾದ ಕಾರ್ಯಕರ್ತರ ಬೈಕ್ರ್ಯಾಲಿ
ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 4ನೇ ವರ್ಷಾಚರಣೆಯ ಅಂಗವಾಗಿ ಭಾರತೀಯ ಜನತಾ ಪಾರ್ಟಿಯ ಮಹಿಳಾಮೋರ್ಚಾದ ಕಾರ್ಯಕರ್ತರು ಬೈಕ್ ಬೈಕ್ರ್ಯಾಲಿಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಶರಾವತಿ ವ್ರತ್ತದಿಂದ ಬೈಕ್ ಬೈಕ್ರ್ಯಾಲಿಯಲ್ಲಿ ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕಮಲಾ ಮಂಜುನಾಥ್ ನಾಯ್ಕ, ತಾಲೂಕಾ ಮಹಿಳಾ ಮೊರ್ಚಾ ಕಾರ್ಯದರ್ಶಿ ಪೂರ್ಣಿಮಾ ಮಡಿವಾಳ, ಸ್ಮಿತಾ ಭಟ್, ಶ್ರುತಿ ಶೇಟ್ ಇತರರು … [Read more...] about ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ 4ನೇ ವರ್ಷಾಚರಣೆ;ಎಲ್ಲರ ಗಮನ ಸೆಳೆದ ಮಹಿಳಾಮೋರ್ಚಾದ ಕಾರ್ಯಕರ್ತರ ಬೈಕ್ರ್ಯಾಲಿ