ಹೊನ್ನಾವರ: ತಾಲೂಕಿನ ಗುಣವಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇನಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ ಮಾತನಾಡಿ ಸೈನಿಕರ ಸೇವೆ ಅತ್ಯಂತ ಗೌರವಯುತವಾದದು ಎಲ್ಲರು ಸೈನ್ಯ ಸೇರಲಾಗುವುದಿಲ್ಲ ಆದರೆ ಯಾರಲ್ಲಿ ದೈಹಿಕ ಸಾಮಥ್ರ್ಯವಿರುತ್ತದೆಯೋ ದೇಶ ಸೇವೆ ಮಾಡುವ ಆಶಕ್ತಿ ಇರುತ್ತದೆಯೋ ಅಂತವರು ಈ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಯುವ ಸಮುದಾಯ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.
ನಂತರ ಸಿ ಐ ಎಸ್ ಎಪ್, ಎನ್ ಎಕ್ಸ್ ಜಿ ತರಬೇತಿದಾರ ಸೈನಿಕರಾದ ಮಾದೇವ ಗೌಡ ಮಾತನÁಡಿ ಸೈನ್ಯ ಎಂದಾಕ್ಷಣ ಎಲ್ಲವೂ ಕಠಿಣವಾಗಿರುವುದಿಲ್ಲ, ನಿರಂತರ ಅಭ್ಯಾಸದಲ್ಲಿ ತೊಡಗಿದ್ದರೆ ಯಾವುದು ಕಠಿಣವಾಗುವುದಿಲ್ಲ. ಸೇನಾ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ತರಬೇತಿ ಪಡೆಯುವ ಪ್ರತಿಯೊಬ್ಬರಲ್ಲು ದೈಹಿಕ ಸಾಮಥ್ರ್ಯವನ್ನು ಹುಟ್ಟಿಹಾಕುವುದು ತರಬೇತಿ ಉದ್ದೇಶವಾಗಿದೆ. ದೈಹಿಕ ಸಾಮಥ್ರ್ಯ ಸುದಾರಿಸಬೇಕಾದರೆ ನಿರಂತರ ಪ್ರಯತ್ನ ಬೇಕು.ಭಾರತಿಯ ಸೈನಿಕರಾಗಿ ದೇಶ ಸೇವೆಮಾಡಿ ಪ್ರತಿಯೋಂದು ಮನೆಯಲ್ಲಿ ಸೈನಿಕನಿದ್ದರೆ ನಮ್ಮ ಸಮಾಜಕ್ಕೆ ಸೌಂದರ್ಯ ಬರುತ್ತದೆ. ಪ್ರತಿಯೋಬ್ಬರಿಗೂ ದೇಶಕಟ್ಟಬೇಕು ಎನ್ನುವ ಚಲ ಇರಬೇಕು. ತಂದೆ-ತಾಯಿ ಋಣ, ದೇಶದ ಋಣ ತಿರಿಸುವ ಅವಕಾಶ ಸೈನ್ಯ ಸೇರುವ ಮೂಲಕ ಪ್ರತಿಯೊಬ್ಬರಿಗು ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.
ಮನೆಗೊಬ್ಬ ಸೈನಿಕ ಎನ್ನುವ ನಿಟ್ಟಿನಲ್ಲಿ ಸೇನಾ ನೇಮಕಾತಿ ದೈಹಿಕ ತರಬೇತಿ, ಭಾರತಿಯ ಸೇನೆ ಮತ್ತು ಅರಸೇನಾ ಪಡೆಗಳಲ್ಲಿ ಗ್ರಾಮಿಣ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಗಳಲ್ಲಿ ನೇಮಕಗೊಳಿಸುವ ಸಲುವಾಗಿ ಉಚಿತ ದೈಹಿಕ ಸಹಿಷ್ಣುತೆ ತರಬೇತಿಯನ್ನು ಅರಸೇನಾ ಪಡೆಯ ತರಬೇತಿದಾರರಿಂದ ಸರಕಾರಿ ಪ್ರೌಢಶಾಲೆ ಚಿತ್ತಾರ ಹಾಗೂ ಸಂತ ಅಂತೋನಿ ಪ್ರೌಡ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕ ಶ್ರೀಕಾಂತ ಪಟಗಾರ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕರಾದ ತಿಮ್ಮಪ್ಪ ಗೌಡ ಮಾತನಾಡಿ ಸ್ವತಂತ್ರ ಭಾರತದ ರಕ್ಷಣೆಗಾಗಿ ಎಲ್ಲರು ಸೇವೆ ಸಲ್ಲಿಸಬೇಕಾಗಿದೆ, ಸೈನ್ಯದಲ್ಲಿ ಸೇವೆ ಮಾಡಿ ಬರುವಾಗ ಪದವಿಗೆ ಸರಿಸಮಾನವಾದ ಸರ್ಟಿಪಿಕೆಟ್ ಸಿಗುತ್ತದೆ. ಇದರಿಂದ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸ ಬಹುದು ನಿಮಗೆ ದೇಶ ಸೇವೆ ಮಾಡಬೇಕು ಎನ್ನುವ ಭಾವನೆ ನಿಮ್ಮ ಮನಸಿನಲ್ಲಿ ಮೂಡಿದರೆ ಅದು ನಿಮ್ಮನ್ನು ಹುರಿದುಂಬಿಸುತ್ತದೆ. ಕಡಿಮೆ ಶಿಕ್ಷಣದಲ್ಲಿ ಉತ್ತಮ ಅವಕಾಶವಿರುವ ಎಕೈಕ ಉದ್ಯೋಗ ಸೈನಿಕ ಸೇವೆ ಎಂದು ತಮ್ಮ ಅನುಭವ ಹಂಚಿಕೊಂಡರು.
ವಿವಿಧ ಭಾಗಗಳಿಂದ ಯುವಕರು ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
Leave a Comment