• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರಜೆಗಳು ಸಬಲರಾದರೆ ಭ್ರಷ್ಟಾಚಾರ ತೊಲಗಿಸಲು ಸಾಧ್ಯ

August 15, 2018 by Gaju Gokarna Leave a Comment

ಹೊನ್ನಾವರ :ಪ್ರತಿಯೊಬ್ಬ ಪ್ರಜೆ ಸಬಲನಾದರೆ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳಿಸಬಹುದು’ ಎಂದು ವೈದ್ಯ ಡಾ.ಜೋರ್ಸನ್ ಫರ್ನಾಂಡಿಸ್ ಅಭಿಪ್ರಾಯಪಟ್ಟರು.
ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ ಮತ್ತು ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ಜ್ಞಾನ,ಕೌಶಲ್ಯ,ಕರ್ತವ್ಯದಲ್ಲಿ ಶ್ರದ್ಧೆ ಮೊದಲಾದ ಗುಣ ಹಾಗೂ ಸಕಾರಾತ್ಮಕ ಭಾವನೆಗಳನ್ನು ಉದ್ದೀಪನಗೊಳಿಸುವ ಮೂಲಕ ವ್ಯಕ್ತಿಯನ್ನು ಪ್ರಬಲನನ್ನಾಗಿ ಮಾಡಬಹುದು’ ಎಂದು ಅವರು ಹೇಳಿದರು.
“ತಪ್ಪುಗಳಿಂದ ಪಾಠ ಕಲಿಯುವುದು ಶಿಕ್ಷಣ.ಹಿಂಸೆ,ಅತ್ಯಾಚಾರ ಮೊದಲಾದ ಸಮಾಜದ್ರೋಹಿ ಚಟುವಟಿಕೆಗಳನ್ನು ಶಿಕ್ಷಿತರು ಮಾಡಿದರೆ ಅವರು ಕ್ಷಮಾರ್ಹರಲ್ಲ.ಸಾಮಾಜಿಕ ಜಾಲತಾಣಗಳು,ಟಿವಿ ಧಾರವಾಹಿಗಳು ಮೊದಲಾದ ಸಮೂಹ ಮಾಧ್ಯಮಗಳು ಸಮಾಜ ತಪ್ಪು ದಾರಿಯಲ್ಲಿ ಸಾಗುವಲ್ಲಿ ತಮ್ಮ ಕೊಡುಗೆ ನೀಡಿವೆ.ಪಾಲಕರ ನಡವಳಿಕೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಮುಗ್ಧ ಮನಸ್ಸಿನಲ್ಲಿ ಅಮೂಲ್ಯ ಆಲೋಚನೆಗಳನ್ನು ಬಿತ್ತಿ ಅದನ್ನು ಸಮೃದ್ಧವಾಗಿಸಬಹುದು ಅಥವಾ ಕೆಟ್ಟ ಸಂಕೇತಗಳೊಂದಿಗೆ ಅದನ್ನು ಮಲಿನಗೊಳಿಸಬಹುದು’ ಎಂದು ವ್ಯಕ್ತಿತ್ವ ವಿಕಸನದ ರೀತಿಯನ್ನು ಅವರು ವಿವರಿಸಿದರು.
ಉದ್ಘಾಟನೆ ನೆರವೇರಿಸಿದ ಎಂ.ಪಿ.ಇ. ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಮಾತನಾಡಿ,”ದೇಶದ ರಾಜಕೀಯ ವಲಯದಲ್ಲಿ ಯುವಕರ ಪಾಲ್ಗೊಳ್ಳುವಿಕೆ ಅಗತ್ಯ.ವಿದ್ಯಾರ್ಥಿಗಳಲ್ಲಿ ಇತಿಹಾಸ,ರಾಜಕೀಯ ಪ್ರಜ್ಞೆ ಮೂಡಿಸುವ ಶಿಕ್ಷಣ ನೀಡಬೇಕು’ ಎಂದು ಸಲಹೆ ನೀಡಿದರು.
ಕರ್ನಾಟಕ ಬ್ಯಾಂಕ್‍ನ ವ್ಯವಸ್ಥಾಪಕ ವಿವೇಕಾನಂದ ನಾಯ್ಕ ಮಾತನಾಡಿ,”ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ವಿಜಯಲಕ್ಷ್ಮೀ ನಾಯ್ಕ ಮಾತನಾಡಿ,”ವಿದ್ಯಾರ್ಥಿಗಳು ಶಿಸ್ತು,ಸ್ವಚ್ಛತೆ ಹಾಗೂ ಸಮಯಪಾಲನೆಗೆ ಮಹತ್ವ ಕೊಡಬೇಕು’ ಎಂದು ಹೇಳಿದರು.
ಡಾ.ರೇಣುಕಾದೇವಿ ಗೋಳಿಕಟ್ಟೆ ಉಪಸ್ಥಿತರಿದ್ದರು.ಸಂಗೀತಾ ನಾಯ್ಕ ಪ್ರಾರ್ಥನಾ ಗೀತೆ ಹಾಡಿದರು.ವಿದ್ಯಾರ್ಥಿ ಕಾರ್ಯದರ್ಶಿ ನಿಖಿಲೇಶ್ ವಾಳ್ಕೆ ಸ್ವಾಗತಿಸಿದರು.ನಿಖಿತಾ ನಾಯ್ಕ ಅತಿಥಿ ಪರಿಚಯ ಮಾಡಿದರು.ಡಾ.ಎಂ.ಆರ್.ನಾಯ್ಕ ಪ್ರತಿಜ್ಞಾ ವಿಧಿ ಬೋಧಿಸಿದರು.ಸಚಿನ್ ಭಟ್ಟ,ಭರತ್ ನಾಯ್ಕ ನಿರೂಪಿಸಿದರು.ಕಾವ್ಯಾ ಮೇಸ್ತ ವಂದಿಸಿದರು.
ಶ್ರೀರಾಮ್ ಅವರಿಂದ ನಡೆದ ಜಾದೂ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

watermarked DSC 0039 watermarked DSC 0032 watermarked DSC 0031

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Canara News Tagged With: ಅಗತ್ಯ.ವಿದ್ಯಾರ್ಥಿಗಳಲ್ಲಿ ಇತಿಹಾಸ, ಅತ್ಯಾಚಾರ, ಅಭಿಪ್ರಾಯ, ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ಬ್ಯಾಂಕ್‍ನ ವ್ಯವಸ್ಥಾಪಕ, ಕ್ರೀಡಾ ಚಟುವಟಿಕೆ, ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ, ಪದಗ್ರಹಣ, ಪ್ರಜೆಗಳು ಸಬಲರಾದರೆ, ಭ್ರಷ್ಟಾಚಾರ ತೊಲಗಿಸಲು, ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ, ಮುಗ್ಧ ಮನಸ್ಸಿನಲ್ಲಿ ಅಮೂಲ್ಯ ಆಲೋಚನೆ, ಮೊದಲಾದ, ರಾಜಕೀಯ ಪ್ರಜ್ಞೆ, ವಿದ್ಯಾರ್ಥಿಗಳು ಶಿಸ್ತು, ವೈದ್ಯ ಡಾ.ಜೋರ್ಸನ್ ಫರ್ನಾಂಡಿಸ್, ಸಮಯಪಾಲನೆಗೆ ಮಹತ್ವ ಕೊಡಬೇಕು, ಸಮಾಜದ್ರೋಹಿ ಚಟುವಟಿಕೆ, ಸಾಧ್ಯ, ಸಾಂಸ್ಕøತಿಕ, ಸ್ವಚ್ಛತೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...