ಹೊನ್ನಾವರ ತಾಲೂಕ ಆಡಳಿತ, ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ 72ನೇ ಸ್ವಾತಂತ್ರೋತ್ಸವ ಆಚರಣೆ ಮಾಡಲಾಯಿತು.
ತಹಶೀಲ್ದಾರ ಮಂಜುಳಾ ಭಜಂತ್ರಿ ಧ್ವಜಾರೋಹಣ ನೇರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಸ್ವತಂತ್ರ್ಯ ಪಡೆಯುವುದರಲ್ಲಿ ನಮ್ಮ ಹಿರಿಯರು ಶ್ರಮ ವಹಿಸಿದ್ದಾರೆ. ಜೀವನ ಬಲಿದಾನ ಮಾಡಿದ್ದಾರೆ. ಇಂದು ನಮಗೆ ಸ್ವಾತಂತ್ರವಿದೆ ಆದ್ದರಿಂದ ದಾಸ್ಯದ ಅರಿವಿಲ್ಲ. ವಿವಿಧ ಜಾತಿ,ಧರ್ಮ,ಆಚಾರ-ವಿಚಾರ ವೈವಿದ್ಯತೆ ಇದ್ದು ನಮ್ಮ ಭಾರತ ದೇಶ ವಿವಿದತೆಯಲ್ಲಿ ಎಕತೆಯನ್ನು ಕಂಡಿದೆ. ನಮ್ಮಲ್ಲಿರುವ ಐಕ್ಯತೆಯಿಂದ ನಮ್ಮ ಹಿರಿಯರು ಸ್ವಾತಂತ್ರ್ಯ ಪಡೆದಿದ್ದಾರೆ. ಇಂದಿನ ಯುವ ಪಿಳಿಗೆ ಆಧುನಿಕ ತಂತ್ರಜ್ಞಾನವಾದ ಟಿವಿ,ಮೊಬೈಲ್,ಇಂಟರ್ನೆಟ್ ಎಂದು ಕಾಲ ಹರಣ ಮಾಡುತ್ತಿದ್ದಾರೆ. ಅದರಲ್ಲಿನ ಮಾರ್ಗದರ್ಶಕವಾದ ಮಾಹಿತಿ ಮಾತ್ರ ಪಡೆಯಿರಿ. ಯುವ ಜನಾಂಗದ ಜೀವನ ಭವಿಷ್ಯ ಅತಿಮುಖ್ಯವಾದದು ಎಕೆದಂರೆ ಅದರಲ್ಲಿ ರಾಷ್ಟ್ರದ ಅಭಿವೃದ್ದಿ ಅಡಗಿದೆ ಪ್ರತಿಯೊಬ್ಬರು ರಾಷ್ಟ್ರಾಭಿಮಾನ ರೂಡಿಸಿಕೊಳ್ಳಿ ಎಂದರು. ಅಂದು ಕೇವಲ ಪುರುಷರಿಂದ ಮಾತ್ರ ಸ್ವಾತಂತ್ರ್ಯ ಬಂದಿಲ್ಲ ಅನೇಕೆ ಮಹಿಳಾ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಜೀವನ ಪಣಕಿಟ್ಟಿದ್ದರು. ತಂದೆ ತಾಯಿಗಳು ಸಹ ಮಕ್ಕಳಿಗೆ ರಾಷ್ಟ್ರಾಭಿಮಾನ ಸೌಹಾರ್ದಯುತ ಜೀವನದ ಬಗ್ಗೆ ತಿಳಿಸಿಕೊಡಬೇಕು. ಮಕ್ಕಳು ಅದನ್ನು ಅಳವಡಿಸಿಕೊಳ್ಳಬೇಕು. ಸಂವಿಧಾನದ ಹಕ್ಕುಗಳಿಗೆ ಚ್ಯುತಿ ಬರದ ರೀತಿಯಲ್ಲಿ ನಾವೆಲ್ಲರು ನಮ್ಮ ರಾಷ್ಟ್ರ ನಿರ್ಮಾಣದಲ್ಲಿ ಕಂಕಣ ಬದ್ದರಾಗೋಣ ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿ ವರ್ಗ, ಶಾಲಾ ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.
Leave a Comment