ಹಳಿಯಾಳ:- ಜಗತ್ತಿನ ಯಾವ ಶಕ್ತಿಗಳಿಗೂ ಅಂಜದೆ ಅಣುಶಕ್ತಿ ಪರೀಕ್ಷೆ ನಡೆಸುವ ಮೂಲಕ ಜಗತ್ತಿನಲ್ಲೇ ಭಾರತವನ್ನು ಬಲಾಢ್ಯ ದೇಶವನ್ನಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದ ಹಾಗೂ ಪ್ರಧಾನಿಯಾದ ಅವಧಿಯಲ್ಲೆಲ್ಲ ದೇಶವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ದಿದ್ದ ಅಜಾತಶುತ್ರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನ ದೇಶಕ್ಕೆ ತುಂಬಲಾರದ ನಷ್ಠವಾಗಿದೆ.
ಒಬ್ಬ ಉತ್ತಮ, ಪ್ರಾಮಾಣಿಕ ಜನನಾಯಕನನ್ನು ಕಳೆದುಕೊಂಡಿರುವುದು ಬಿಜೆಪಿ ಪಕ್ಷಕ್ಕೆ ಮಾತ್ರವಲ್ಲದೇ ದೇಶಕ್ಕೆ ತುಂಬಲಾರದ ನಷ್ಠವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅಗಲಿದ ನಾಯಕನಿಗೆ ಸಂತಾಪ ಸೂಚಿಸಿದ್ದಾರೆ.
ಪಕ್ಷಾತೀತ ವರ್ಚಸ್ಸು ಹಾಗೂ ಉದಾರವಾದ ಮೌಲ್ಯಗಳನ್ನು ಹೊಂದಿದ್ದ. ವಿಶ್ವದಲ್ಲಿಯ ಯಾವ ಶಕ್ತಿಗೂ ಭಾರತ ದೇಶ ಹೆದರುವುದಿಲ್ಲ ಎಂದು ತೊರಿಸಿಕೊಟ್ಟಿದ್ದ ಮಹಾನ್ ನಾಯಕ ಅಟಲ್ಬಿಹಾರಿ ವಾಜಪೇಯಿಜಿ ಅವರ ನಿಧನ ತುಂಬ ನೊವನ್ನುಂಟುಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಸಂತಾಪ ಸೂಚಿಸಿದ್ದಾರೆ.
ಉತ್ತಮ ವಾಕ್ಚಾತುರ್ಯ, ನಡೆ ನುಡಿ, ಸಚ್ಚಾರಿತ್ರ್ಯ ಹೊಂದಿದ್ದ. ಎಲ್ಲರಿಗೂ ಮಾದರಿ ಪುರುಷರಾಗಿದ್ದ ಅಜಾತಶುತ್ರ ವಾಜಪೇಯಿಜಿಯವರು ಜನಮಾನಸದಲ್ಲಿ ಎಂದಿಗೂ ಅಜರಾಮರರಾಗಿ ಇರುವರು. ಅವರ ಆದರ್ಶಗಳು ಎಲ್ಲರಿಗೂ ಮಾದರಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ದೇವರು ದೇಶದ ಜನತೆಗೆ ಕರುಣಿಸಲಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ತಮ್ಮ ಶೊಕ ಸಂದೇಶದಲ್ಲಿ ತಿಳಿಸಿದ್ದಾರೆ.
Leave a Comment