ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆ, ಎಮ್ಎಲ್ಸಿ ಎಸ್.ಎಲ್.ಘೋಟ್ನೇಕರ ಹಾಗೂ ಜನರ ನೀರಿಕ್ಷೇಯಂತೆ ಕೆಲಸ ಮಾಡದ ಹಳಿಯಾಳ ಪುರಸಭೆ ಕಾಂಗ್ರೇಸ್ಪಕ್ಷದ ಆಡಳಿತ ಮಂಡಳಿ ಭ್ರಹ್ಮಾಂಡ ಭ್ರಷ್ಟಾಚಾರ ನಡೆಸಿತ್ತು ಎಂದು ವಿರೋಧ ಪಕ್ಷದ ನಾಯಕ ಹಿರಿಯ ಪುರಸಭೆ ಸದಸ್ಯ ಶ್ರೀಕಾಂತ ಹೂಲಿ ಆರೋಪಿಸಿದ್ದಾರೆ.
ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ತೊರಿಸುತ್ತಿದ್ದ. ಜನವಿರೋಧಿ ಕೆಲಸಗಳಿಗೆ ಸದಾ ವಿರೋಧ ವ್ಯಕ್ತಪಡಿಸಿ ಸಾರ್ವಜನೀಕರ ಬೆಂಬಲಕ್ಕೆ ನಿಲ್ಲುತ್ತಿದ್ದ ಹೂಲಿ ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಾ ಕಳೆದ 39 ವರ್ಷಗಳಿಂದ ಸುಧೀರ್ಘ ರಾಜಕಾರಣದಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಮೆಲಕು ಹಾಕಿದ ಅವರು ಮಾಜಿ ವಿಪ ಸದಸ್ಯ ವಿಡಿ ಹೆಗಡೆ ಅವರ ಮಾರ್ಗದರ್ಶನದಲ್ಲಿ ಪಟ್ಟಣದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ಬಗ್ಗೆ ತಿಳಿಸಿದರು.
ಹಳಿಯಾಳದ ಜನತೆಯ ಬಿಡಿ ಸ್ವತಃ ಅವರ ಪಕ್ಷದ ಹಿರಿಯರಾದ ಸಚಿವ ಆರ್.ವಿ.ದೇಶಪಾಂಡೆಯವರ ಬಹು ಮಹತ್ವಕಾಂಕ್ಷೆಯ ” ರಾಜ್ಯದಲ್ಲಿಯೇ ಮಾದರಿ ಹಳಿಯಾಳ ಪಟ್ಟಣ” ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಹಿಂದಿನ ಪುರಸಭಾ ಸದಸ್ಯರು ವಿಫಲರಾಗಿದ್ದರಲ್ಲದೇ, ಆಡಳಿತ ಪಕ್ಷದವರ ಭ್ರಷ್ಟಾಚಾರದ ಹಲವಾರು ಪ್ರಕರಣಗಳು ಬಟಾಬಯಲಾಗಿ ಸಚಿವರ, ವಿಪ ಸದಸ್ಯರ ಗಮನಕ್ಕೂ ಬಂದು ಅವರು ಸಾರ್ವಜನೀಕವಾಗಿ ಖಂಡಿಸಿದ್ದನ್ನು ಹಾಗೂ ಹಗರಣಗಳು ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದನ್ನು ಸ್ಮರಿಸಬಹುದಾಗಿದೆ ಎಂದ ಶ್ರೀಕಾಂತ ಹೂಲಿ ಒಟ್ಟಾರೆ ಜನರ ಸಮಸ್ಯೆಗೆ ಸ್ಪಂದಿಸದೆ, ಎನ್ಎ-ಬಿನ್ಶೇತ್ಕಿ ಪ್ರಕರಣ, ಆಶ್ರಯ ಮನೆ ಹಂಚಿಕೆ, ಮಹಾತ್ಮಾ ಗಾಂಧಿ ಮಾರುಕಟ್ಟೆ, 24*7 ನೀರು ಸರಬರಾಜು ಯೋಜನೆ, ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿ ಪಟ್ಟಣದಲ್ಲಿ ಬಹುತೇಕ ಕಳಪೆ ಕಾಮಗಾರಿ ನಡೆಯಲು ಪರೋಕ್ಷ ಕಾರಣವಾಗಿರುವ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಕಿಡಿ ಕಾರಿದರು.
ಎಂದೂ ಕಾಣದ ಭ್ರಷ್ಟಾಚಾರವನ್ನು, ಜನವಿರೋಧಿ ನೀತಿಯನ್ನು ಈ ಪುರಸಭೆಯ ಆಡಳಿತ ಮಂಡಳಿಯಲ್ಲಿ ಕಂಡಿರುವ ತಮಗೆ ತೀವೃ ಬೇಸರವಾಗಿದೆ. ಪುರಸಭೆಗೆ ಸ್ಪರ್ದಿಸಲು ಅವಕಾಶವಿದ್ದರು ಸಹಿತ ಈ ಹೊಲಸು ವಾತಾವರಣ ಬೇಡವೆನಿಸಿದ್ದು ತಾವು ಈ ಬಾರಿ ಸ್ಪರ್ದಿಸಿಲ್ಲ ಎಂದ ಅವರು ಅಭಿವೃದ್ದಿಯ ಮಾತೆ ಇಲ್ಲದ ಇಚ್ಚಾಶಕ್ತಿ ಕೊರತೆ ಇರುವ ಕೇವಲ ಹಣ ಮಾಡಲೆಂದೇ ಆಯ್ಕೆ ಬಯಸುವವರ ಬಗ್ಗೆ ಅರಿತು ಜನರು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದರು.
Leave a Comment