ಹೊನ್ನಾವರ : ನಮ್ಮ ದೇಶದ ಸಂಸ್ಕøತಿ ಹಾಗೂ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬೃಹ್ಮ ಕುಮಾರಿ ಮಾತೆಯರು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು
ಪಟ್ಟಣದ ಸರ್ಪಿಸೆಂಟರ್ ಸಭಾಭವನದಲ್ಲಿ ನಡೆದ ಪ್ರಜಾಪಿತ ಬ್ರಹ್ಮಕುಮಾರಿಸ್ ಈಶ್ವರಿಯ ವಿಶ್ವ ವಿದ್ಯಾನಿಲಯದ ವತಿಯಿಂದ ರಕ್ಷಾಬಂಧನ ಹಾಗೂ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವನ್ನು ಸರಕಾರ ಕಲ್ಪಿಸಿದೆ.
ಸಂಘಟಕರು ಸನ್ಮಾನ ನಡೆಸಲು ಮುಂದಾದಾಗ ನನಗೆ ಜನತೆ ಮಹತ್ವದ ಜವಾಬ್ದಾರಿ ನೀಡಿದ್ದಾರೆ ಕೆಲಸ ಮಾಡುವುದು ತುಂಬಾ ಇದೆ. ಸನ್ಮಾನಕ್ಕೆ ಎಂದು ಅಪೇಕ್ಷಿಸಿದವನಲ್ಲ ಆ ಕಾರಣದಿಂದ ಸನ್ಮಾನ ಸ್ವೀಕರಸಬಾರದೆಂದು ತಿರ್ಮಾನಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ವೇಷಭೂಷಣ ಧರಿಸಿ ಚಿಣ್ಣರು ಛಧ್ಮವೇಷದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಬಳಿಕ ಭರತನಾಟ್ಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಿಪಿಐ ಚೆಲುವರಾಜ್, ಅರಣ್ಯಾಧಿಕಾರಿ ಪ್ರವೀಣಕುಮಾರ, ಉದ್ಯಮಿಗಳಾದ ಸತ್ಯನಾರಾಯಣ ಶೇಟ್, ಆರ್. ಎಸ್.ಕಿಣಿ, ಜಯಂತಿ ಮಾತಾ, ಎಂ.ಜಿ.ಹೆಗಡೆ, ಎಲಿಜಾಬೆತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪರಸ್ಪರ ರಕ್ಷೆ ಕಟ್ಟಿ ಸಹೋದರತ್ವವನ್ನು ಮೆರದರು. ಪೋಲಿಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment