ಹೊನ್ನಾವರ ಪ್ರಭಾತನಗರದಲ್ಲಿರುವ ಲಯನ್ಸ್ ಕಲ್ಬ್ ಸಭಾಭವನದಲ್ಲಿ ಶ್ರೀ ಕೃಷ್ಣಾಷ್ಟಮಿ ಹಬ್ಬದ ನಿಮಿತ್ತ ಮುದ್ದು ಕೃಷ್ಣ/ರಾಧೆ ವೇಷ ಸ್ಪರ್ಧೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಲಯನ್ಸ ಕ್ಲಬ್ ಅಧ್ಯಕ್ಷ ರಾಜೇಶ ಸಾಳೇಹಿತ್ತಲ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ನಂತರ ಮಾತನಾಡಿ“ಶಿಷ್ಟರಕ್ಷಕ, ದುಷ್ಟಶಿಕ್ಷಕ ಶ್ರೀ ಕೃಷ್ಣನ ರಾಜನೀತಿಯಾಗಿದ್ದು, ಆದರ್ಶಮಯವಾಗಿರುತ್ತದೆ. ಭಗವದ್ಗೀತೆ ಭೋದಿಸಿ ಧರ್ಮದ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ಮಾಡಿರುತ್ತಾನೆ. ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿ ಧರ್ಮಮಾರ್ಗದಲ್ಲಿ ನಡೆಯುವ ಪ್ರೇರಣೆಯನ್ನು ಭಗವಾನ ಶ್ರೀ ಕೃಷ್ಣನ ಜೀವನ ನಮಗೆ ಕಲಿಸುತ್ತದೆ” ಎಂದರು.
ಕಾರ್ಯದರ್ಶಿ ಸುರೇಶ ಎಸ್ ಸ್ವಾಗತಿಸಿದರು. ಖಜಾಂಚಿ ಯೋಗೇಶ ರಾಯ್ಕರ್ ವಂದಿಸಿದರು. ಉದಯ ನಾಯ್ಕ ನಿರೂಪಿಸಿದರು. ಹರೀಶ ನಾಯ್ಕ ಮತ್ತು ವಿಕ್ರಮ ನಾಯ್ಕ ಪ್ರಯೋಜಕರಾಗಿ ಸಹಕಾರ ನೀಡಿದರು. ಆರಂಭದಲ್ಲಿ ಕುಮಾರಿ ಅನ್ವಿತಾ ಎಚ್ ಎನ್ ರ ಭರತ ನಾಟ್ಯದಿಂದ ಸ್ಪರ್ಧೆ ಪ್ರಾರಂಭವಾಯಿತು.
ಅಂತೂ ಸ್ಪರ್ಧೆಯಲ್ಲಿ 90 ಮಕ್ಕಳು ಭಾಗವಹಿಸಿದ್ದರು. ಕಿರಿಯರ ವಿಭಾಗ (1 ರಿಂದ 4 ವರ್ಷದವರೆಗೆ) ಹಿರಿಯರ ವಿಭಾಗ (4 ರಿಂದ 8 ವರ್ಷದವರೆಗೆ) ದಲ್ಲಿ ಭಾಗವಹಿಸಿದ ಮಕ್ಕಳಿಗೆÉ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿದರು ಭಾಗವಹಿಸಿದ ಉಳಿದೆ ಎಲ್ಲಾ ಮಕ್ಕಳಿಗೆ ಫಲಕ ನೀಡಿ ಪ್ರೋತ್ಸಾಹಿಸಲಾಯಿತು.
ಡಿ.ಡಿ.ಮಡಿವಾಳ, ಎನ್.ಜಿ.ಭಟ್ಟ, ಎಸ್.ಟಿ.ನಾಯ್ಕ ನಿರ್ಣಾಯಕರಾಗಿ ಸಹಕರಿಸಿದರು. ಸಂತೋಷ ನಾಯ್ಕ, ಅಶೋಕ ಮಹಾಲೆ, ಎಸ್.ಜೆ.ಕೈರನ್ನ ಚಂದ್ರಕಾಂತ ಶೇಟ, ಮಂಜು ಆಚಾರ್ಯ, ಅಕ್ಷಯ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
Leave a Comment