ಹೊನ್ನಾವರ: ವ್ಯಕ್ತಿಯೋರ್ವ ಅತಿ ವೇಗ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸಿ ಪಾದಾಚಾರಿ ಮಹಿಳೆಗೆ ಅಪಘಾತ ಪಡಿಸಿದ ಘಟನೆ ನಡೆದಿದೆ.
ಪಟ್ಟಣದ ಬಸ್ನಿಲ್ದಾಣದ ರಸ್ತೆಯಿಂದ ದುರ್ಗಾಕೇರಿ ಮಾರ್ಗದ ರಸ್ತೆಯಲ್ಲಿ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗಿ ರಸ್ತೆ ತಿರುವಿನಿಂದ ಕೂಡಿದ್ದರು ಸಹ ನಿಷ್ಕಾಳಜಿಯಿಂದ ವೇಗ ನಿಯಂತ್ರಿಸದೇ ಗ್ರಾಮ ಚಾವಡಿ ಎದುರಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ಶಿಕ್ಷಕಿ ರೇಖಾ ರಾಮಚಂದ್ರ ನಾಯ್ಕ(37) ಎಂಬುವವರು ಗಾಯಗೊಂಡಿದ್ದಾರೆ. ಅಪಘಾತ ಪಡಿಸಿದ ಆರೋಪಿತ ಮಠದ ಕೇರಿ ನಿವಾಸಿ ಮೈಕಲ್ ರುಜಾರೋ ಡಯಾಸ್(27). ಇತನಿಗು ಸಹ ತಲೆಗೆ ಹಣೆಗೆ ಎರಡು ಕಾಲಿನ ಮೊಣಗಂಟಿಗೆ ಗಾಯನೊವುಗಳಾಗಿದೆ ಎನ್ನಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment