ಹೊನ್ನಾವರ : ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ಜಿ.ಎಸ್.ಬಿ ಸಮಾಜದ ಯುವವಾಹಿನಿಯ ಆಶ್ರಯದಲ್ಲಿ ಸಪ್ಟೆಂಬರ್ 9 ರ ರವಿವಾರದಂದು ಸಹಸ್ರ ಸತ್ಯನಾರಾಯಣ ವ್ರತಾಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವ್ರತಾಚರಣೆ ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ತದನಂತರ ಸಂಜೆ 5 ಗಂಟೆಗೆ ” ಅಭಂಗವಾಣಿ” ಭಕ್ತಿ ಸಂಗಿತ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಖ್ಯಾತ ಗಾಯಕ ಕೃಷ್ಣೇಂದ್ರ ವಾಡೇಕರ್, ಸಂವಾದಿನಿಯಲ್ಲಿ ಶಿರಶಿ ಯಡಳ್ಳಿಯ ಪ್ರಕಾಶ ಹೆಗಡೆ, ತಬಲಾ ಸಾಥಿಯಲ್ಲಿ ಎನ್.ಜಿ.ಹೆÉಗಡೆ ಕೆಪ್ಪೆಕೇರೆ ಹಾಗೂ ಹರಡಸೆÉಯ ವಿನಾಯಕ ಹೆಗಡೆ ಭಾಗವಹಿಸಲಿದ್ದಾರೆ. ಎಂದು ಸಂಪುಟಕರಾದ ಉದಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment