ಹಳಿಯಾಳ: ಹಳಿಯಾಳ ಭಾಗದಲ್ಲಿ ಪ್ರಮುಖ ಬೆಳೆಯಾಗಿರುವ ಭತ್ತದ ಬೆಳೆಯಲ್ಲಿ, ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳುವಿನ ಬಾಧೆ ಕಂಡುಬಂದಿದೆ. ಈ ಬಾಧೆಯನ್ನು ತಡೆಗಟ್ಟಲು ಹಳಿಯಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ ನಾಯ್ಕ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಹಳಿಯಾಳ ತಾಲುಕಿನಲ್ಲಿ 6120 ಹೇಕ್ಟರ ಭತ್ತ ಬೆಳೆಯು ಆವರಿಸಿದೆ. ಈತ್ತೀಚಿನ ದಿನಗಳಲ್ಲಿ ತಾಲೂಕಿನ ಹಳಿಯಾಳ ಹಾಗೂ ದಾಡೇಲಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೆಳೆದ ಭತ್ತದ ಗದ್ದೆಯಲ್ಲಿ ಕಂದು ಜಿಗಿ ಹುಳುವಿನ ಬಾಧೆ ಕಂಡುಬಂದಿದೆ.
ಕಂದು ಜಿಗಿ ಹುಳುವು ನೋಡಲು ಸಣ್ಣ ಗಾತ್ರವಿದ್ದು ವಿಪರೀತ ಸಂಖ್ಯೆಯಲ್ಲಿ ಭತ್ತದ ಬುದಗಳಲ್ಲಿ ಕಾಣಿಸಿಕೊಡು ಸಾಂಕ್ರಾಮಿಕ ರೋಗದ ಹಾಗೆ ಸ್ಫೋಟಗೊಂಡಿದೆ ಎಂದಿರುವ ಕೃಷಿ ಇಲಾಖೆಯವರು ರೈತರು ಯಥೇಚ್ಚವಾಗಿ ಸಾರಜನಕ ಬಳಕೆ ಮಾಡುವುದರಿಂದ, ವಾತಾವರಣದಲ್ಲಿ ಅಧಿಕ ತೇವಾಂಶ ಹಾಗೂ ಹೆಚ್ಚಿನ ಉಷ್ಣಾಂಶÀವಿದ್ದಲ್ಲಿ ಕೀಟ ಬಾಧೆಯು ಉಲ್ಭಣಗೊಳ್ಳುತ್ತದೆ. ಈ ಕೀಟಗಳ ಬಾಧೆ ಒಮ್ಮೆ ಕಂಡುಬಂದರೆ ಕೇವಲ ಒಂದು ವಾರದಲ್ಲಿ ಇಡೀ ಹೊಲಕ್ಕೆ ಆವರಿಸುತ್ತದೆ. ಆದ್ದರಿಂದ ರೈತರು ಈ ಬಾಧೆ ಹತೋಟಿಗಾಗಿ ಪ್ರತಿ ಲೀ. ನೀರಿಗೆ 0.3 ಮಿ.ಲಿ ಇಮಿಡಾಕ್ಲೊಪ್ರಾಡ್ 17.8 ಎಸ್.ಎಲ್. ಅಥsÀವಾ 0.5 ಗ್ರಾಂ ಥಯೋಮೆಥಾಕ್ಸಾಮ್ ಔಷಧ ಬೆರಿಸಿ ಭತ್ತದ ಬುಡಕ್ಕೆ ತಗಲುವಂತೆ ಸಿಂಪಡಿಸಬೇಕು. ಎಕರೆಗೆ 200 ರಿಂದ 250 ಲೀ ಸಿಂಪರಣ ದ್ರಾವಣವನ್ನು ಉಪಯೋಗಿಸಬೇಕು ಎಂದು ನಾಗೇಶ ಅವರು ತಿಳಿಸಿದ್ದಾರೆ.
ರೈತರು ಕೂಡಲೇ ಈ ಔಷಧವನ್ನು ತುರ್ತಾಗಿ ಸಿಂಪರಣೆ ಮಾಡಿ ಹತೋಟಿ ಕೈಗೊಳ್ಳಬೇಕು ಅಲ್ಲದೇ ಹಳಿಯಾಳ ಹಾಗೂ ದಾಂಡೇಲಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.50 ರಿಯಾಯಿತಿ ದರದಲ್ಲಿ ಔಷಧಿಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ಕೊರಲಾಗಿದೆ.
Leave a Comment