ಹೊನ್ನಾವರ: ಡಿಸೇಲ್,ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಎರಿಕೆ ವಿರುದ್ದ ಸೆ.10 ರಂದು ದೇಶ ವ್ಯಾಪಿ ಬಂದ್ ನಡೆದ ಹಿನ್ನಲೆ ಹೊನ್ನಾವರ ಟೆಂಪೋ ಮಾಲಕ ಚಾಲಕರ ಸಂಘದ ವತಿಯಿಂದ ಬಂದ್ ಬೆಂಬಲಿಸಿ ಸೋಮವಾರ ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನಾವು ಗ್ರಾಮೀಣ ಭಾಗದ ಸುಶಿಕ್ಷಿತ ಯುವಕರಿದ್ದು ನಮ್ಮ ಶಿಕ್ಷಣಕ್ಕೆ ಅರ್ಹತೆಗೆ ತಕ್ಕುದಾದ ಉದ್ಯೋಗಾವಕಾಶಗಳನ್ನು ಸರ್ಕಾರಕ್ಕೆ ರೂಪಿಸಲು ಕಷ್ಟವಾದ್ದರಿಂದ ನಾವೇ ಟೆಂಪೋ ಖರಿದಿಸಿ ಸ್ವತಃ ಸಾರಿಗೆ ಉದ್ಯಮದಲ್ಲಿ ತೋಡಗಿ ಜೀವನ ಸಾಗಿಸಿ ಬಂದಿರುತ್ತೇವೆ. ಟೆಂಪೋ ಖರಿದಿಗಾಗಿ ಖಾಸಗಿ, ಹಣಕಾಸು ಸಂಸ್ಥೆ, ಬ್ಯಾಂಕ್ಗಳಲ್ಲಿ ಸಾಲಗಳನ್ನು ಮಾಡಿ ವಾಹನ ಚಲಾಯಿಸಿ ಜೀವನೊಪಾಯ ಕಂಡುಕೊಂಡಿದ್ದೇವು. ಇಂತಹ ಸಂಧರ್ಬದಲ್ಲಿ ಪೆಟ್ರೊಲ್, ಡಿಸೆಲ್ ಹಾಗೂ ಗ್ಯಾಸ್ ಬೆಲೆಯನ್ನು ಎರಿಸಿದ್ದರಿಂದ ವಾಹನ ನಿರ್ವಹಣೆ ಕಷ್ಟಕರವಾಗಿದೆ. ಸರ್ಕಾರ ರೊಡ್ ಟ್ಯಾಕ್ಸ್ಗಳನ್ನು 3ನೇ ಪಾರ್ಟಿ ವಿಮೆಯನ್ನು ಅವೈಜ್ಞಾನಿಕವಾಗಿ ಎರಿಸಿರುತ್ತಾರೆ. ಈ ಮೊದಲು ಟೆಂಪೋಗಳಿಗೆ ನಾಲ್ಕು ಸಾವಿರ ಇದ್ದ ಟ್ಯಾಕ್ಸಗಳನ್ನು ಎಳು ಸಾವಿರಕ್ಕೆ ಎರಿಸಲಾಗಿದೆ. ವಾಹನದ ಬಿಡಿಭಾಗಗಳ ಬೆಲೆಯನ್ನು ಎರಿಸಿ ಖರಿದಿಯ ಮೇಲೆ 28% ಜಿ.ಎಸ್.ಟಿಯನ್ನು ಹೆಚ್ಚಿಸಲಾಗಿದೆ. ಇವೆಲ್ಲವು ನಮ್ಮ ಬದುಕಿನ ಮೇಲೆ,ಅವಲಂಭಿತರ ಮೇಲೆ ಪರಿಣಾಮ ಬೀರಿದೆ. ನಮ್ಮ ವಾಹನದಲ್ಲಿ ಪ್ರಯಾಣಿಸುವವ ಪ್ರಯಾಣಿಕರಿಗು ಬೆಲೆ ಎರಿಕೆಯ ಬಿಸಿ ತಟ್ಟಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅವೈಜ್ಞಾನಿಕ ಬೆಲೆಯಿಂದ ಇಂಧನದ ಮೇಲೆ ನಿಯಂತ್ರಣವಿಲ್ಲದಂತಾಗಿದೆ. ಕಾನೂನು ವಿರುದ್ದವಾಗಿ ವಿಮಾ ಕಂಪನಿಗಳಿಗೆ ಅನೂಕೂಲ ಮಾಡುವ ದೃಷ್ಟಿಯಿಂದ ವಿಮೆಯ ಕಂತನ್ನು ಹೆಚ್ಚಿಸದ್ದರಿಂದ ನೇರವಾದ ಭಾರ ವಾಹನದ ಮಾಲಿಕರಿಗೆ ಬೀಳುತ್ತದೆ.ಒಂದು ಕಡೆ ಟ್ಯಾಕ್ಸ್ ಏರಿಸುತ್ತಲೇ ಇನ್ನೊಂದು ಕಡೆ ರಸ್ತೆಯ ಟೊಲ್ಗೆಟ್ಗಳಲ್ಲಿ ಹಣ ವಸೂಲಿಗೆ ಅವಕಾಶ ನೀಡಿ ಹಗಲು ದರೊಡೆಗೆ ಬೆಂಬಲಿಸುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ತಹಸಿಲ್ದಾರ್ ಮಂಜುಳಾ ಭಜಂತ್ರಿ ಮನವಿ ಸ್ವಿಕರಿಸಿದರು.
ಈ ಸಂಧರ್ಬದಲ್ಲಿ ಹೊನ್ನಾವರ -ಭಟ್ಕಳ ಟೆಂಪೋ ಯುನಿಯನ್ ಅಧ್ಯಕ್ಷ ನಾಗರಾಜ ಯಾಜಿ,ಉಪಾದ್ಯಕ್ಷ ಸೀತರಾಮ ಶೆಟ್ಟಿ, ಹೊನ್ನಾವರ- ಗೆರುಸೊಪ್ಪಾ ಯುನಿಯನ್ ಅಧ್ಯಕ್ಷ ಶ್ರೀಧರ್ ನಾಯ್ಕ, ಉಪಾಧ್ಯಕ್ಷ ಮನೋಹರ ನಾಯ್ಕ, ಕಾರ್ಯದರ್ಶಿ ಮಂತ್ರು ಲೊಫಿಸ್, ಹೊನ್ನಾವರ ಟೆಂಪೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಗಣಪತಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment