ಹೊನ್ನಾವರ: ತಾಲೂಕಿನ ಮೂಡ್ಕಣಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಶ್ರೀ ಶಂಭುಲಿಂಗೆಶ್ವರ ಸಾಂಸ್ಕ್ರತಿಕ ಹಾಗೂ ಕ್ರಿಡಾ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ನಡೆಯಿತು.
2018ರ ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಕಾವ್ಯ ರಾಮಚಂದ್ರ ನಾಯ್ಕ, ದ್ವೀತಿಯ ಪಿ.ಯು.ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಪ್ರಮೋದ ರಾಜು ನಾಯ್ಕ ಮೂಡ್ಕಣಿಯ ಇರ್ವರು ಪ್ರತಿಭಾನ್ವಿತರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪುರಸ್ಕರಿಸಲಾಯಿತು. ಗ್ರಾಮದ ಉತ್ತಮ ಕೃಷಿಕರಾಗಿ ಗುರುತಿಸಿಕೊಂಡ ಗಂಗಾಧರ ನಾಯ್ಕ ಎಂಬುವವರಿಗೆ ಉತ್ತಮ ಕೃಷಿಕ ಪ್ರಶಸ್ತಿ ಹಾಗೂ ಲಕ್ಷ್ಮೀ ಹಳ್ಳೇರ್ರವರಿಗೆ ಉತ್ತಮ ಕೃಷಿಕ ಮಹಿಳೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಉರ ನಾಗರಿಕರ ವತಿಯಿಂದ ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವಿಕರಿಸಿ ಶಾಸಕ ಸುನಿಲ್ ಮಾತನಾಡಿ ನಿಸ್ವಾರ್ಥದಿಂದ ಅತಿ ಹೆಚ್ಚು ಮತನೀಡಿ ಗೆಲುವಿಗೆ ಶ್ರಮಿಸಿದ್ದಿರಿ ನಿಮಗೆ ನಾನು ಚಿರಋಣಿ ಎಂದರು. ನಿಮ್ಮ ಋಣ ತಿರಿಸಲು 5 ವರ್ಷದ ಅವಧಿ ಸಾಲದು ಆದರು ಸಹ ನಿಮ್ಮ ಋಣ ತೀರಿಸುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು. ಯಾವುದೇ ರೀತಿಯಲ್ಲು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳದೇ ಎಲ್ಲರನ್ನು ಪರಿಗಣನೆಗೆ ತೆಗೆದುಕೊಂಡು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸುತ್ತೇನೆ ನಿಮ್ಮ ಆಜ್ಞೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಪಿ.ಟಿ ನಾಯ್ಕ ಮಾತನಾಡಿ ಶಾಸಕರು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದ ಅಭಿವೃದ್ದಿಯಲ್ಲಿ ಹೆಚ್ಚಿನ ಗಮನ ಹರಿಸಲಿ ಎಂದರು. ನಮ್ಮ ಸಮುದಾಯದವರು ಎಂದು ಕೇವಲ ನಮ್ಮ ಕೆಲಸ ಮಾತ್ರ ಮಾಡಬೇಕು ಎಂದು ನಾವು ಶಾಸಕರಿಗೆ ಅತಿಯಾದ ಒತ್ತಡ ತರುವ ಕೆಲಸ ಮಾಡಬಾರದು. ಇತರರಿಗು ಅವರ ಸಹಾಯ ಹಸ್ತ ದೊರಕುವಂತೆ ನಾವು ಸಹಕರಿಸಬೇಕು ಎಂದು ವಿನಂತಿಸಿದರು.
ವೇದಿಕೆಯಲ್ಲಿ ಶಂಭುಲಿಂಗೇಶ್ವರ ದೇವಾಲಯದ ಅಧ್ಯಕ್ಷ ಟಿ.ಟಿ ನಾಯ್ಕ, ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶಂಭು ಹೆಗಡೆ, ಚಂದ್ರಹಾಸ್ ನಾಯ್ಕ, ಜಯಂತ ನಾಯ್ಕ, ನಿತಿನ್ ನಾಯ್ಕ,ವಿಘ್ನೇಶ್ವರ ಹೆಗಡೆ, ಶ್ರೀಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Leave a Comment