ಹೊನ್ನಾವರ: ಪಟ್ಟಣದ ಟಪ್ಪರ್ ಹಾಲ್ ಸಭಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಗಣೇಶೋತ್ಸವ 50 ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ À ಕೇಂದ್ರ ಕೌಶಲ್ಯಾಭಿವ್ರದ್ದಿ ಹಾಗೂ ಉದ್ಯಮಶೀಲತಾ ಸಚಿವರಾದ ಅನಂತಕುಮಾರ್ ಹೆಗಡೆ ಅವರು ಭೇಟಿ ನೀಡಿ ಶ್ರೀ ವಿಘ್ನೇಶ್ವರನ ದರ್ಶನ ಪಡೆದು ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ , ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಉಮೇಶ್ ನಾಯ್ಕ , ಬಾಳಾ ಬಾಳೇರಿ, ವೇಂಕಟೆಶ ಕಾಮತ, ಮುರಳೀಧರ ಗಾಯತೊಂಡೆ, ರಾಜು ಭಂಡಾರಿ, ಉಲ್ಲಾಸ ಶಾನಭಾಗ, ಹರಿಶ್ಚಂದ್ರ ನಾಯ್ಕ ಉಪಸ್ಥಿತರಿದ್ದರು.
Leave a Comment