ಹಳಿಯಾಳ:- ಸದ್ಯ ವಿವಾದದ ಕೇಂದ್ರ ಬಿಂದುವಾಗಿರುವ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಸ್ಥಾಪಿಸಿದ ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ವಿಕ್ಷೀಸಲು ಗ್ರಾಮಾಂತರ ಭಾಗಗಳಿಂದ ದಿನನಿತ್ಯ ನೂರಾರು ಜನತೆ ಆಗಮಿಸುತ್ತಿದ್ದು. ಪ್ರತಿಮೆ ಸ್ಥಾಪನೆ ಮಾಡಿದವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ಕೇಳಿ ಬರುತ್ತಿದೆ.
ಸಿಂಹಪಾಲು ಮರಾಠಾ ಸಮುದಾಯದವರನ್ನು ಹೊಂದಿರುವ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮರಾಠಾ ಜನಾಂಗದವರು ವಾಸಿಸುತ್ತಿದ್ದು. ಹಿಂದವಿ ಸ್ವರಾಜ್ಯ ಸಂಸ್ಥಾಪಕ ಶಿವಾಜಿ ಮಹಾರಾಜರು ಹಾಗೂ ತಾಯಿ ಜೀಜಾಮಾತಾ ಇಲ್ಲಿಯ ಮರಾಠರಿಗೆ ಆರಾಧ್ಯ ಧೈವವಾಗಿದೆ. ಅಲ್ಲದೇ ಸರ್ವ ಹಿಂದೂ ಸಮುದಾಯದವರು ಶಿವಾಜಿಯನ್ನು ದೇವರಂತೆ ಪೂಜಿಸಲ್ಪಡುವ ಹಳಿಯಾಳದಲ್ಲಿ ಶಿವಾಜಿ ಮೂರ್ತಿ ಸ್ಥಾಪನೆ ವೇಳೆ ನಡೆದ ಲಾಠಿ ಚಾರ್ಜ, ನೂಕಾಟ-ತಳ್ಳಾಟ ಘಟನೆ ಅದಾದ ಬಳಿಕ 25 ಜನರ ಮೇಲೆ ಪ್ರಕರಣ ದಾಖಲಾಗಿರುವುದು ಜನತೆಯ ಭಾವನೆಗಳನ್ನು ಕೆರಳಿಸಿದ್ದು. ಸಾಕಷ್ಟು ಜನ ಈ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕುತ್ತಿರುವುದು ಕಂಡು ಬರುತ್ತಿದೆ.
ಈಗಾಗಲೇ ಪ್ರಕರಣ ಕುರಿತು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಪಿಐ ಅವರು ಪ್ರತ್ಯೇಕ ದೂರುಗಳನ್ನು ನೀಡಿ 25 ಜನರ ಮೇಲೆ ಪ್ರಕರಣ ದಾಖಲಿಸಿದ್ದರೇ ಇನ್ನೂ 700-800 ಜನ ಇದ್ದರು ಎಂದು ಉಲ್ಲೇಖಿಸಲಾಗಿದೆ.
ಪ್ರಕರಣದಲ್ಲಿ ಬಿಜೆಪಿಯ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ನೂತನ ಪುರಸಭಾ ಸದಸ್ಯ ಸಂತೋಷ ಘಟಕಾಂಬಳೆ ಹಾಗೂ ಬಿಜೆಪಿ ಮುಖಂಡ ವಿಜಯ ಬೋಬಾಟಿ ಹೆಸರನ್ನು ಸೇರಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಆಪಾದಿಸಿರುವ ಬಿಜೆಪಿ ಮಾಜಿ ಶಾಸಕ ಸುನೀಲ್ ಹೆಗಡೆ ಸಾಮಾಜಿಕ ಕಾರ್ಯದಲ್ಲಿರುವ ಪ್ರತಿಯೊಬ್ಬನ ಪರ ಬಿಜೆಪಿ ಪಕ್ಷ ಇದ್ದು. ಮೂರ್ತಿ ಸ್ಥಾಪನೆಯ ಭಾವನಾತ್ಮಕ ವಿಷಯವನ್ನು ಅಲ್ಲಿಯೇ ಬಿಡುವುದನ್ನು ಬಿಟ್ಟು ದ್ವೇಷ ಸಾಧನೆ ಮಾಡಲಾಗುತ್ತಿದೆ.
ಈಗಾಗಲೇ 25 ಜನರ ಮೇಲೆ ಪ್ರಕರಣ ದಾಖಲಿಸಲಾಗಿರುವುದು ಖಂಡನೀಯ ಎಂದಿರುವ ಹೆಗಡೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಕೂಡಲೇ ಪ್ರಕರಣ ಹಿಂಪಡೆಯಬೇಕು. ಅಲ್ಲದೇ ಮಹಿಳೆಯರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದ್ದು ಯಾರನ್ನಾದರೂ ಬಂಧಿಸಲು ಮುಂದಾದರೇ ಊಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಪೋಲಿಸ್ ಇಲಾಖೆಗೆ ತೀವೃ ತಲೆನೋವಾಗಿ ಪರಿಣಮಿಸುವ ಮೂರ್ತಿ ಪ್ರತಿಷ್ಠಾಪನೆ ಪ್ರಕರಣ ಹೇಗಾದರೂ ಸುಖಾಂತ್ಯ ಕಂಡರೇ ಸಾಕಾಗಿದೆ ಎನ್ನುವುದು ಹೆಸರು ಹೇಳಲು ಇಚ್ಚಿಸದ ಕೆಲವು ಪೋಲಿಸ್ ಅಧಿಕಾರಿಗಳ ಮಾತಾಗಿದೆ.
ಶಿವಾಜಿ ಮಹಾರಾಜರ ಮೇಲಿನ ಗೌರವ ಹಾಗೂ ಪ್ರೀತಿಯಿಂದ ಜನತೆ ಏನೋ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೇ ಆದರೇ ಅದು ಇಂದು ದೊಡ್ದ ವಿವಾದವನ್ನೇ ಸೃಷ್ಠಿಸಿದ್ದು. ತಾಳ್ಮೆ ಹಾಗೂ ಶಾಂತ ರೀತಿಯಿಂದ ಈ ಪ್ರಕರಣ ಮತ್ತೇ ಬೆಳೆಯದೆ ಇಲ್ಲಿಯೇ ಸುಖಾಂತ್ಯ ಕಂಡರೇ ಒಳ್ಳೆಯದು ಎನ್ನುವುದು ತಾಲೂಕಿನ ಪ್ರಜ್ಞಾವಂತ ಜನರ ಮನದಾಳದ ಮಾತಾಗಿದೆ.
Leave a Comment