ಹೊನ್ನಾವರ: “ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿಕೊಂಡು ಪರರ ಏಳ್ಗೆಗಾಗಿ ಯಾರು ದುಡಿಯುತ್ತಾರೋ ಅವರೆ ಶ್ರೇಷ್ಟರು.ಕಷ್ಟದಲ್ಲಿ,ಸಮಸ್ಯೆಯಲ್ಲಿ ನೊಂದವರಿಗೆ ಅಸಹಾಯಕರಾಗಿ,ದಿನ ದಲಿತರಿಗೆ ನೆರವಾಗುತ್ತಾರೆಯೋ ಅವರೇ ನಿಜವಾದ ಧರ್ಮಗುರು. ಯೆಸು ಕ್ರಿಸ್ತರು ಈ ಭೂಮಿಯಲ್ಲಿ ಬಂದು ಪರರ ಏಳ್ಗೆಗಾಗಿ ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು” ಕಾರವಾರ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ಡೆರಿಕ್ ಫರ್ನಾಂಡಿಸ್ ತಮ್ಮ ಪ್ರವಚನದಲ್ಲಿ ಅಭಿಪ್ರಾಯಿಸಿದರು.
ತಾಲೂಕಿನ ಹಡಿನಬಾಳ ಸಂತ ಪ್ರಾನ್ಸಿಸ್ ಆಸ್ಸಿಸಿ ಚರ್ಚನಲ್ಲಿ ರವಿವಾರ ನಡೆದ ಫಾದರ್ ಎಂಟನಿ ರೊಡ್ರಗಿಸ್ ಧರ್ಮಗುರುಗಳ ನಲವತ್ತು ವರ್ಷದ ಸಂಭ್ರಮದ ನಿಮಿತ್ತ ನಡೆದ ಮಾಣ ಕೊತ್ಸವ್ ಕಾರ್ಯಕ್ರಮ ಉದ್ದೇಶಿಸಿ ಅವರು ತಮ್ಮ ಭೋಧನೆಯಲ್ಲಿ ಮಾತನಾಡುತ್ತಿದ್ದರು. “ಒಬ್ಬ ಧರ್ಮಗುರು ತನ್ನನ್ನೆ ತಾನೇ ಎಲ್ಲವನ್ನು ತ್ಯಾಗ ಮಾಡಿಕೊಂಡು ತನ್ನ ಜೀವನವನ್ನು ಸಮಾಜಕ್ಕೆ ಮುಡಿಪಾಗಿಡುವ ಮಹಾತ್ಯಾಗಿಯಾಗಿದ್ದಾರೆ. ಕಳೆದ 40 ವರ್ಷಗಳಿಂದ ಧಾರ್ಮಿಕ ಸೇವೆಯಲ್ಲಿ ತನ್ನನ್ನೆ ತಾನು ತಮ್ಮ ಜೀವನ ತ್ಯಾಗ ಮಾಡಿದ ಜಿಲ್ಲೆಯ ಪ್ರಥಮ ಧರ್ಮಗುರು ಪಾದರ್|| ಎಂಟನಿ ರೊಡ್ರಗಿಸ್ರವರಾಗಿದ್ದಾರೆ. ಯೇಸು ಕ್ರಿಸ್ತರ ಸಂದೇಶ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅಂತೇಯೆ ಮದರ್ ತೆರೆಸಾರವರು ಈ ಸಮಾಜದ ಶ್ರೇಷ್ಟ ವ್ಯಕ್ತಿಂiÀiಲ್ಲಿ ಒರ್ವರಾಗಿದ್ದಾರೆ. ತಮ್ಮಲ್ಲಿ ಶ್ರೀಮಂತಿಕೆ ಅಥವಾ ಮತ್ಸರ,ಅಸೂಯೆ ಎನನ್ನು ವ್ಯಕ್ತಪಡಿಸದೇ ಈ ಭೂಮಿಯಲ್ಲಿ ಜೀವಿಸಿದ್ದಾರೆ ಎಂದರು.
ಫಾದರ್ ಎಂಟನಿರವರು ತಮ್ಮ ತಾಯಿ ಸಾಂತಾನ್ರವರಿಂದ ಕೆಕ್ ಕತ್ತರಿಸುವ ಮೂಲಕ ನಲವತ್ತು ವರ್ಷದ ಸಂಭ್ರಮಾಚರಣೆ ಆಚರಿಸಿದರು. ನಂತರ ಚರ್ಚ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವಿಕರಿಸಿ ಅವರು ಮಾತನಾಡಿ ನಲವತ್ತು ವರ್ಷದ ವರೆಗೆ ನನಗೆ ಆರೋಗ್ಯವಂತ ಜೀವನ ನೀಡಿದ ಭಗವಂತನಿಗೆ, ಹೆತ್ತವರಿಗೆ ವಂದಿಸುತ್ತೆನೆ ಎಂದರು.ನಲವತ್ತು ವರ್ಷದ ಅವಧಿಯಲ್ಲಿ ಸಹಕರಿಸಿದ ಯಾಜಕರು,ಧಾರ್ಮಿಕ ಬಗಿನಿಯರು, ಬಂಧುಗಳಿಗೆ,ಹಿತೈಶಿಗಳಿಗೆ, ಹಡಿನಬಾಳದ ಸಮಸ್ತ ಜನತೆಗೆ ಧನ್ಯವಾದ ಅರ್ಪಿಸಿದÀರು.ಕಾರವಾರ ಪ್ರಾಂತ್ಯದಲ್ಲಿ ಯಾಜಕರ ಕೊರತೆ ಇದೆ, ಆದ್ದರಿಂದ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಯಾಜಕರನ್ನಾಗಿಸಿ ಎಂದು ವಿನಂತಿಸಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕಾರವಾರ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರನ್ನು ಸಂಗೀತವಾದ್ಯದ ಮೆರವಣ ಗೆಯ ಮೂಲಕ ಚರ್ಚಗೆ ಸ್ವಾಗತಿಸಲಾಯಿತು. ಜಿಲ್ಲೆಯ ಪ್ರಥಮ ಧರ್ಮಗುರು ಎನಿಸಿಕೊಂಡಿರುವ ಹಡಿನಬಾಳ ಸಂತ ಆಸ್ಸಿಸಿ ಚರ್ಚ ಫಾದರ್ ಎಂಟನಿ ರೊಡ್ರಗಿಸ್ರವರನ್ನು ಸಹ ಅದ್ದೂರಿ ಮೆರವಣ ಗೆ ಮೂಲಕ ವೇದಿಕೆಗೆ ಆಹ್ವಾನಿಸಲಾಯಿತು.
ಕಾರವಾರ ಧರ್ಮ ಪ್ರಾಂತ್ಯದ ಮೊನ್ಸಿಜರ್ ಸೈಮನ್ ಟೆಲ್ಲಿಸ್ರವರು ಫಾದರ್ ಎಂಟನಿರವರು ಮಾಣ ಕೊತ್ಸವ ಹಾಗೂ ಅವರ ಕಾರ್ಯವೈಖರಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕಾರವಾರ ಧರ್ಮಪ್ರಾಂತ್ಯದ ಯಾಜಕರು,ಸಮಸ್ತ ಕ್ರೈಸ್ತ ಭಾಂದವರು ಪಾಲ್ಗೊಂಡಿದ್ದರು.
Leave a Comment