ಹೊನ್ನಾವರ: “ಒರ್ವ ಕಲಾವಿದನಲ್ಲಿ ಶೃದ್ದೆ ನಿಷ್ಠೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಆತ ಶ್ರೇಷ್ಠ ಕಲಾವಿದನಾಗಿರಲು ಸಾಧ್ಯ .ಚಿಟ್ಟಾಣಿಯಂತ ಮಹಾನ್ ವ್ಯಕ್ತಿಗಳಿಂದ ವೃತ್ತಿ ನಿಷ್ಠೆ ಕಲಿಯಬೇಕು” ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಜಶೇಖರ್ ಹೆಬ್ಬಾರ್ ಅಭಿಪ್ರಾಯಿಸಿದರು.
ರಾಷ್ಟಪ್ರಶಸ್ತಿ ವಿಜೇತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಪುಣ್ಯ ಸ್ಮರಣಾರ್ತ ಚಿಟ್ಟಾಣಿಯವರ ಸ್ವಗ್ರಹವಾದ ತಾಲೂಕಿನ ಹೆರಂಗಡಿ ಗುಡ್ಡೇಕೇರಿಯ ಚಿಟ್ಟಾಣಿ ಯಕ್ಷ ಕಲಾಕೇಂದ್ರದಲ್ಲಿ À ನಡೆದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಿ ಅವರು ಮಾತನಾಡುತ್ತಿದ್ದರು. “ರಂಗ ಸ್ಥಳದಲ್ಲಿ ಚಿಟ್ಟಾಣಿಯವರು ಪಾತ್ರದ ಔಚಿತ್ಯನೀಡಿದವರು. ಅವರಂತೆ ಶ್ರದ್ದೆ ಹೊಂದುವ ನೂರಾರು ಚಿಟ್ಟಾಣಿಯಂತವರು ಮೂಡಿ ಬರಲಿ ಎಂದರು. ಎಲ್ಲಾ ವೈಮನಸ್ಸನ್ನು ಬಿಟ್ಟು ಅವರ ಯಕ್ಷ ಪರಂಪರೆಯ ಶೈಲಿಯ ಮುಂದುವರಸಿಕೊಂಡು ಹೋಗುವ ಮಹತ್ಕಾರ್ಯವನ್ನು ಕುಟುಂಬಸ್ಥರು ಮಾಡಬೇಕು ಆಮೂಲಕ ನಮ್ಮಂತಹ ಯಕ್ಷಪ್ರೀಯರನ್ನು ಸಂತುಷ್ಟಗೊಳಿಸಬೇಕು’’ ಎಂದು ಸಲಹೆ ನಿಡಿದರು.
ಹಿರಿಯ ಯಕ್ಷಗಾನ ಕಲಾವಿದ ವೇಂಕಟೇಶರಾವ್ ಜಲವಳ್ಳಿಯವರಿಗೆ ಚಿಟ್ಟಾಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವಿಕರಿಸಿ ಅವರು ಮಾತನಾಡುತ್ತಾ ಚಿಟ್ಟಾಣಿಯವರೊಂದಿಗಿನ ಒಡನಾಟ ಹಂಚಿಕೊಳ್ಳುತ್ತಾ ಅವರನ್ನು ನೆನೆದು ಭಾವುಕರಾದರು. ನಾನು ಅವರ ಹೆಸರಿನ ಈ ಪ್ರ±ಸ್ತಿÀ್ತ ಪಡೆಯುವುದಕ್ಕಾಗಿ ನನ್ನ ಜೀವ ಉಳಿದಿತ್ತೆನೋ ಎಂದು ಗದ್ಗತಿತರಾದರು. ಚಿಟ್ಟಾಣಿ ಮನೆತನದ ಮರ್ಯಾದೆ ಚಿರಸ್ಥಾಯಿಯಾಗಿಸುತ್ತಾ ಘನತೆ ,ಗೌರವ ,ಕಿರ್ತಿ ಕಾಪಾಡುತ್ತಾ ಅವರ ಹೆಸರಿಗೆ ಕಳಂಕ ಬಾರದ ರೀತಿಯಲ್ಲಿ ನಡೆಸಿಕೊಂಡು ಹೋಗಿ ಎಂದು ಕುಟುಂಬಸ್ಥರಿಗೆ ಸಲಹೆ ನೀಡಿದರು.
ಚಿಟ್ಟಣಿಯವರ ಹೆಸರಿನಲ್ಲಿ ಕಲಾಕೇಂದ್ರ ನಿರ್ಮಾಣ ಕುರಿತಂತೆ ಇತ್ತಿಚೆಗೆ ಕೆಲವು ಭಿನ್ನಾಭಿಪ್ರಾಯಗಳು ಮೂಡುತ್ತಿದೆ. ಒಡಕುಮೂಡಿಸುವವರನ್ನ ಪರಿಗಣಿಸಬೇಡಿ.ಅದೆಲ್ಲವನ್ನು ಬದಿಗೊತ್ತಿ ಅವರ ಹಾಕಿಕೊಟ್ಟ ಮಾರ್ಗದಂತೆ ಕುಟುಂಬಸ್ಥರೆಲ್ಲರು ಒಂದೂಗುಡಿಕೊಂಡು ನಡೆಯಿರಿ ದಿವಂಗತ ಚಿಟ್ಟಾಣಿಯವರ ಹೆಸರನ್ನು ಅಜರಾಮರರನ್ನಾಗಿಸಿ ಎಂದು ಚಿಟ್ಟಾಣಿ ಕುಟುಂಬ ವರ್ಗಕ್ಕೆ ಗಣ್ಯರು ಸಲಹೆ ನಿಡಿದರು.
ದಿವಗಂತ ಚಿಟ್ಟಾಣಿಯವರ ಧರ್ಮಪತ್ನಿ ಸುಶೀಲಾರವರು ಮಾತನಾಡಿ ಚಿಟ್ಟಾಣಿ ಅಭಿಮಾನಿಗಳ,ಯಕ್ಷಕಲಾಭಿಮಾನಿಗಳ ಸಹಾಯ,ಸಹಕಾರ ನಿರಂತರವಾಗಿರಲಿ ಎಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಜಿ.ಯು ಭಟ್ ಮಾತನಾಡಿ ಚಿಟ್ಟಾಣಿಯವರು ನಡೆಯಿಸಿಕೊಂಡು ಬಂದ ಘನ ಪರಂಪರೆ ಮುಂದುವರೆಸೋಣ. ಅವರು ಸಮಾಜದ ,ಕಲಾ ಪ್ರಿಯರ,ದೇಶದ ಸ್ವತ್ತು ಎಂದರು. ಕಾರ್ಯಕ್ರಮದ ಪೂರ್ವದಲ್ಲಿ ಚಿಟ್ಟಾಣಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ತಾಲೂಕಾ ಪಂಚಾಯತ್ ಸದಸ್ಯ ಲೊಕೇಶ್ ನಾಯ್ಕ , ಹೆರಂಗಡಿ ಗ್ರಾಮ ಪಂಚಾಯತ್ ಅದ್ಯಕ್ಷೆ ರಾಜೇಶ್ವರಿ ನಾಯ್ಕ, ಜಿ.ಜಿ ಸಭಾಹಿತ್,ಪಿಎಸ್ ಭಟ್ ಉಪ್ಪೋಣಿ, ರಾಜೇಶ್ವರಿ ಹೆಗಡೆ,ಚಂದ್ರಕಾಂತ್ ಕೊಚ್ರೆಕರ್,ಜಿ.ಎ ಹೆಗಡೆ ಸೊಂದಾ, ಎಮ್ ವಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಮೇರು ಕಲಾವಿದರ ಕೂಡುವಿಕೆಯಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನ ನಡೆಯಿತು.
Leave a Comment