ಹಳಿಯಾಳ : ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಬೇರೆ ಪಕ್ಷದ ಓರ್ವ ಮುಖಂಡರು ಅಲ್ಲಿಯ ಮರಾಠಾ ಸಮುದಾಯದ ಮಹಿಳೆಯರು ಮತ್ತು ಅಮಾಯಕ ಯುವಕರಿಗೆ ಪ್ರಚೋದನೆ ನೀಡಿ ಅಕ್ರಮವಾಗಿ ಶಿವಾಜಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಕಾಂಗ್ರೇಸ್ ಹಿರಿಯ ಮುಖಂಡ ಎಸ್.ಎಲ್.ಘೋಟ್ನೇಕರ ಪರೋಕ್ಷವಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ವಿರುದ್ದ ಹರಿಹಾಯ್ದ, ಮರಾಠಾ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದು ಇದನ್ನು ತಾವು ಸಹಿಸುವುದಿಲ್ಲ ಕಿಡಿಕಾರಿದರು.
ಕಳೆದ ಸೆ 18 ಮಂಗಳವಾರ ಮಧ್ಯರಾತ್ರಿ ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ನಿಯಮ ಉಲ್ಲಂಘಿಸಿ ಸುಪ್ರಿಂ ಕೋರ್ಟ ಆದೇಶವನ್ನು ಉಲ್ಲಂಘಿಸಿ ಶಿವಾಜಿ ಮೂರ್ತಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ ಅವರು ಮೂರ್ತಿ ಸ್ಥಾಪಿಸುವ ಮುಂಚೆ ಆ ಭಾಗದ ಜನರು ಮರಾಠಾ ಸಮಾಜವನ್ನು ಸಂಪರ್ಕಿಸಿ ಹಾಗೂ ನಮ್ಮನ್ನು ಸಂಪರ್ಕಿಸದೆ ಯಾವುದೇ ರೀತಿಯಲ್ಲಿ ಮಾಹಿತಿಯನ್ನು ನೀಡದೆ ಅಕ್ರಮವಾಗಿ ಮೂರ್ತೀ ಪ್ರತಿಷ್ಠಾಪಿಸಿ ಕಾನೂನು ಉಲ್ಲಂಘಟನೆ ಮಾಡಲಾಗಿದೆ ಎಂದು ಆರೋಪಗಳ ಸುರಿಮಳೆಗೈದರು.
ಮಂಗಳವಾರ ಪಟ್ಟಣದಲ್ಲಿ ಶಿವಾಜಿ ಮೂರ್ತಿ ಪ್ರಕರಣದ ಕುರಿತು ಮಾತನಾಡಿದ ಅವರು, ಕಾನೂನನ್ನು ಗೌರವಿಸುವುದು ಎಲ್ಲರ ಜವಾದ್ದಾರಿಯಾಗಿದ್ದು, ಕಾನೂನಿನ ಅರಿವು ಇದ್ದವರು ಮುಗ್ಧ ಹಾಗೂ ಅನಕ್ಷರಸ್ಥ ಮರಾಠಾ ಸಮುದಾಯವನ್ನು ಪ್ರಚೋಧಿಸುವುದರ ಮೂಲಕ ದಾರಿ ತಪ್ಪಿಸಿ ಪಟ್ಟಣದ ಐತಿಹಾಸಿಕ ಕೋಟೆ ಪ್ರದೇಶದ ವಿವಾಧಿತ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಶ್ರೀ ಛತ್ರಪತಿ ಶಿವಾಜಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ ಎಂದರು.
ಕಾನೂನಿಗೆ ಗೌರವ ನೀಡಿ ಇಗಾಗಲೇ ಅಂಬೇವಾಡಿ, ಕ್ಯಾಸರಲಾಕ್, ಕುಂಬಾರವಾಡಾ, ಮುಂಡವಾಡ, ಅಜಗಾಂವ, ದುಸಗಿ, ಕಾವಲವಾಡ ಸೇರಿದಂತೆ ತಾಲೂಕಿನ 25ಕ್ಕೂ ಅಧಿಕ ಗ್ರಾಮಗಳು ಸೇರಿದಂತೆ ದಾಂಡೇಲಿ ಮತ್ತು ಜೋಯಿಡಾ ತಾಲೂಕುಗಳಲ್ಲಿ ಅಧಿಕೃತ ಪರವಾನಿಗೆಯನ್ನು ಪಡೆದು ಆ ಮೂರ್ತಿಗಳಿಗೆ ಲಕ್ಷಾಂತರ ರೂ ಧನಸಹಾಯ ಮಾಡಿ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತೇರಗಾಂವ, ದಾಂಡೇಲಿ ನಗರ, ರಾಮನಗರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಂಬಂಧಿಸಿದ ಇಲಾಖೆಗಳ ಅನುಮತಿಯೊಂದಿಗೆ ಹಾಗು ಸರ್ವಧರ್ಮಗಳ ಸಹಕಾರದೊಂದಿಗೆ ಶಿವಾಜಿ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗುವುದು ಸಮಾಜದ ಜನರು ತಾಳ್ಮೆಯಿಂದ ಇರುವಂತೆ ಮನವಿ ಮಾಡಿದರು.
ಶಿವಾಜಿ ಮೂರ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜದ ಅಮಾಯಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲು ಕಾನೂನು ತಜ್ಞರೊಂದಿಗೆ ಮಾತುಕತೆಗಳು ಮುಂದುವರೆದಿದ್ದು, ಯಾವುದೇ ಪರಿಸ್ಥಿತಿಯಲ್ಲಿಯೂ ಸಮಾಜಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದೆಂದು ಸೃಷ್ಟ ಪಡಿಸಿ, ಇಗಾಗಲೇ ಸ್ಥಾಪನೆ ಮಾಡಲಾದ ಮೂರ್ತಿಯನ್ನು ಜಿಲ್ಲಾಡಳಿತ ಸ್ಥಳಾಂತರ ಮಾಡಲು ಕ್ರಮ ಜರುಗಿಸಬಾರದು ಎಂದು ಮನವಿ ಮಾಡಿ, ಮಾಜಿ ಶಾಸಕ ಸಮಾಜವನ್ನು ಒಡೆಯಲು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನಲ್ಲಿ ರಾಜಕಾರಣ ಮಾಡಿದವರು ಇದೀಗ ಉನ್ನತ ಸ್ಥಾನದಲ್ಲಿದ್ದಾರೆ. ಆದರೆ ಅವರಿಂದ ಸಮಾಜಕ್ಕೆ ಯಾವುದೇ ಲಾಭವಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿ, ಪ್ರಚೋಧನೆ ಕೊಟ್ಟ ಮುಖಂಡರು ಇದೀಗ ಮಾಯವಾಗಿದ್ದಾರೆ. ಮರಾಠಾ ಸಮಾಜದವರು ಪ್ರಚೋದನೆಗೆ ಕಿವಿಗೊಡದೇ, ಸಹನೆಯಿಂದ ವರ್ತಿಸಿ, ಶಿವಾಜಿ ಹೆಸರಿಗೆ ಗೌರವ ತರುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅನಿಲ್ ಚವ್ಹಾಣ, ತಾನಾಜಿ ನಾಕಾಡಿ, ಎಲ್.ಎಸ್.ಅರಶಿಣಗೇರಿ, ಕೃಷ್ಣಾ ಶಹಾಪೂರಕರ, ಅಪ್ಪಾರಾವ್ ಪೂಜಾರಿ, ಮಹಾದೇವ ನೀಲಜಕರ, ಗೋಕುಲ ಶಿರೋಡ್ಕರ,ಅಶೋಕ ಘೋಟ್ನೆಕರ ಇದ್ದರು.
Leave a Comment