ಹೊನ್ನಾವರ: ಇಂದಿನ ಶಿಕ್ಷಣ ನಮ್ಮನ್ನು ಶ್ರಮಿಕರನ್ನಾಗಿ,ದೇಶಪ್ರೇಮಿಗಳನ್ನಾಗಿ ಮಾಡಬೇಕು. ದೇಶ ಪ್ರೇಮವಿಲ್ಲದಿದ್ದರೆ ಶಿಕ್ಷಣ ಪಡೆದು ಪ್ರಯೋಜನವಿಲ್ಲ ಎಲ್ಲರು ರಾಷ್ಟ್ರಪ್ರೇಮಿಗಳಾಗಿ” ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಚಟುವಟಿಕೆಗಳು,ಕ್ರೀಡಾ ವಿಭಾಗ,ರಾಷ್ಟ್ರೀಯ ಯೋಜನೆ ಘಟಕ,ಭಾರತ್ ರೊವರ್ಸ ಮತ್ತು ರೆಂಜರ್ಸ್ ಹಾಗೂ ರೆಡ್ ಕ್ರಾಸ್ ವಿಭಾಗದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
“ಕಾಲೇಜು ಎನ್ನುವುದು ನದಿ ದಂಡೆಯಲ್ಲಿನ ಹರಳುಗಳನ್ನು ಪಾಲಿಷ್ ಮಾಡುವ ಕೇಂದ್ರವಿದ್ದಂತೆ. ಅಂತಿಮ ಸತ್ಯವನ್ನ ಹೇಳುವುದು, ಮನಸ್ಸನ್ನು ಕೇಂದ್ರಿಕರಿಸುವುದೆ ಶಿಕ್ಷಣ. ಕೇವಲ ಪದವಿಗಳೆ ಶಿಕ್ಷಣವಲ್ಲ ಪದವಿದರರೆಲ್ಲ ಶಿಕ್ಷಣವಂತರಲ್ಲ” ಎಂದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ “ಇಂದಿನ ಯುವಕ-ಯುವತಿಯರು ಮೊಬೈಲ್ ಸಂಸ್ಕ್ರತಿಗೆ ಮಾರು ಹೋಗಿದ್ದಾರೆ ಎಂದ ಅವರು ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಪಠ್ಯೆತರ ಚಟುವಟಿಕೆಗಳ ಅವಶ್ಯಕತೆ ಇದೆ ಎಂದು ಮುಂದಿನ ದಿನಗಳಲ್ಲಿ ಕಾಲೇಜುವತಿಯಿಂದ ನಡೆಯಲಿರುವ ಸಾಂಸ್ಕ್ರತಿಕ,ಕ್ರಿಡಾ ಚಟುವಟಿಕೆಗಳಿಗೆ ಶುಭ ಹಾರೈಸಿದರು. ಹೊನ್ನಾವರದಲ್ಲಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕಾಗಿ ಶತಾಯಗತಾಯ ಪ್ರಯತ್ನಿಸಿದ್ದು ತಾನು ಆದರೆ ಮಂಜೂರಾದ ಮೇಲೆ ಭಟ್ಕಳ ಕ್ಷೇತ್ರದ ಶಾಸಕರು ತಮ್ಮ ವ್ಯಾಪ್ತಿಗೆ ಒಳಪಡುತ್ತದೆ ಎಂದು ತೆಗೆದುಕೊಂಡಿದ್ದಾರೆ ಇದು ನನಗೆ ಅತಿವ ಬೇಸರ ತರಿಸಿದೆ” ಎಂದರು.
ಕಾಲೇಜು ಆಡಳಿ ಮಂಡಳಿ ವತಿಯಿಂದ ಶಾಸಕ ದಿನಕರ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಎಸ್.ಜೆ ಕೈರನ್, ಪ್ರೊಪೆಸರ್ ನಾಗರಾಜ ಎ.ಅರಸ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ವಸಂತ ರೆಡ್ಡಿ ಕೆ.ವಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ವಸಂತ ರೆಡ್ಡಿ ಕೆ.ವಿ ಮಾತನಾಡಿ ಪಠ್ಯೇತರ ಚಟುವಟಿಗಳಲ್ಲಿ ನಾಯಕತ್ವ ಗುಣವಿರುತ್ತದೆ. ಜೀವನದಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಉತ್ತಮಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಲೇಜು ವತಿಯಿಂದ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ನಮ್ಮ ಇಲಾಖೆಯಿಂದ ಸಹಾಯ ಸಹಕಾರ ಅಗತ್ಯವಿದ್ದಲ್ಲಿ ನೀಡಲು ಸಿದ್ದರಿದ್ದೇವೆ ಎಂದರು.ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವಿಕಾರ ನಡೆಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಸುಮಂಗಲಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಶಿಕ್ಷಕ ವರ್ಗ, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
Leave a Comment