ಹೊನ್ನಾವರ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಹೊನ್ನಾವರ ವತಿಯಿಂದ ವಿಷೇಶ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಪಟ್ಟಣದ ಮೂಡಗಣಪತಿ ಸಬಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಪ.ಪಂ ಅಧ್ಯಕ್ಷೆ ರಾಜಶ್ರೀ ನಾಯ್ಕ ಮಾತನಾಡಿ ಸರ್ಕಾರವು ಇಲಾಖೆಗಳ ಮೂಲಕ ನಡೆಸುವಂತಹ ಇಂತಹ ವೈದ್ಯಕೀಯ ಶಿಬಿರಗಳಲ್ಲಿ ತಂದೆ-ತಾಯಂದಿರು ವಿಷೇಶ ಅಗತ್ಯವುಳ್ಳ ತಮ್ಮ ಮಕ್ಕಳ ಜೊತೆಗೆ ಭಾಗವಹಿಸಿ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್ ನಾಯ್ಕ ಮಾತನಾಡಿ ವಿಷೇಶ ಅಗತ್ಯವುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣೆ,ಕ್ರೀಡಾಕೂಟ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಸಾಮಾನ್ಯ ಮಕ್ಕಳೊಂದಿಗೆ ಬೆರೆತು ಶಿಕ್ಷಣ ಪಡೆಯುವಂತಾಗಲು ಇಲಾಖೆ ಪ್ರಯತ್ನಿಸುತ್ತಿದೆ ಎಂದರು.
ವೇದಿಕೆಯಲ್ಲಿ ವೈದ್ಯರಾದ ಸರ್ವೆಶ್ವರ ಕುಮಾರ್,ಜಾಗ್ರತಿನ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅದ್ಯಕ್ಷೆ ಸಾಧನಾ ಬರ್ಗಿ,ಕಾರ್ಯಕ್ರಮ ಸಂಯೋಜಕಿ ದೀಪಾ ಶೆಟ್ಟಿ ಉಪಸ್ಥಿತರಿದ್ದರು. ಪ್ರಭಾರ ಸಮನ್ವಯಾಧಿಕಾರಿ ಶಂಕರ ಹರಿಕಂತ್ರ ಸ್ವಾಗತಿಸಿದರು. ಆರ್.ಎನ್ ಹಳದಿಪುರ ನಿರೂಪಿಸಿದರು. ಎಮ್.ಎನ್ ನಾಯ್ಕ ವಂದಿಸಿದರು.
ಎಲಬು ಕಿಲು ವಿಭಾಗ,ಮಕ್ಕಳ ತಜ್ಞರ ವಿಭಾಗ, ಮಾನಸಿಕ ತಜ್ಞರ ವಿಭಾಗ, ನೇತ್ರ ತಜ್ಞರ ವಿಭಾಗ,ಕಿವಿ,ಂಗಟಲು,ಮೂಗು ತಜ್ಞರ ವಿಭಾಗದ ಮೂಲಕ ವಿಷೇಶ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ನಡೆಯಿತು. ತಾಲೂಕಿನ ವಿವಿದಡೆಯಿಂದ ಪಾಲಕರು ತಮ್ಮ ವಿಷೇಶ ಅಗತ್ಯವುಳ್ಳ ಮಕ್ಕಳೊಂದಿಗೆ ಆಗಮಿಸಿ ವೈದ್ಯರಲ್ಲಿ ತಪಾಸಣೆ ನಡೆಸಿದರು.
Leave a Comment