ಹಳಿಯಾಳ:- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಾರವಾರದ ಆಝಾದ ಯುಥ್ ಕ್ಲಬ್ ಹಾಗೂ ಕಲ್ಲೂರ ಶೈಕ್ಷಣಿಕ ಸಂಸ್ಥೆಯ ಆಶ್ರಯದಲ್ಲಿ ಹಳಿಯಾಳದ ಪ್ರವಾಸಿ ಮಂದಿರದಲ್ಲಿ ವಿಶಿಷ್ಠ ಕಾರ್ಯರ್ಕಮ ನಡೆದು ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಳಿಯಾಳದ ಮೂವರು ಹಿರಿಯ ನಾಗರಿಕರಾದ ವೈದ್ಯ ಹಾಗೂ ಗಾಯಕರಾದ ಡಾ.ಚಂದ್ರಶೇಖರ ಓಶೀಮಠ, ಹಿರಿಯ ಪತ್ರಕರ್ತ ಹಾಗೂ ರಾಜ್ಯ ಪತ್ರಿಕಾ ಅಕಾಡೆಮಿ ಪುರಸ್ಕøತ ಬಿ.ಆರ್.ವಿಭೂತೆ ಮತ್ತು ನಿವೃತ್ತ ಕಾರ್ಯನಿರ್ವಾಹಕ ಇಂಜಿನೀಯರ್ ಸಿರಾಜುದ್ದಿನ ಶೇಖರವರನ್ನು ಸನ್ಮಾನಿಸಲಾಯಿತು.
ಖ್ಯಾತ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮಾಸ್ಕೇರಿ ಎಂ.ಕೆನಾಯಕ ಹಾಗೂ ಫಾದರ್ ಲಾರೆನ್ಸ ಫರ್ನಾಂಡಿಸ್ ಮಾತನಾಡಿ ಆಝಾದ ಯುಥ ಕ್ಲಬನ ಸಂಸ್ಥಾಪಕ ಹಾಗು ಖ್ಯಾತ ರಕ್ತದಾನಿ ನಜೀರಹ್ಮದ ಶೇಖ ಹಾಗು ಅವರ ಪತ್ನಿ, ಕಾರವಾರ ಕಸಾಪ ಸದಸ್ಯ ಫೈರೊಜಾ ಬೇಗಂರವರ ಸಮಾಜ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಡಾ.ಓಶೀಮರ ಹಳೆಯ ಹಿಂದಿ ಚಿತ್ರÀ ‘ಗಬನ್’ ದಲ್ಲಿಯ ದಿ. ರಫಿರವರ ಗೀತೆ “ಎಹಸಾನ ತುಮ್ಹಾರಾ ಮೆರೆ ದಿಲ್ಪೆ ಹೈ ದೋಸ್ತೊ” ಹಾಡಿ ರಂಜಿಸಿದರು.
ದಾಂಡೇಲಿಯ ಉದಯೋನ್ಮುಖ ಸಾಹಿತಿ ಶಂಕರ ಮುಂಗರವಾಡಿ ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಹಳಿಯಾಳದ ಜನತೆಯಲ್ಲಿ ಇದ್ದ ಸಂಸ್ಕಾರ ಪ್ರಶಂಸನೀಯ ಎಂದು ಹೇಳಿ ಆಝಾದ ಯುಥ ಕ್ಲಬನ ಸಾಮಾಜಿಕ ಚಟುವಟಿಕೆಗಳನ್ನು ಪ್ರಶಂಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಆರ್.ವಿಭೂತೆ ತಮ್ಮ ಆರೋಗ್ಯ ಸರಿ ಇರುವವರೆಗೆ ಸಮಾಜ ಸೇವೆ ಮಾಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಉ.ಕ ಜಿಲ್ಲಾ ಅನಿಲ ವಿತರಕರ ಸಂಘದ ಅಧ್ಯಕ್ಷ ಬಸವರಾಜ ಓಶೀಮಠ, ಕಲಾವಿದ ರವಿ ನಾಯರ, ಅಶೋಕ ಕಣಿಮೆಹಳ್ಳಿ, ಸುಮಿತ್ರಾ ಓಶೀಮಠ, ಮಲ್ಲಿಕಾರ್ಜುನ ತೋರಣಗಟ್ಟಿ ಇದ್ದರು.
Leave a Comment