ಹೊನ್ನಾವರ;
ಚತುಷ್ಪಥ ಕಾಮಗಾರಿಯಿಂದಾಗಿ ಪಟ್ಟಣದಲ್ಲಿ ಈಗಿರುವ ರಿಕ್ಷಾ ನಿಲ್ದಾಣಗಳು ನೆಲೆಕಳೆದುಕೊಳ್ಳಲಿದ್ದು ಪರ್ಯಾಯ ರಿಕ್ಷಾ ನಿಲ್ದಾಣವನ್ನು ಕಲ್ಪಿಸುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ರಿಕ್ಷಾ ಚಾಲಕರು ಮಾಲಕರ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ ನೇತ್ರತ್ವದಲ್ಲಿ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾಸರಕೋಡ ಹಿರೇಮಠ ಆಟೋ ನಿಲ್ದಾಣ, ಶರಾವತಿ ಸರ್ಕಲ್ ನಿಲ್ದಾಣ, ಕಾಮತ ಹೊಟೇಲ್ ಆಟೋರಿಕ್ಷಾ ನಿಲ್ದಾಣ, ಹೈವೇ ಆಟೋ ನಿಲ್ದಾಣ ಇದೆ ರಿಕ್ಷಾ ಓಡಿಸುವುದನ್ನೇ ಮೂಲ ಕಸುಬನ್ನಾಗಿ ನಂಬಿಕೊಂಡಿರುವ ನೂರಾರು ಮಂದಿ ಚಾಲಕರಿದ್ದು ಅವರ ಮನೆಯವರೂ ಇವರ ದುಡಿಮೆಯನ್ನೇ ಅವಲಂಬಿಸಿರುತ್ತಾರೆ ಈಗ ರಸ್ತೆ ಅಗಲೀಕರಣದಿಂದ ನೆಲೆ ಕಳೆದುಕೊಂಡರೆ ಬ್ಯಾಂಕ್ ಸಾಲ ಪಾವತಿಸುವುದು ಜೀವನ ನಿರ್ವಹಣೆ ಕಷ್ಟವಾಗಲಿದ್ದು ಮಾನವೀಯ ನೆಲೆಯಲ್ಲಿ ಈಗಿರುವ ರಿಕ್ಷಾ ನಿಲ್ದಾಣಗಳ ಪಕ್ಕದಲ್ಲಿಯೇ ರಿಕ್ಷಾ ನಿಲ್ಲಿಸುವುದಕ್ಕೆ ಅವಕಾಶಮಾಡಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಾಕಿ ಡಿಸೋಜಾ, ನಾಗರಾಜ ಮೇಸ್ತ, ಆನಂದ ಮೇಸ್ತ, ಗಣೇಶ, ದತ್ತು ನಾಯ್ಕ, ಉಮೇಶ ಸಾರಂಗ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Leave a Comment