ಹೊನ್ನಾವರ ;
ಮರಳು ಗಣೆಗಾರಿಕೆ ನಿಷೇಧವಾಗಿ 3 ರಿಂದ 4 ತಿಂಗಳು ಕಳೆದಿದೆ. ಅತ್ತ ಉದ್ಯೋಗವು ಇಲ್ಲ ಇತ್ತ ಕಟ್ಟಡ ಸೇರಿದಂತೆ ಗೃಹಬಳಕೆಗೆ ಮರಳು ಸಿಗದೇ ಪರದಾಡುತ್ತಿದ್ದಾರೆ. ಇದನ್ನು 1 ತಿಂಗಳೊಳಗೆ ಸರಿ ಪಡಿಸದಿದ್ದರೆ ಮುಂದಿನದಿನದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಕರವೇ ತಾಲೂಕ ಅಧ್ಯಕ್ಷ ಉದಯರಾಜ ಮೇಸ್ತ ಮತನಾಡಿ ಮರಳುಗಾರಿಕೆ ಮೇ ತಿಂಗಳಲ್ಲಿ ನಿಷೇದ ಮಾಡಿದ್ದು 4-5 ತಿಂಗಳಾದರು ಇನ್ನು ಆರಂಭವಾಗಿಲ್ಲ. ಇದರಿಂದಾಗಿ ಕಟ್ಟಡ ನಿರ್ಮಾಣ ಸಂಪೂರ್ಣ ಸ್ತಗಿತವಾಗಿದೆ. ನಮ್ಮ ಊರಿನಲ್ಲಿ ಮರಳುಗಾರಿಕೆಗೆ ಶರಾವತಿ ನದಿಯನ್ನು ಅವಲಂವಿಸಿದೆ. ಮಳೆಗಾಲದಲ್ಲಿ ಮೀನಿನ ಸಂತತಿ ರಕ್ಷಣೆಗಾಗಿ 45 ದಿನದ ನಿಷೇಧ ಇನ್ನು ಹಾಗೇಯೇ ಇದೆ. ಮರಳುಗಾರಿಕೆ ಉದ್ಯೋಗದಲ್ಲಿ ತೊಡಗಿಕೊಂಡ ಕಾರ್ಮಿಕರು ಕರಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯಗಳ ಕಾರ್ಮಿಕರು ಹಾಗೂ ಸಾಮಗ್ರಿಗಳ ಸಾಗಾಣಿಕೆ ವಾಹನಗಳ ಉದ್ಯೊಗದವರು ಸಹ ಕೆಲಸವಿಲ್ಲದೆ ಜೀವನ ನಡೆಸುವುದು ದುಸ್ತರವಾಗಿದೆ ಎಂದರು.
ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಸತ್ಯ ಜಾವಗಲ್ ಮಾತನಾಡಿ ಮರಳು ಗಣಿಗಾರಿಕೆ ಪ್ರಾರಂಭವಾಗದೇ ಗೃಹ ನಿರ್ಮಾಣ ಕಟ್ಟಡ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ನೆರೆಯ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸಂಘಟನೆಯವರು ಎಚ್ಚರಿಕೆಯನ್ನು ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಆ ಮಟ್ಟಕ್ಕೆ ತಲುಪುವ ಮೂದಲು ಸರ್ಕಾರ ಎಚ್ಚೆತ್ತುಕೊಮಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಮತ್ತು ಮರಳು ಗಣೆಗಾರಿಕೆಯ ನೀತಿಯನ್ನು ಸಡಿಲಗೊಳಿಸುವ ಬಡವರ ಹಿತ ಕಾಯಬೇಕು ಎಂದರು.
ಇ ಸಂದರ್ಭದಲ್ಲಿ ಗಣಪತಿ ಮೇಸ್ತ, ಕೇಶವ ಮೇಸ್ತ, ಧರ್ಮ ಅಂಬಿಗ, ವಿನಾಯಕ ಆಚಾರಿ, ರಾಘು ಮೇಸ್ತ, ಶೇಖರ್ ವಗ್ಗರ್, ಶ್ರೀಕಾಂತ ಮೇಸ್ತ, ಭಾಸ್ಕರ್ ತಾಂಡೇಲ್, ಅಜಿತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
Leave a Comment