ಹೊನ್ನಾವರ : ತಾಲೂಕಿನ ಮಾವಿನಕುರ್ವಾ ಗ್ರಾಮದ ಜಾಗೃತಾ ಶಕ್ತಿ ಕೇಂದ್ರ ಶ್ರೀ ನವದುರ್ಗಾ ದೇವಿಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ 10 ರಿಂದ 24 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಬುಧವಾರ ಪ್ರಾತಃ ಕಾಲದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಘಟಸ್ಥಾಪನೆ ಕಾರ್ಯಕ್ರಮ ಪೂರ್ವಜರ ಪದ್ದತಿಯಂತೆÉ ದೇವಸ್ಥಾನದ ಬಾಷ್ಯ ಕುಟುಂಬದ ರಂಗ ಭಟ್ಟರ ಮನೆತನದ ವೇದಮೂರ್ತಿ ಶ್ರೀ ಭಾಸ್ಕರ ಭಟ್ ಇವರು ಶರಾವತಿ ನದಿ ತಟದಲ್ಲಿ ಯಮುನಾ ಪೂಜೆಯೊಂದಿಗೆ ಕಲಶ ಭರಣ ಮಾಡಿದರು. ದೇವಿಗೆ ಧಾನ್ಯ ಆವಾಹನಾದಿ ಷೋಡಶೋಪಚಾರ ಪೂಜೆ, ನವಚಂಡಿ ಹವನ, ಅಭಿಶೇಕ, ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ, ಅನ್ನಸಂತರ್ಪಣೆ ಹಾಗೂ ಸಂಜೆ ಪ್ರವಚನ ಕಾರ್ಯಕ್ರಮ ನಡೆಯಿತು.
ನವರಾತ್ರಿ ಸಂದರ್ಭದಲ್ಲಿ ಚತುರ್ಥಿ ದಿನ ಗಣಹೋಮ, ಪಂಚಮಿ ದಿನ ಲಲಿತಾ ಪಂಚಮಿ ಹವನ, ದುರ್ಗಾ ನಮಸ್ಕಾರ, ಮಹಾನವಮಿ ಕಾರ್ಯಕ್ರಮ, 19 ರಂದು ಶುಕ್ರವಾರ ವಿಜಯದಶಮಿ ಯಂದು ಶಮೀಪೂಜನಾ, ರಜತ ಸುಖಾಸನೋತ್ಸವ, ದಸರಾ ಮಹೋತ್ಸವದ ಅಂಗವಾಗಿ ಪರಿವಾರ ಬಲಿ, ಇಡಗಾಯಿ ಸಮರ್ಪಣೆ ನಡೆಯಲಿದೆ.
ತೈಲಸೇವೆ : 24 ರಂದು ಬುಧವಾರ ಬಹಳ ಅನಾಧಿಕಾಲದಿಂದಲೂ ನಡೆದುಕೊಂಡು ಬಂದಿರುವ ತೈಲಸೇವೆ ವಿಶೇಷ ಪ್ರಾಮುಖ್ಯತೆ ಪಡೆದುಕೊಂಡು ಬಂದಿದೆ. ಕುದಿಯುವ ಎಣ್ಣ್ಣೆಯಲ್ಲಿ ಬರಿ ಕೈಯಿಂದ ವಡೆ ತೆಗೆಯುವ ಸಂಪ್ರದಾಯ ಭಕ್ತಿಪೂರ್ವಕವಾಗಿ ನಡೆಯಲಿದೆ. ಪ್ರತಿ ವರ್ಷ ಕೋಜಾಗಿರಿ ಹುಣ್ಣಿಮೆಯ ಪರ್ವಕಾಲದಲ್ಲಿ ನಡೆಯುವ ಈ ಸೇವೆಯಲ್ಲಿ 15 ದಿನ ಕಟ್ಟುನಿಟ್ಟಿನ ವೃತಾಚರಣೆಯಲ್ಲಿರುವ 20 ಕ್ಕೂ ಹೆಚ್ಚಿನ ಬ್ರಾಹ್ಮಣ ವೈದಿಕರಿಂದ ತೈಲ ಸೇವೆ ಸಲ್ಲಿಸುವುದು. ಈ ಸೇವೆಯಂದು 3 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೋಂಡು ಪುನಿತರಾಗಿರುತ್ತಾರೆ.
ವೇದಮೂರ್ತಿ ಪುರುಸೋತ್ತಮ ಭಟ್ ಹಾಗೂ ವೇದಮೂರ್ತಿ ಮುಕುಂದ ಹನುಮಂತ ಭಟ್ ಇವರ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ದೇವಿಯ ಚೌಕದಲ್ಲಿ ದರ್ಶನದಲ್ಲಿ ಸೂಚಿಸಿದಂತೆ ದೇವಿಯ ಗರ್ಭಗುಡಿಯಲ್ಲಿ “ಸುವರ್ಣ ಮಂಟಪ” ಭಕ್ತರ ಸಹಕಾರದೊಂದಿಗೆ ದೇವಿಗೆ ಪೂರ್ಣಿಮೆಯ ದಿನ ಸಮರ್ಪಿಸಲು ಸಂಕಲ್ಪಿಸಿದ್ದಾರೆ. ನವರಾತ್ರಿ ಹುಣ್ಣಿಮೆಯ ದಿನ ಮಧ್ಯಾಹ್ನ 5 ಘಂಟೆಗೆ ಸಿಂಹ ರಥೋತ್ಸವ ನಡೆಯಲಿದೆ.
Leave a Comment