ಹಳಿಯಾಳ : ಹಲವು ಅಹಿತಕರ ಘಟನೆ ನಡೆದ ಬಳಿಕ ಹಾಗೂ ಸಂಘಟನೆಗಳು, ಸಾರ್ವಜನೀಕರ ಆಕ್ರೋಶಕ್ಕೆ ಒಳಗಾದ ಹಳಿಯಾಳ ಪುರಸಭೆಯವರು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮಲಗಿ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡುತ್ತಿದ್ದ ಬಿಡಾಡಿ ದನಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿದರು.
ಕಳೆದ 2 ತಿಂಗಳ ಹಿಂದೆ ಬಿಡಾಡಿ ದನಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಗಂಭೀರ ಗಾಯಗೊಂಡು ಈವರೆಗೆ ಚೇತರಿಕೆ ಕಾಣದೆ ಲಕ್ಷಾಂತರ ರೂ. ಹಣ ಆಸ್ಪತ್ರೆಗೆ ಸುರಿಯುತ್ತಿರುವ ಘಟನೆ ನಡೆದಿದೆ ಅಲ್ಲದೇ ಶಿವಾಜಿ ವೃತ್ತದಲ್ಲಿ ಕಳೆದ 20ದಿನಗಳ ಹಿಂದೆ ಆಕಳ ಕರುವಿನ ಮೇಲೆ ಲಾರಿ ಹಾಯ್ದು ಅದು ಅಸು ನೀಗಿತ್ತು ಹಾಗೂ ಇನ್ನೊಂದು ಕರು ಗಾಯಗೊಂಡಿತ್ತು. ಹೀಗೆ ಅನೇಕ ಘಟನೆಗಳು ಅಲ್ಲದೇ ಸೋಮವಾರ ಆಕಳ ಕರುವಿನ ಕಾಲ ಮೇಲೆ ಸರ್ಕಾರಿ ಬಸ್ ಹಾಯ್ದು ಅದು ಗಂಭೀರ ಗಾಯಗೊಂಡಿತ್ತು.
ಈ ಸಂದರ್ಭದಲ್ಲಿ ಜನತೆ ಮಾನವಿಯತೇ ಮೆರೆದು ಕರುವನ್ನು ಪಶು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು ಆದರೇ ಅದು ಬೇಗ ಚೇತರಿಕೆ ಕಾಣೋ ಲಕ್ಷಣವಿರಲಿಲ್ಲ ಈ ಎಲ್ಲ ಘಟನೆಗಳಿಂದ ಆಕ್ರೋಶಗೊಂಡ ಜನತೆ ವಿವಿಧ ಸಂಘಟನೆಯವರು ಪುರಸಭೆಯ ಬೇಜವಾಬ್ದಾರಿ ವಿರುದ್ದು ಸಿಡಿದೆದ್ದು ಪ್ರತಿಭಟನೆಗೆ ತಯಾರಿ ನಡೆಸಿದ್ದನ್ನು ಅರಿತ ಪುರಸಭೆಯವರು ಬುಧವಾರ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ವಶಕ್ಕೆ ಪಡೆದು ಪುರಸಭೆಯ ಎದುರು ಕಟ್ಟಿ ಹಾಕಿದ್ದಾರೆ. ಅಲ್ಲದೇ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಮುಖ್ಯಾಧಿಕಾರಿ ಕೇಶವ ಚೌಗಲೆ ಹೇಳಿದ್ದಾರೆ.
ಅಲ್ಲದೇ ಈ ದನಗಳು ಕಸಾಯಿ(ಕಟುಕರು)ಗಳಿಗೆ ಸೇರಿದ್ದು ಎಂದು ತಿಳಿದ ಪಟ್ಟಣದ ವಿವಿಧ ಸಂಘಟನೆಯವರು ಹಾಗೂ ಸಾರ್ವಜನೀಕರು ಯಾವುದೇ ಕಾರಣಕ್ಕೂ ಈ ಜಾನುವಾರುಗಳನ್ನು ಅವರಿಗೆ ನೀಡದೆ ಗೋಶಾಲೆಗೆ ರವಾನಿಸುವಂತೆ ಆಗ್ರಹಿಸಿದ್ದಾರೆ.
Leave a Comment