ಹಳಿಯಾಳ: ಇಲ್ಲಿನ ಮಿಲಾಗ್ರಿಸ್ ಶಾಲೆಯ ಕ್ರೀಡಾಭವನದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಹಳಿಯಾಳಕ್ಕೆ ಕೀರ್ತಿ ತಂದಿದ್ದಾರೆ.
ದಿ.6 ರಿಂದ 8ರ ವರೆಗೆ ಉಡುಪಿಯ ಕಲ್ಯಾಣಪುರದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಪಂದ್ಯಾವಳಿಯಲ್ಲಿ ಪಿಯುಶ ಉದಯ ಜಾಧವ, ಮಂಜುನಾಥ ಅಶೋಕ ಚವಲಗಿ ಮತ್ತು ಸಮರ್ಥ ಸುಬ್ರಾಯ ನಾಯಕ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಪಿಯುಶ ಜಾಧವ ಮತ್ತು ಮಂಜುನಾಥ ಚವಲಗಿ ಇಬ್ಬರು ಕ್ರೀಡಾಪಟುಗಳು ಉತ್ತರಪ್ರದೇಶದ ಆಗ್ರಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಪಟ್ಟಣದ ಮಿಲಾಗ್ರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿಗಳು ಪಟ್ಟಣದ ಕ್ರೀಡಾಭವನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲೆಂದು ಕ್ರೀಡಾ ಭವನದ ಅಧ್ಯಕ್ಷ ಶ್ರೀಪತಿ ಭಟ್ ಮತ್ತು ಆಡಳಿತ ಮಂಡಳಿಯವರು ಶುಭ ಹಾರೈಸಿದ್ದಾರೆ.
Leave a Comment