ಹಳಿಯಾಳ: ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ ಕಾರ್ಯ ಶ್ಲಾಗನೀಯವಾಗಿದೆ ಮಕ್ಕಳಿಗಾಗಿ ಮಹಿಳೆಯರಿಗಾಗಿ ಇಂತಹ ಕುಗ್ರಾಮದಲ್ಲಿ ಹಮ್ಮಿಕೊಂಡಿರುವ ಈ ಶ್ರಮದಾನದ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಇದರ ಕಾರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಚೆರಿಶ್ ಸಂಸ್ಥೆಗೆ ಸಹಕಾರ ನೀಡಿ ಎಂದು ಜನಗಾ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಪವಾರ ಮಕ್ಕಳಿಗೆ ಕರೆ ನೀಡಿದರು.
ಅವರು ತಾಲೂಕಿನ ಜತಗಾ ಗೌಳಿವಾಡ ಗ್ರಾಮದಲ್ಲಿ ಚೆರಿಶ್ ಸಂಸ್ಥೆ ಮತ್ತು ಹೊಂಗಿರಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗ್ರಾಮದ ಜನರಿಗೆ ಮತ್ತು ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತಾವು ವಾಸಿಸುವ ಪ್ರದೇಶದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಮನೋದೋರಣೆಯನ್ನು ಬೆಳೆಸಲು ಶ್ರಮದಾನ ಹಾಗೂ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ರಕ್ಷಕ ಉಮೇಶ ಹೊಸಮನಿ. ಮಾತನಾಡುತ್ತಾ ಚೆರಿಶ್ ಸಂಸ್ಥೆಯು ಎಲ್ಲ ಮಹಿಳೆಯರು ಶೈಕ್ಷಣ ಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಮುಂದೆ ಬರಬೇಕು ಎಂದು ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂಸ್ಥೆಗಳಿಗೆ ಬೆಂಬಲ ನೀಡಿದರೆ ಗ್ರಾಮಗಳ ಅಭಿವೃದ್ಧಿಯಾಗುತ್ತವೆ. ಮಕ್ಕಳಿಗೆ ನೀವು ತಿನ್ನುವ ಬಿಸ್ಕೀಟ್, ಚಾಕಲೇಟ್ ಪ್ಲಾಸ್ಟಿಕ್ಗಳನ್ನು ಎಲ್ಲ ಕಡೆಯು ಬಿಸಾಕದೇ ಒಂದು ಕಡೆ ಹಾಕಿರಿ ಎಂದು ಪರಿಸರ ಸಂರಕ್ಷಣೆಯ ಕುರಿತು ಕಿವಿ ಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಚೆರಿಶ್ ಸಂಸ್ಥೆಯ ಕ್ಷೇತ್ರಾಧಿಕಾರಿ ಶಾಂತಾ. ಪಿ ದೊಡ್ಡಮನಿ ತಾಲ್ಲೂಕಿನ 24 ಹಳ್ಳಿಗಳಲ್ಲಿ 35 ಶಿಕ್ಷಾಗಳನ್ನು ನಡೆಸುತ್ತಿದೆ. ಮಹಿಳೆಯರಿಗೆ ಜೀವನೋಪಾಯ ಒದಗಿಸಿ ಕೊಡುವಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಅನುಷ್ಠಾನಗೊಳಿಸುತ್ತಿದೆ, ಇದರ ಜೊತೆಗೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಎಂದು ಸಂಸ್ಥೆಯ ಪರಿಚಯ ಮಾಡುತ್ತಾ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಬೊಮ್ಮು ಕೊಕರೆ, ಗ್ರಾಮ ಪಂಚಾಯತಿ ಸದಸ್ಯೆ ಗೋದುಬಾಯಿ ಅಡೋಳಕರ, ಅರಣ್ಯ ರಕ್ಷಕ ಶರಣು ಹಚ್ಚಾಳ, ಸೋನು ದೋಯಿಪೋಡೆ, ಬೈರು ಪಾಟೀಲ. ಮುಂತಾದವರು ಉಪಸ್ಥಿತರಿದ್ದರು.
ಹೊಂಗಿರಣ ಸಂಸ್ಥೆಯ ಮಕ್ಕಳು ಪರಿಸರ ಸಂರಕ್ಷಣೆಯ ಕುರಿತು” ಅರಿವು” ಎಂಬ ಬೀದಿ ನಾಟಕ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು, ಸಸ್ಯಗಳನ್ನು ನೆಡುವುದು, ಪ್ಲಾಸ್ಟಿಕ್ ಬಳಕೆಯಿಂದ ಆಗುವ ತೊಂದರೆಗಳನ್ನು ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವಂತೆ ಮಾಡಿದರು.
ಪರಿಸರ ಪ್ರಿಯ ಸಿದ್ದಪ್ಪ ಬಿರಾದಾರ ಮಕ್ಕಳಿಗೆ ಸ್ವಚ್ಚತೆ ಮತ್ತು ಶ್ರಮದಾನದ ಬಗ್ಗೆ ವಿಶೇಷ ಉಪನ್ಯಾಸ ಮಾಡಿದರು. ಎಲ್ಲ ಮಕ್ಕಳು ಮತ್ತು ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಯುವಕ, ಯುವತಿಯರು ಎಲ್ಲರನ್ನೂ ಗುಂಪುಗಳನ್ನಾಗಿ ಮಾಡಿ ಗ್ರಾಮದ ವಿಠ್ಠಲ ರುಕ್ಮಾಯಿ ದೇವಸ್ಥಾನದ ಸುತ್ತಲೂ ಶ್ರಮದಾನ ಮಾಡಿಸಿದರು.
ಚೆರಿಶ್ ಸಂಸ್ಥೆಯ ಸಿಬ್ಬಂದಿ ಯಶೋಧಾ ಸೋನಾರ ಸ್ವಾಗತಿಸಿದರು. ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ನೀಲಕಂಠ ಶೇಷಗಿರಿ ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ರೂಪಾ ಗೌಡ ನಡೆಸಿಕೊಟ್ಟರು.
Leave a Comment