ಹೊನ್ನಾವರ .ವಿಶ್ವ ಸೇವಾ ದಿನದ ಅಂಗವಾಗಿ ಲಯನ್ಸ್ ಕ್ಲಬ್ ಪೆದ್ರು ಪೊವೆಡಾ ವಿಶೇಷ (ವಿಕಲ ಚೇತನ) ಶಾಲೆಯ 31 ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕೆರಂ ಬೋರ್ಡನ್ನು ಉಚಿತವಾಗಿ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿಯ ಲಯನ್ಸ ಡಿ.ಸಿ. ಜ್ಯೋತಿ ಭಟ್ಟ ಮಾತನಾಡಿ, ಅಂಗವೈಕಲ್ಯ ಹೊಂದಿದ ಮಕ್ಕಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳು ಸಮಾಜಕ್ಕೆ ಹೊರೆಯಾಗದೇ ಇರುವಂತೆ ಉಪಯುಕ್ತವಾಗುವ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ಪಾಲಕರೊಂದಿಗೆ ಸಮಾಜಕ್ಕೂ ಇದೆ. ಅವರ ಬಗ್ಗೆ ಅಲಕ್ಷ ಮಾಡಬಾರದು ಸೂಕ್ತವಾದ ತರಬೇತಿ ಹಾಗೂ ಶಿಕ್ಷಣ ನೀಡಿ,ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಹೇಳಿ. ಲಯನ್ಸ ಕ್ಲಬ್ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿರುವ ಲಯನ್ಸ್ ಅಧ್ಯಕ್ಷರಾದ ರಾಜೇಶ ಸಾಲೆಹಿತ್ತಲ, ಖಜಾಂಚಿ ಯೋಗೇಶ ರಾಯಕರ ಮಾತನಾಡಿದರು.
ಲಾ. ಜೀವೋತ್ತಮ ನಾಯಕ ಬಟ್ಟೆ ವ್ಯಾಪಾರಿ ತುಳಸಿದಾಸ ಕಾಮತ,ಬಟ್ಟೆ ವ್ಯಾಪಾರಿ ತುಳಸಿದಾಸ ಕಾಮತ, ಪ್ರಾಯೋಜಕರಾಗಿ ನೆರವು ನೀಡಿದರು.
ಶಿಕ್ಷಕರು ಪ್ರಾರ್ಥಿಸಿದರು. ಪ್ರಿನ್ಸಿಪಾಲರಾದ ಪ್ಲಾವಿಯಾ ಸ್ವಾಗತಿಸಿದರು. ಶಿಕ್ಷಕಿ ಎಲಿಜಾಬೆತ್ ವಂದಿಸಿದರು. ಶಿಕ್ಷಕಿ ಪ್ರಮಿಳಾ ನಿರೂಪಿಸಿದರು.
ಮಕ್ಕಳು ಗುಂಪು ನೃತ್ಯ ಪ್ರದರ್ಶಿಸಿ ಎಲ್ಲರನ್ನು ಮನರಂಜಿಸಿದರು.
ಅನೇಕ ಲಯನ್ಸ ಸದಸ್ಯರು ಹಾಜರಿದ್ದು ಸಹಕರಿಸಿದರು.
Leave a Comment