ಹಳಿಯಾಳ: ಹಳಿಯಾಳದ ಶ್ರೀ ಕ್ಷತ್ರೀಯ ಶಿವಾಜಿ ಯುವಕ ಮಂಡಳದ ಸದಸ್ಯನಾಗಿದ್ದ ದಿ.ಕುಮಾರ ಪಾಟೀಲ್ ಸವಿ ನೆನಪಿಗಾಗಿ ಮಂಡಳಿಯಿಂದ ದಿ.15ರಂದು ಪಟ್ಟಣದ ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ “ದಾಂಡಿಯಾ ಮುಕಾಬುಲಾ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಹಾಗೂ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ತಿಳಿಸಿದ್ದಾರೆ.
ಸೋಮವಾರ ಅಕ್ಟೋಬರ್ 15ರಂದು ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ ಸಂಜೆ 6 ಗಂಟೆಗೆ ದಾಂಡಿಯಾ ಮುಕಾಬುಲಾ ಆಯೋಜಿಸಲಾಗಿದೆ. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಈ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರ ಪತ್ನಿ ರಾಧಾಬಾಯಿ ದೇಶಪಾಂಡೆ, ಎಮ್.ಎಲ್ಸಿ ಪತ್ನಿ ಲಲಿತಾ, ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಹಳಿಯಾಳ ಪುರಸಭಾ ಮಾಜಿ ಅಧ್ಯಕ್ಷರುಗಳಾದ ಪ್ರೇಮಾ ತೋರಣಗಟ್ಟಿ ಹಾಗೂ ಮಾಲಾ ಬ್ರಗಾಂಜಾ ಮತ್ತು ಜ್ಯೋತಿ ಅನಿಲ ಚವ್ವಾಣ ಅತಿಥಿಗಾಳಗಿ ಆಗಮಿಸಲಿದ್ದಾರೆ.
ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ರೂ.12,222/- ನಗದು ಸಚಿವ ದೇಶಪಾಂಡೆ ನೀಡಲಿದ್ದು. 2ನೇ ಬಹುಮಾನ ರೂ.8,888/-ಎಮ್ಎಲ್ಸಿ ಘೋಟ್ನೇಕರ ಹಾಗೂ 3ನೇ ಬಹುಮಾನ ರೂ.6,666/- ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ನೀಡಲಿದ್ದಾರೆ. ಉಚಿತ ಪ್ರವೇಶವಿರುವ ಈ ದಾಂಡಿಯಾ ಸ್ಪರ್ದೆಯ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 7899059149 ಹಾಗೂ 9620826976 ಸಂಪರ್ಕಿಸುವಂತೆ ಕೊರಿದ್ದಾರೆ.
Leave a Comment