ಹೊನ್ನಾವರ:
ಚಿಕ್ಕನಕೋಡ ಪಂಚಾಯತ ವ್ಯಾಪ್ತಿಯ ಜಂಬೆಬೆಟ್ಟದಲ್ಲಿ ಭವ್ಯಾ ಪ್ರಸನ್ನ ನಾಯ್ಕ ಎಂಬ ನವವಿವಾಹಿತೆಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಕೋಣೆಯಲ್ಲಿ ರವಿವಾರ ಮದ್ಯಾಹ್ನ ಪತ್ತೆಯಾಗಿದ್ದು ಮ್ರತಳ ತಂದೆಯು ಅಳಿಯ ಹಾಗೂ ಮಗಳ ಅತ್ತೆಯ ವಿರುದ್ದ ಹೊನ್ನಾವರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಸಾಯಿಸಿದ್ದಾರೆ ಎಂದು ದೂರುದಾಖಲಿಸಿ ಜಿಲ್ಲಾಧಿಕಾರಿಗಳು ಬರುವ ವರೆಗೂ ಶವ ಎತ್ತಲು ಬಿಡುವುದಿಲ್ಲ ಎಂದು ಪಟ್ಟುಹಿಡಿದ ಪರಿಣಾಮ ತಹಶೀಲ್ದಾರ್, ಸಿ.ಪಿ.ಐ, ಪಿ.ಎಸ್.ಐ. ಆರ್.ಐ ಸ್ಥಳಕ್ಕಾಗಮಿಸಿ ಪಂಚನಾಮೆ ನಡೆಸಿ ಇಂದು ಸೋಮವಾರ ಮದ್ಯಾಹ್ನ ಮರಣೋತ್ತರ ಪರೀಕ್ಷೆಗೆ ತಾಲೂಕಾಸ್ಪತ್ರೆಗೆ ತಂದು ತನಿಖೆ ನಡೆಸುತ್ತಿದ್ದಾರೆ.
Leave a Comment