ರಾಷ್ಟೀಯ ಸ್ವಯಂಸೇವಕ ಸಂಘ ಸಿರಸಿ ವಿಭಾಗದ ವತಿಯಿಂದ ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್ ಆಂಗ್ಲ ಆಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಾ ವರ್ಗ ತರಬೇತಿಯ ಸಮಾರೋಪ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಪ್ರಮುಖ ಬಿದಿಗಳಲ್ಲಿ ಆಕರ್ಷಕ ಪಥಸಂಚಲನದ ನಂತರ ಶಾಲಾ ಮೈದಾನದಲ್ಲಿ ಎಳೂ ದಿನಗಳ ಕಾಲ ಅಭ್ಯಾಸ ನಡೆಸಿದ ವಿವಿಧ ಪ್ರದರ್ಶನವನ್ನು ಪ್ರಾತ್ಯಕ್ಷಿತೆಯ ಮೂಲಕ ಪ್ರದರ್ಶಿಸಿದರು.
ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿಯ ಸದಸ್ಯರಾದ ಸೀತರಾಮ ನಾಯ್ಕ ಮಾತನಾಡಿ ಭರತ ಭೂಮಿ ಹಿಮಾಲಯದಿಂದ ಅರಬ್ಬಿ ಸಮುದ್ರದವರೆಗೆ ವಿಸ್ರಾರ ಹೊಂದಿದ್ದು ಹಲವಾರು ಸಂಘಟನೆಗಳು ಹೊಂದಿದೆ. ಆದರೆ ಆರ್.ಎಸ್.ಎಸ್ ನಿಶ್ವಾರ್ಥ ಮನೊಭಾವನೆಯಿಂದ ಸೇವೆಯನ್ನು ಸಲ್ಲಿಸುವುದರಿಂದ ಇದು ಇಂದು ವಿಸ್ತಾರವಾಗಿ ಬೆಳೆಯುತ್ತಿದೆ. ಇಲ್ಲಿನ ಅಭ್ಯಾಸ ವರ್ಗಗಳು, ಶಿಸ್ತು, ಹಾಗೂ ಸೇವಾ ಭಾವನೆಯನ್ನು ಬೊದಿಸುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಪ್ರಜೆಯಾಗಿ ಸೇವಾ ಮನೋಭಾವನೆ ಹೊಂದಿರುತ್ತಾನೆ ಇದು ತಮ್ಮ ಜೀವತದ ಕೊನೆಯವರೆಗೂ ರೂಡಿಸಿಕೊಳ್ಳುವಂತೆ ಕರೆ ನೀಡಿದರು.
ಮೂಖ್ಯ ವಕ್ತಾರ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಉಪನ್ಯಾಸ ನೀಡುತ್ತಾ ರಾಷ್ಟ್ರೀಯ ಸ್ವಯಂಸೇವಾ ಸಂಘಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಅಲ್ಲಿ ದೇಶದ ಕುರಿತು ಭಾವೈಕ್ಯತೆಯನ್ನು ಮೈಗೂಡಿಸಿಕೊಳ್ಳುವಂತೆ ತರಬೇತಿ ನೀಡಿದೆ. ವಿಚಾರ, ಆಚಾರ, ಉಚ್ಚಾರ ಒಂದೇ ಇದ್ದಾಗ ಮಾತ್ರ ಸಮಾಜ ಸದೃಡವಾಗಲೂ ಸಾಧ್ಯ. ಈ ಶಿಕ್ಷಾ ವರ್ಗದ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವನೆ ರೂಡಿಸಿಕೊಳ್ಳಬಹುದು. ಇಲ್ಲಿ ನಾವು ಹೊಸ ಜನ್ಮ ನೀಡಿದಂತೆ ಸ್ವಯಂ ಪ್ರೇರಣಿಯಿಂದ ಸ್ವತಂ ಕೆಲಸ ಜೊತೆ ದೇಶಕ್ಕೆ ನಿಶ್ವಾರ್ಥ ಸೇವಾ ಮನೊಭಾವನೆ ಸಲ್ಲಿಸುವ ಗುಣ ರೂಡಿಸಿಕೊಂಡಾಗ ಮಾತ್ರ ಈ ವರ್ಗಗಳು ಯಶ್ವಸಿಯಾಗಲೂ ಸಾಧ್ಯ. ಶಿಸ್ತು ಸ್ವಯಂ ಸೇವಕನ ಗುಣದಲ್ಲಿ ರಕ್ತಗತವಾಗಿ ಬರುತ್ತದೆ. ವ್ಯಕ್ತಿಗತ ಶಿಸ್ತು ಸಾಮೋಹಿಕ ಶಿಸ್ತನ್ನು ಮೈಗೊಡಿಸಿಕೊಂಡು ದೇಶದ ಸೇವೆ ಮಾಡಲು ಕಟ್ಟಿಬದ್ದರಾಗೋಣ ಇಂದು 2 ವಿಭಾಗದಿಂದ 170 ಶಿಕ್ಷಾರ್ಥಿಗಳೂ 8 ದಿನಗಳ ಕಾಲ ವಿವಿಧ ತರಬೇತಿಯನ್ನು ಪಡೆದಿದ್ದು ಅವುಗಳನ್ನು ಎಂದೆದಿಗೂ ಪಾಲಿಸೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ವರ್ಗಾಧಿಕಾರಿಗಳಾದ ದತ್ತತ್ರೇಯಾ ನಾಯ್ಕ, ರಾಮ ಗೌಡ, ಹನುಮಂತ ಶ್ಯಾನಭಾಗ ಉಪಸ್ಥಿತರಿದ್ದರು.
Leave a Comment