ಹೊನ್ನಾವರ;
ಕರ್ನಾಟಕದ ಕ್ರೈಸ್ತ ಸಮುದಾಯದ ಮಹಾಧರ್ಮಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ಪೀಟರ್ ಮಚಾದೊ ಇವರಿಗಾಗಿ ಉ.ಕ. ಜಿಲ್ಲೆಯ ಕೈಸ್ತ ಸಮುದಾಯದ ವತಿಯಿಂದ ವಿಶೇಷ ಪ್ರಾರ್ಥನಾ ಸಭೆ ಮತ್ತು ಅಭಿನಂದನಾ ಸಭೆ ದಿನಾಂಕ 25ರಂದು ಗುರುವಾರ ಬೆಳಿಗ್ಗೆ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 5ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಹೋಲಿರೋಸರಿ ಕಾನ್ವೆಂಟ್ ಶಾಲೆಯ ಆವಾರದಲ್ಲಿ ಅಂದು ಮುಂಜಾನೆ 10ಗಂಟೆಗೆ ಪ್ರಾರ್ಥನಾ ಸಭೆ ಮತ್ತು 12ಗಂಟೆಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಲಿದೆ. ಡಾ. ಇಸ್ಮಾಯಿಲ್ ತಲ್ಕಣಿ, ಫಾದರ್ ಸೈಮನ್ ಟೆಲ್ಲೀಸ್, ಪ್ರಿನ್ಸಿಪಾಲ್ ಫಾದರ್ ಜಾನ್ ಊಮನ್, ರೆ.ಫಾದರ್ ಎಲ್ಡೋಸ್ ಜಾರ್ಜ್ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಹೊನ್ನಾವರದಲ್ಲಿ ಜನಿಸಿದ ಇವರು, ಪ್ರಪ್ರಥಮವಾಗಿ ಜಿಲ್ಲೆಯಿಂದ ಮಹಾಧರ್ಮಾಧ್ಯಕ್ಷ ಸ್ಥಾನಕ್ಕೆ ಏರಿದವರಲ್ಲಿ ಮೊದಲನೇಯವರಾಗಿದ್ದು ವಿಶೇಷ ಸಂಭ್ರಮಕ್ಕೆ ಕಾರಣವಾಗಿದೆ. ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಪ್ರಮುಖರಾದ ಫಾದರ್ ಗೆಬ್ರೀಯಲ್ ಲೋಪಿಸ್, ಫಾ. ಮಿರಾಂಡ, ಫಾ. ಸಿಲ್ವನ್, ಫಾ. ರಾಜೇಶ ಡಿಸೋಜಾ ಹೇಳಿದ್ದಾರೆ.
Leave a Comment