ಹೊನ್ನಾವರ:
ಕಳೆದ 23 ವರ್ಷಗಳಿಂದ ಪ್ರತಿ ವರ್ಷವು ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವ ಹೊನ್ನಾವರದ ಕನ್ನಡಾಭಿಮಾನಿ ಸಂಘವು ಈ ಬಾರಿಯು 4 ದಿನದ ಕಾಲ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಕನ್ನಡಾಭಿಮಾನಿ ಸಂಘದ ಅಧ್ಯಕ್ಷರಾದ ಸತ್ಯ ಜಾವಗಲ್ ಮಾಧ್ಯಮಗೊಷ್ಟಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಕಾರ್ಯಕ್ರಮದ ಕುರಿತು ವಿವರಿಸಿದರು.
ನವೆಂಬರ್ 1 ಕಾರ್ಯಕ್ರಮದ ಉದ್ಘಾಟನೆಯನ್ನು ಭಟ್ಕಳ ಶಾಸಕ ಸುನೀಲ ನಾಯ್ಕ ವಹಿಸಿದರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮುಟಾ ಶಾಸಕ ದಿನಕರ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೋವಾ ಸಹಾಯುಕ್ತ ಆಯುಕ್ತರಾದ ರಾಘವೇಂದ್ರ ರಾಯ್ಕರ್, ಪಟ್ಟಣ ಪಂಚಾಯತ ಅಧ್ಯಕ್ಷೆ ರಾಜಶ್ರೀ ನಾಯ್ಕ, ಪೋಲಿಸ್ ವೃತ್ತ ನಿರಿಕ್ಷಕರಾದ ಚೆಲವರಾಜು, ಖ್ಯಾತ ವೈದ್ಯರಾದ ಡಾಕ್ಟರ್ ಆಸಿಕ್ ಹೆಗಡೆ, ಕಲ್ಪತರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಗಂಗಾಧರನ್ ಭಾಗವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಚಿತ್ರ ನಟಿ ರೇಣು ಶಿಕಾರಿ ಭಾಗವಹಿಸಲಿದ್ದಾರೆ. ನಿವೃತ್ತ ಯೋಧರಾದ ಸುಬ್ರಹ್ಮಣ್ಯ ಭಟ್, ವಾಮನ ನಾಯ್ಕ, ಇವರನ್ನು ಸನ್ಮಾನಿಸಲಾಗುತ್ತಿದ್ದು, ಇತ್ತಿಚಿಗೆ ರಸ್ತೆ ಅಫಘಾತದಲ್ಲಿ ನಿಧನರಾದ ವಿದುಷಿ ಸೌಮ್ಯ ಭಟ್ ಇವರ ಶಿಷ್ಯರಿಂದ ನೃತ್ಯ ನಮನ ನಡೆಯಲಿದೆ. ಮುರುಳಿನಾಧ ತಂಡದಿಂದ ಕೊಳಲು ವಾದನ ನಡೆಯಲಿದ್ದು ಕಾರ್ಯಕ್ರಮದ ಪೂರ್ವದಲ್ಲಿ ಫೆಂಡ್ಸ ಮೆಲೋಡಿಸ್ ತಂಡದಿಂದ ರಸಮಂಜರಿ ನಡೆಯಲಿದೆ.
2 ನೇ ದಿನ ಸಭಾ ಕಾರ್ಯಕ್ರಮವನ್ನು ಭಟ್ಕಳ ಡಿವೈಎಸ್ಪಿ ವೆಲೆಂಟಿನ್ ಡಿಸೋಜಾ ಉದ್ಘಾಟಿಸಿದರೆ ಇಡಗುಂಜಿ ಕ್ಷೇತ್ರ ಧರ್ಮದರ್ಶಿ ಡಾ. ಜಿ.ಜಿ. ಸಭಾಹಿತ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಲಯನ್ಸ ಮಾಜಿ ಜಿಲ್ಲಾ ಗೌರ್ನರ್ ಗಣಪತಿ ನಾಯಕ , ಸಹಾಯಕ ಆಯುಕ್ತರಾದ ಸಾಧಿಕ್ ಅಹ್ಮದ್, ಎಮ್.ಪಿ.ಇ. ಸೊಸೈಟಿಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಮ್.ಜಿ.ಹೆಗಡೆ, ಗ್ಲೊರಿ ವ್ಯಾಯಮ ಶಾಲೆಯ ಮಾಲೀಕರಾದ ಗ್ಲೂರಿ ಆರ್ ಮಿರಾಂಡಾ ವಹಿಸಲಿದ್ದಾರೆ. ಈ ದಿನ ರಾಷ್ಟ್ರೀಯ ದೇಹದಾಡ್ಯ ತೀರ್ಪುದಾರರಾದ ಜಿ.ಡಿ.ಭಟ್, ಸಾಹಸಿ ಮೀನುಗಾರ, ಕೇಶವ್ ತಾಂಡೇಲ್, ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಕ್ರೀಡಾಪಟು ರೋಷನ್ ಭಂಡಾರಿ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ದಿನ ಜಿಲ್ಲಾ ಮಟ್ಟದ ದೇಹದಾಢ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ಸಭಾ ಕಾರ್ಯಕ್ರಮದ ನಂತರ ನೃತ್ಯ ಹಾಗೂ ಮನೊರಂಜನಾ ಕಾರ್ಯಕ್ರಮ ನಡೆಯಲಿದೆ.
3 ನೇ ದಿನ ಕಾರ್ಯಕ್ರಮವನ್ನು ಕಾರವಾರ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಲಿದ್ದು ಹಿರಿಯ ಉದಯವಾಣಿ ಪತ್ರಿಕೆ ಛಾಯಗ್ರಾಹಕರಾದ ಅಷ್ಟೋ ಮೋಹನ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ, ಹಿರಿಯ ರಾಜಕೀಯ ಧುರೀಣರಾದ ಗಣಪಯ್ಯ ಗೌಡ, ಶ್ರೀ ಕುಮಾರ ಸಮೋಹ ಸಂಸ್ಥೆಯ ಮಾಲೀಕರಾದ ವೆಂಕಟಮಣ ಹೆಗಡೆ, ಬಿ.ಎಸ್.ಎನ್.ಎಲ್ ಉಪವಿಭಾಗಿಯ ಅಭಿಯಂತರಾದ ನೀಲಂ ಪಾಯ್ದೆ, ವಿಶೇಷ ಆಮಂತ್ರಿತರಾಗಿ ಖ್ಯಾತ ಚಿತ್ರನಟ ಸುರೇಶ ರೈ ಭಾಗವಹಿಸಲಿದ್ದಾರೆ.
ಈ ದಿನ ಕಿರುತರೆಯಲ್ಲಿ ಸಾಧನೆ ಮಾಡುತ್ತಿರುವ ನಟ ಲಕ್ಷ್ಮೀಶ ಭಟ್ , ಗುರುಕುಲದ ಮುಖ್ಯೊಪಧ್ಯಾಯರಾದ ಶ್ರೀ ಮಹೇಶಪ್ಪ ಇವರನ್ನು ಸನ್ಮಾನಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವು ಎಸ್.ಎಸ್.ಎಲ್.ಸಿ ಕನ್ನಡ ಶೇ 100 ಅಂಕ ಪಡೆದ ತಾಲೋಕಿನ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು.
ಜಿಲ್ಲೆಯೆಲ್ಲಡೆಯಿಂದ ಆಡಿಷನ್ ಮೂಲಕ ಆಯ್ಕೆಯಾಗಿ ಅಂತಿಮ ಸುತ್ತಿಗೆ ತಲುಪಿದ ಕರಾವಳಿ ಕನ್ನಡ ಕೋಗಿಲೆಯ ಅಂತಿಮ ಹಣಾಹಣಿ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಇನ್ಪಿನಿಟಿ ಡಾನ್ಸ ಕ್ರ್ಯೂ ತಂಡದಿಂದ ಮನೋರಂಜಾನಾ ಕಾರ್ಯಕ್ರಮ ನಡೆಯಲಿದ್ದು ನಂತರ ಮಹೇಶ ಆಚಾರ್ಯ ತಂಡವರಿಂದ ಸಂಗೀತ ಸಂಜೆ ನಡೆಯಲಿದೆ.
ಕೊನೆಯ ದಿನ ಕಾರ್ಯಕ್ರಮವನ್ನು ಭಾರತದ ಉದ್ಯೋಗರತ್ನ ಪ್ರಶಸ್ತಿ ಪುರಸ್ಕøತರಾದ ಯಶೋಧರ ನಾಯ್ಕ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ್ಯೂ ಎಜುಕೇಶನ್ ಸಂಸ್ಥೆಯ ಜಗದೀಶ ಪೈ, ಅಂತರಾಷ್ಟ್ರೀಯ ಮತ್ಸೋಧ್ಯಮಿಯಾದ ಸ್ಟೀವನ್ ಡಿಸೋಜಾ, ಖ್ಯಾತ ವೈದ್ಯರಾದ ಡಾಕ್ಟರ್ ಚಂದ್ರಶೇಖರ ಶೆಟ್ಟಿ, ಉದ್ಯಮಿ ರವಿಕುಮಾರ ಶೆಟ್ಟಿ ಪಾಲ್ಗೋಳ್ಳಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಚಿತ್ರ ನಟಿ ಕುಮಾರಿ ಸುರೇಖಾ ಭಾಗವಹಿಸಲಿದ್ದಾರೆ. ಈ ದಿನ ಪ್ಯಾರ್ ಏಷ್ಯಾ ಒಲಂಪಿಕ್ಸನಲ್ಲಿ ಚಿನ್ನದ ಪದಕ ವಿಜೇತ ಕಿಶನ್ ಗಂಗೊಳ್ಳಿ, ಅಂತರಾಷ್ಟ್ರೀಯ ಕ್ರೀಡಾಪಟು ರಾಜೇಶ ಮಡಿವಾಳ, ಕಾರ್ಯನಿರ್ವಾಹಕ ಅಭಿಯಂತ ಸದಾನಂದ ಸಾಳೆಹಿತ್ತಲ್ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ರಾಜ್ಯಮಟ್ಟದ ಆಯ್ದ ಗುಂಪು ನೃತ್ಯ ಸ್ಪರ್ದೇ ಡಾನ್ಸ ಕರ್ನಾಟಕ ಡಾನ್ಸ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ನಂತರ ವಾಕ್ ಚತುರ ನಾರಾಯಣ ಶಾಸ್ತ್ರಿ ವಾಗ್ ಜರಿ, ಕರ್ನಾಟಕ ದರ್ಶನ ಕಾರ್ಯಕ್ರಮ ನಡೆಯಲಿದೆ. ನಂತರ ರಾಗಶ್ರೀ ತಂಡದಿಂದ ನಾದಝರಿ, ಸುದೇಶ ಮಂಗಳೂರು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. 4 ದಿನಗಳು ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳಿಯ ಕಲಾವಿದರಿಗೆ ಪೋತ್ಸಾಹ ನೀಡುವ ಉದ್ದೇಶದಿಂದ ಹೆಚ್ಚಿನ ಅವಕಾಶ ನೀಡಲಾಗುವುದು ಸ್ಪರ್ಧಾವಿವರಣೆಯೊಂದಿಗೆ ನವೆಂಬರ್ 31ರೊಳಗೆ ಹೆಸರನ್ನು ನೊಂದಾಯಿಸಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಉದಯರಾಜ ಮೇಸ್ತ, ಗೌರವಾಧ್ಯಕ್ಷರಾದ ಎಸ್. ಜೆಕೈರನ್, ಗೌರವ ಸದಸ್ಯರಾದ, ಜಿ.ಟಿ.ಪೈ, ಡಾಕ್ಟರ ಚಂದ್ರಶೇಖರ ಶೆಟ್ಟಿ, ಡಾಕ್ಟರ್ ಆಶಿಕ್ಕುಮಾರ್ ಹೆಗಡೆ, ಸದಸ್ಯರಾದ ಸುದಾಕರ ಹೊನ್ನಾವರ, ಗಣಪತಿ ಮೆಸ್ತ, ವಿನಾಯಕ ಆಚಾರಿ, ರಾಜು ಮಾಳಗಿಮನಿ, ಭಾಸ್ಕರ್ ತಾಂಡೇಲ್, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Leave a Comment