ಹೊನ್ನಾವರ , “ಸಂಪೂರ್ಣ ಕಲೆ ಎಂದರೆ, ಯಕ್ಷಗಾನ ” ಪೌರಾಣಿಕ ಯಕ್ಷಗಾನಗಳಿಂದ ಧರ್ಮ ಶಾಸ್ತ್ರದ ಚಿಂತನೆ ಹಾಗೂ ಅರಿವು ಉಂಟಾಗುತ್ತದೆ.ಶಾಸ್ತ್ರದ ಕಠಿಣವಾದ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೇಲಸ ಯಕ್ಷಗಾನದಿಂದ ಮಾತ್ರ ಸಾಧ್ಯ. ಎಂದು ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ(ರಿ) ಮತ್ತು ಸಿಲೇಕ್ಟ್ ಫೌಂಡೇಶನ್(ರಿ) ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಪೂರ್ಣಿಮೆ 2018ರ ಸಮಾರೋಪ ಸಮಾರಂಭದಲ್ಲಿ – ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ತಮ್ಮ ಆಶಿರ್ವಚನದಲ್ಲಿ ನುಡಿದರು.
ಕಾರ್ಯಕ್ರಮದಲ್ಲಿ ದಿ. ವೇಧಮೂರ್ತಿ ಗಣೇಶ ಭಟ್ಟರ ಸ್ಮರಣಾರ್ಥ ನೀಡುವ ಯಕ್ಷಂಜನೇಯ ಪ್ರಶಸ್ತಿಯನ್ನು ಖ್ಯಾತ ಭಗವತರಾದ ಕಪ್ಪೇಕೇರಿ ಸುಬ್ರಾಯ ಭಾಗವತರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ ವಿ ಯಾಜಿ ವಕೀಲರು ಧಾರವಾಡ, ಸತೀಶ್ ಭಟ್ಟ ವಕೀಲರು ಹೊನ್ನಾವರ, ಒಡ್ಡೋಲಗ ಸಂಸ್ಥೆಯ ಸ್ಥಾಪಕರಾದ ಗಣಪತಿ ಹೆಗಡೆ ಹಿತ್ತಲಕೈ ಉಪಸ್ಥಿತರಿದ್ದರು.
ನಾಗರಾಜ ಹೆಗಡೆ ಕಾಸ್ಕಂಡ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಭಟ್ಟರು ಬಂಗಾರಮಕ್ಕಿ ಇವರ ನೇತೃತ್ವದಲ್ಲಿ ಹಾಗೂ ಸಂಯೋಜನೆಯಲ್ಲಿ ಹದಿನೈದು ದಿನಗಳ ಯಕ್ಷಪೂರ್ಣಿಮೆ ಕಾರ್ಯಕ್ರಮ ಜರುಗಿತು.
Leave a Comment