ಹೊನ್ನಾವರ: “ಯಕ್ಷಗಾ£ ಎನ್ನುವುದು ಪರಿಪೂರ್ಣ ಕಲೆ’’ ಯಕ್ಷಕಲೆ ತನ್ನ ಚೌÀಕಟ್ಟನ್ನು ಮೀರಬಾರದು.ಮಿರಿದ್ದಲ್ಲಿ ಇದು ಸರ್ವಾಂಗ ಶ್ರೇಷ್ಠ ಕಲೆಯಾಗಿ ಉಳಿಯುವುದಿಲ್ಲ. ಯಕ್ಷ ಕಲಾವಿದನಾದವನು ಕಲೆಯ ಸತ್ವ-ತತ್ವ ಊಳಿಸುವ ಕೆಲಸ ಮಾಡಬೇಕು. ಕಲೆಯನ್ನು ಮಾರಿಕೊಳ್ಳುವ ಕೆಲಸ ಮಾಡಬಾರದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಪ್ರವಚನದಲ್ಲಿ ಅಭಿಪ್ರಾಯಿಸಿದರು.
ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಸಿಲೇಕ್ಟ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷ ಪೂರ್ಣಿಮೆ 2018ರ ಸಮಾರೋಪ ಸಮಾರಂಭದ ತಮ್ಮ ಪ್ರವಚನದಲ್ಲಿ ಅವರು ತಿಳಿಸಿದರು. “ಯಕ್ಷಗಾ£ ಎನ್ನುವುದು ಪರಿಪೂರ್ಣ ಕಲೆ’’ ಪೌರಾಣಿಕ ಯಕ್ಷಗಾನಗಳಿಂದ ಧರ್ಮ ಶಾಸ್ತ್ರದ ಚಿಂತನೆ ಹಾಗೂ ಅರಿವು ಉಂಟಾಗುತ್ತದೆ.ಶಾಸ್ತ್ರದ ಕಠಿಣವಾದ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಯಕ್ಷಗಾನದಿಂದ ಮಾತ್ರ ಸಾಧ್ಯ. ಇಂದು ಯುವ ಕಲಾವಿದರು ಯಕ್ಷಗಾನದಲ್ಲಿ ಎಡವುತ್ತಿದ್ದಾರೆ. ಹಿರಿಯ ಕಲಾವಿದರು ಕಿರಿಯ ಕಲಾವಿದರಿಗೆ ಎಚ್ಚರಿಸುವ ಕೆಲಸ ಮಾಡಬೇಕು. ಎಂದು ಸಂದೆಶ ರವಾನಿಸಿದರು. ್ಲ ಹಿರಿಯ ಕಲಾವಿದರ ಅನುಕರಣೆಯಾಗುತ್ತಿದೆ. ಅನುಕರಣೆಗಿಂತ ಅವರ ಒಳತತ್ವ ಅನುಸರಿಸುವುದು ಮುಖ್ಯ..ಕೇವಲ ಪ್ರಶಸ್ತಿಗಾಗಿ ದುಡಿಯದೇ ಕಲೆಯ ಉಳಿಯುವಿಕೆಗಾಗಿ ದುಡಿಯುವ ಎಲೆಮರೆಯ ಪ್ರತಿಭೆಗಳಿಗೆ ಇಲ್ಲಿ ಸನ್ಮಾನವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದಿವಂಗತ ವೇಧಮೂರ್ತಿ ಗಣೇಶ ಭಟ್ಟರ ಸ್ಮರಣಾರ್ಥ ನೀಡುವ ಯಕ್ಷಾಂಜನೇಯ ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ಕಪ್ಪೇಕೇರಿ ಸುಬ್ರಾಯ ಭಾಗವತರಿಗೆ ನೀಡಿ ಗೌರವಿಸಲಾಯಿತು.ಸನ್ಮಾನ ಸ್ವಿಕರಿಸಿ ಅವರು ಮಾತನಾಡಿ ಇದು ನನ್ನ ಜೀವನದಲ್ಲಿ ಮರೆಯಲಾಗದ ಅವಿಸ್ಮರಣಿಯ ದಿನ.ನನ್ನಂತೇಯೆ ಇನ್ನು ಅನೇಕ ಕಲಾವಿದರಿಗೆ ಶ್ರೀಕ್ಷೇತ್ರದಿಂದ ಸನ್ಮಾನ ದೊರೆಯುವಂತಾಗಲಿ ಎಂದರು. ಇಂದು ಪ್ರೇಕ್ಷಕರ ಅಭಿರುಚಿಗೆ ತಕ್ಕ ಹಾಗೇ ಯಕ್ಷ ಪ್ರಸಂಗಗಳು ನಡೆಯುತ್ತಿದೆಯೆ ಹೊರತು ಯಕ್ಷಗಾನ ಉಳಿವಿಗಾಗಿ ಶ್ರಮಪಡುವವರು ಕಡಿಮೆಯಾಗಿದೆ ಎಂದು ಕೇದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿತಿಯಾಗಿ ಉಪಸ್ಥಿತರಿದ್ದ ಧಾರವಾಡ ಹೈಕೊರ್ಟ ವಕೀಲರಾದ ಎನ್ ವಿ ಯಾಜಿ ಮಾತನಾಡಿ 15ದಿನಗಳ ಕಾಳ ಯಕ್ಷಗಾನ ನಡೆಸುವುದೆಂದರೆ ಅದು ಯಕ್ಷ ದಾಸೋಹವೇ ಸರಿ, ಈ ಕ್ಷೇತ್ರದಲ್ಲಿ ಅನ್ನದಾಸೋಹದ ಜೊತೆಗೆ ಜ್ಞಾನ ದಾಸೊಹವು ನಡೆಯುತ್ತಿದೆ. ಇಂದು ಯಕ್ಷಗಾನ ವಾಣಿಜ್ಯಿಕರಣವಾಗುತ್ತಿದೆ. ಈ ನಿಟ್ಟಿನಲ್ಲಿ ಕಲೆಯನ್ನು ಪ್ರೋಕ್ಷಣೆ ಮಾಡುವ ಜವಬ್ದಾರಿ ಎಲ್ಲರ ಮೇಲಿದೆ. ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರದಲ್ಲಿ ತಾಳಮದ್ದಲೆಯಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ವಕೀಲರಾದ ಸತೀಶ್ ಭಟ್ಟ ಹೊನ್ನಾವರ, ಒಡ್ಡೋಲಗ ಸಂಸ್ಥೆಯ ಸ್ಥಾಪಕರಾದ ಗಣಪತಿ ಹೆಗಡೆ ಹಿತ್ತಲಕೈ ಉಪಸ್ಥಿತರಿದ್ದರು.
ನಾಗರಾಜ ಹೆಗಡೆ ಕಾಸ್ಕಂಡ ಕಾರ್ಯಕ್ರಮ ನಿರೂಪಿಸಿದರು.ಗಣಪತಿ ಹೆಗಡೆ ಹಡಿನಬಾಳ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಜಲಸ್ಥಂಭನ-ಜಾಂಬವತಿ ಕಲ್ಯಾಣ ಯಕ್ಷಗಾನ ನಡೆಯಿತು.
Leave a Comment