ಹೊನ್ನಾವರ:
ಸಾಮಾಜಿಕ ಜಾಲತಾಣದಲ್ಲಿ ಸದಾ ಕಾಲ ಮುಳುಗಿರುವ ಇಂದಿನ ಯುವ ಸಮುದಾಯವನ್ನು ಕ್ರೀಡೆಯಲ್ಲಿ ಆಸಕ್ತಿ ಮೂಡಿಸುವಂತೆ ಮಾಡುವ ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೆಮ್ಮೆಯೆನಿಸುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಮಂಡಳಿಯ ಸದಸ್ಯರಾದ ಡಾ.ರಮೇಶ ನಾಯಕ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಎಸ್.ಡಿ.ಎಂ.ಪದವಿ ಮಹಾವಿದ್ಯಾಲಯ ಹೊನ್ನಾವರ ಇವರ ಆಶ್ರಯದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆಯುವ 3 ದಿನಗಳ ವಿಶ್ವವಿದ್ಯಾಲಯ ಮಟ್ಟದ ಅಂತರ ಮಹಾವಿದ್ಯಾಲಯದ 68ನೇ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೊದಲಿಗೆ ಕ್ರೀಡಾಧ್ವಜರೋಹನ ನೇರಿವೇರಿಸಿ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನದ ಮೂಲಕ ಗೌರವ ವಂದನೆ ಸ್ವೀಕರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲವು ಸಹಜ ಭಾಗವಹಿಸುವುದು ಮುಖ್ಯ. ಹಸರಿನ ಸುಂದರ ಪರಿಸರದಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟ ನಡೆಯುತ್ತಿರುವುದು ಇನ್ನೊಂದು ಹೆಮ್ಮೆಯಾಗಿದ್ದು ನನಗೂ ಕೂಡಾ 3 ದಿನ ಇಲ್ಲಿಯೇ ಇದ್ದು ಕ್ರೀಡೆಯನ್ನು ನೋಡಬೇಕೆಂಬ ಕೂತೂಹಲ ಉಂಟಾಗಿದೆ. ಇಂದಿನ ಯುವ ಪೀಳಿಗೆ ಕ್ರೀಡಾಂಗಣದಲ್ಲಿ ಕ್ರೀಡೆಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗಿರುತ್ತಿದ್ದು ದುದೈವ. ಅದರಿಂದ ಹೊರಬಂದು ಇಂತಹ ಸುಂದರ ಪರಿಸರದಲ್ಲಿ ಕ್ರೀಡಾಕೂಟವನ್ನು ವಿಶ್ವವಿದ್ಯಾಲಯ ಪ್ರತಿವರ್ಷ ಆಯೋಜಿಸುತ್ತಾ ಅನೇಕ ಕ್ರೀಡಾಪ್ರತಿಭೆಗಳನ್ನು ಹೊರತಂದಿದೆ ಎಂದರು.
ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾವಿಭಾಗದ ನಿರ್ದೇಶಕರಾದ ಡಾ.ಬಿ.ಎಂ.ಪಾಟೀಲ್ ಮಾತನಾಡಿ ಪ್ರಾರಂಭದಲ್ಲಿ ಬೀದರ್ನಿಂದ ಭಟ್ಕಳದವರೆಗಿನ ವಿಶ್ವವಿದ್ಯಾಲಯದ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದ ಕ್ರೀಡಾಕೂಟ ಇಂದು ವಿಶ್ವವಿದ್ಯಾಲಯದ ವ್ಯಾಪ್ತಿ ವಿಸ್ತಾರವಾದಂತೆ 4 ಜಿಲ್ಲೆಗಳ ವ್ಯಾಪ್ತಿಯ ಕಾಲೇಜಿನವರು ಭಾಗವಹಿಸುವಂತಾಯಿತು, ಇದೀಗ 67 ವರ್ಷಗಳು ಕಳೆದಿದ್ದು 68ನೇ ವರ್ಷದ ಕ್ರೀಡಾಕೂಟ ಇದಾಗಿದೆ, ಇತ್ತಿಚಿನ ವರ್ಷದಲ್ಲಿ ವಿಶ್ವವಿದ್ಯಾಲಯದಲ್ಲಿಯೇ ಆಯೋಜಿಸಲ್ಪಡುವ ಕ್ರೀಡಾಕೂಟ ಈ ಬಾರಿ ಹೊನ್ನಾವರದಲ್ಲಿ ಆಯೋಜನೆ ಆಗಿರುವುದು ಇನ್ನೊಂದು ವಿಶೇಷ. ರಾಜ್ಯದಲ್ಲಿಯೇ ಪ್ರಥಮ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆ ಹೊಂದಿರುವ ಕರ್ನಾಟಕ ವಿಶ್ವವಿದ್ಯಾಲಯ ಹಲವಾರು ಸಾಧನೆಗಳ ಮೂಲಕ ಪ್ರಸಿದ್ದತೆಯನ್ನು ಹೊಂದಿದೆ. ಈ ಕ್ರೀಡಾಂಗಣದಲ್ಲಿ ನಡೆಯುವ ಸ್ಫರ್ಧೆಯಲ್ಲಿ ವಿಜಯಿಯಾದ ವಿದ್ಯಾರ್ಥಿಗಲು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದವರೆಗೂ ಸಾಧನೆ ಮಾಡಲಿ ಆ ರೀತಿಯ ಪೂರ್ವಸಿದ್ದತೆಯು ಇಲ್ಲಿಂದಲೆ ಸಿಗಲಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅಥ್ಲೇಟಿಕ್ ತರಬೇತಿದಾರರಾದ ಡಾ.ಶಂಕುತಲಾ ಹೀರೇಮಠ, ಕುಮುಟಾ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ರಾಜೇಶ ಮಡಿವಾಳ, ಹಾಗೂ ಕ್ರೀಡಾಂಗಣ ನವೀಕರಣ ಮಾಡಿದ ಗುತ್ತಿಗೆದಾರರಾದ ಶ್ರೀಕಾಂತ ಮಡಿವಾಳ ಇವರನ್ನು ಸನ್ಮಾನಿಸಲಾಯಿತು. ಪ್ರತಿ ಬಾರಿ ವಿಶ್ವವಿದ್ಯಾಲಯದ ವತಿಯಿಂದ ನೀಡುವ ಕ್ರೀಡಾ ಉತ್ತೇಜಕ ಪ್ರಶಸ್ತಿಯನ್ನು ಕಳೆದ ಬಾರಿ ಸಾಧನೆ ತೋರಿದ ಕಾಲೇಜುಗಳಿಗೆ ನೀಡಲಾಯಿತು.
ಕಾರ್ಯಕ್ರಮದ ಕುರಿತು ಸಂತಸ ಹಂಚಿಕೊಂಡ ಎಂ.ಪಿ.ಇ ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಹಲವಾರು ಆತಂಕಗಳ ಮಧ್ಯೆ ಹಲವು ವರ್ಷದ ಕನಸು ಇಂದು ನಿವಿಘ್ನವಾಗಿ ನನಸಾಗಿದೆ. ನಮ್ಮ ಕಾಲೇಜಿನಲ್ಲಿ ಈ ಹಿಂದೆ ಜಿಲ್ಲಾ ಮಟ್ಟದ ಯುವಜನೊತ್ಸವ ಮಾಡಿ ಅನುಭವವು ಇರುವುದರಿಂದ ಇದು ಅಷ್ಟೊಂದು ಕಷ್ಟವಾಗಿರಲಿಲ್ಲ. ಈ ಜವಾಬ್ದಾರಿಯನ್ನು ಪ್ರಾಚಾರ್ಯ ಹಾಗೂ ನಮ್ಮ ಉಪನ್ಯಾಸಕ ವೃಂದ ಅತ್ಯುತ್ತಮವಾಗಿ ನಿರ್ವಹಿಸಿದೆ ಅಂದರೆ ತಪ್ಪಾಗಲಾರದು,. ನಮ್ಮ ಸಂಸ್ತೆಯ ವಿದ್ಯಾರ್ಥಿಗಳು ಈ ಬಾರಿ ಯುವಜನೊತ್ಸವದಲ್ಲಿಯೂ ವಿರಾಗ್ರಣಿಯು ಮೂಡಿಗೇರಿಸಿಕೊಂಡಿರುದರಿಂದ ಮುಂದಿನವರ್ಷದ ಯುವಜನೊತ್ಸವ ನಮ್ಮ ಕಾಲೇಜಿನಲ್ಲಿ ಆಯೋಜಿಸಿದರೆ ನಾವು ಅದಕ್ಕೂ ಸಿದ್ದರಿದ್ದವೆ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಪಿ.ಕರ್ಕಿ, ಕ್ರೀಡಾ ತರಬೇತಿದಾರಾದ ಡಾ.ಶಕುಂತಲಾ ಹಿರೇಮಠ, ಕಾಲೇಜು ಪ್ರಾಚಾರ್ಯರಾದ ವಿಜಯಲಕ್ಷ್ಮಿ ನಾಯ್ಕ, ಸಂಸ್ಥೆಯ ಸದಸ್ಯರಾದ ಉಮೇಶ ನಾಯ್ಕ, ಎಸ್.ಎಂ.ಭಟ್, ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾದ ಆರ್.ಕೆ ಮೇಸ್ತ ಉಪಸ್ಥಿತರಿದ್ದರು.
Leave a Comment