ಹೊನ್ನಾವರ : ತಾಲೂಕಿನ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ಶ್ರೀ ನಾರಾಯಣ ಸಾಹಿತ್ಯಿಕ ಸಾಂಸ್ಕøತಿಕ ಸಂಘಟನೆಯ ವತಿಯಿಂದ ‘ದಸರಾ ಕಾವ್ಯೋತ್ಸವ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ತಾಲೂಕಿನ ಹಿರಿಯ ಕವಿ ವೇದಮೂರ್ತಿ ಕೃಷ್ಣ ಶರ್ಮರು ಉದ್ಘಾಟಿಸಿ ಸಂಘಟನೆಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಅಂಜುಮನ್ ಕಾಲೇಜಿನ ಉಪನ್ಯಾಸಕರಾದ ಪ್ರೊ.ಆರ್.ಎಸ್.ನಾಯಕ ಉತ್ತಮ ಕಾವ್ಯದ ಲಕ್ಷಣಗಳನ್ನು ವಿವರಿಸುತ್ತ ತಮ್ಮದೊಂದು ಕವನವನ್ನು ವಾಚಿಸಿದರು.
ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪ್ರೊ. ನಾಗರಾಜ ಹೆಗಡೆ ಅಪಗಾಲ ತಮ್ಮ ‘ಪಟಾಕಿ’ ಕವನವಾಚಿಸಿ ಮಾತನಾಡಿದರೆ, ಹಿರಿಯ ಕವಿ ಡಾ. ಇಸ್ಮಾಯಿಲ್ ತಲಕಣಿ ಕವಿಗಳನ್ನು ಅಭಿನಂದಿಸಿ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಸುರೇಶ ನಾಯ್ಕ ಕವಿಗಳು ವಾಚಿಸಿದ ಎಲ್ಲ ಕವಿತೆಗಳನ್ನು ವಿಶ್ಲೇಷಿಸಿ ಹಿರಿಯ, ಕಿರಿಯ ಕವಿಗಳು ತಮ್ಮ ಗಟ್ಟಿ ಕವಿತೆಗಳ ಮೂಲಕ ಕವಿಗೋಷ್ಠಿಯನ್ನು ನಿಜವಾಗಿಯೂ ಉತ್ಸವವಾಗಿಸಿದ ಬಗ್ಗೆ ಧನ್ಯವಾದ ಸಲ್ಲಿಸಿದರು.
ಕವಿಗೋಷ್ಠಿಯಲ್ಲಿ ಚೆನ್ನಕೇಶವ ಶಾಸ್ತ್ರಿ , ಪಿ.ಆರ್.ನಾಯ್ಕ, ಕೃಷ್ಣಮೂರ್ತಿ ಹೆಬ್ಬಾರ, ಮಾಸ್ತಿ ಗೌಡ, ಎಮ್.ಜಿ.ನಾಯ್ಕ, ಗಣಪತಿ ಕೊಂಡದಕುಳಿ, ರತ್ನಾ ಪಟಗಾರ, ಜಿ.ಎಸ್.ಹೆಗಡೆ, ಸುಧಾ ಭಂಡಾರಿ, ಪದ್ಯಾಣ ಗೋವಿಂದ ಭಟ್ಟ, ವಿ.ಆರ್.ಪೈ, ಕೆ.ವಿ.ಹೆಗಡೆ, ಪ್ರಕಾಶ ರಾಯಸ್, ಸಂದೀಪ ಭಟ್ಟ, ಎಮ್.ಎಸ್.ಹೆಗಡೆ, ಸಿದ್ಧಲಿಂಗಸ್ವಾಮಿ .ಎಚ್, ಜ್ಯೋತಿ ಶಾನಭಾಗ, ಆನಂದ ದೇವಾಡಿಗ, ಕೃಷ್ಣ ಅಂಬಿಗ ಮೊದಲಾದ ಹಿರಿ-ಕಿರಿಯ ಕವಿಗಳು ಕವನವಾಚಿಸಿ ಸಹೃದಯರ ಮನಸೆಳೆದರು. ಸುರೇಶ ನಾಯ್ಕ, ಲತಾ ನಾಯ್ಕ, ಶಾಂತರಾಯ ಗೊಂಡ, ವೆಂಕಟೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ಜನಾರ್ದನ ಹರನೀರು ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕೃಷ್ಣಕುಮಾರಿ ಪ್ರಾರ್ಥಿಸಿದರು. ಕಲ್ಪನಾ ಹೆಗಡೆ ಕವನವಾಚಿಸಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment