ಹೊನ್ನಾವರ:
ಹೊನ್ನಾವರ ತಾಲೂಕಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೃಹತ್ ಗಾತ್ರದ ಕಂಟೇನರ್ ಲಾರಿಯೊಂದು ಭಟ್ಕಳದಿಂದ ಹೊನ್ನಾವರದ ಕಡೆ ಪ್ರಯಾಣಿಕರ ಟೆಂಪೊಗೆ ಹಿಂದಿನಿಂದ ಗುದ್ದಿ ನಂತರ ಎದುರಿನಿಂದ ಬರುತ್ತಿದ್ದ ಕೆಂಪು ಕಲ್ಲು ತುಂಬಿದ ಲಾರಿಗೆ ಡಿಕ್ಕಿಯಾಗಿದ್ದು ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಗುಣಮಂತೆ ಸಮೀಪದ ಕೆರಮನೆ ಬಳಿ ಸಂಭವಿಸಿದೆ. ಕಳೆದ ಕೆಲ ತಿಂಗಳಿನಿಂದ ಹೊನ್ನಾವರ ಭಟ್ಕಳ ಕುಮುಟಾ ಭಾಗದಲ್ಲಿ ಅಫಘಾತದ ಸರಣಿ ಮುಂದುವರೆಯುತ್ತಿದ್ದು ಇಂದು ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ. ಭಟ್ಕಳ ಕಡೆಯಿಂದ ಹೊನ್ನಾವರಕ್ಕೆ ಆಗಮಿಸುತ್ತಿದ್ದ ಕಂಟೆನರ್ ಲಾರಿ ಓವರಟೇಕ್ ಮಾಡುವ ಸಮಯದಲ್ಲಿ ಹಿಂಬದಿಯಿಂದ ಪ್ಯಾಸೆಂಜರ್ ಟೆಂಪೊಗೆ ಡಿಕ್ಕಿಯಾಗಿ ಎದುರಿಗೆ ಬರುತ್ತಿದ್ದ ಕಲ್ಲು ತುಂಬಿದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟೆಂಪೊ ಪಲ್ಟಿಯಾಗಿದ್ದರೆ ಲಾರಿ ಮತ್ತು ಕಟೆಂನರ್ ವಾಹನದ ಮುಂಭಾಗ ಸಂಪೂರ್ಣ ನುಜ್ಜುನುಜ್ಜಾಗಿದೆ.
ಅಫಗಾತದಲ್ಲಿ ಮೃತಪಟ್ಟವರನ್ನು ಲಾರಿ ಚಾಲಕ ದೇವರಗದ್ದೆ,ಮಂಕಿಯ ರಾಜು ತಿಮ್ಮಪ್ಪ ಗೌಡ ಹಾಗೂ ಕ್ಲೀನರ್ ಮಂಕಿ ಬೋಳೆ ಬಸ್ತಿ ಅಣ್ಣಪ್ಪ ಮಂಜುನಾಥ ನಾಯ್ಕ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಪಲ್ಟಿಯಾದ ಟೆಂಪೋದಲ್ಲಿದ್ದ ಮಂಕಿಯ ಮುಕ್ತಾ ಅಣ್ಣಪ್ಪ ನಾಯ್ಕ, ಮೋಹನ ನಾಗಪ್ಪ ನಾಯ್ಕ, ಶಿರಸಿಯ ಗೋವಿಂದರಾಜು ಭಾನು ನಾಯ್ಕ, ಟೊಂಕಾದ ತಬಸುಮ್ ಖೂರೇಷಿ ಡಿಕ್ಕಾ, ಹುಬ್ಬಳ್ಳಿಯ ಹೀರು ಎಸ್.ಎಸ್ ರಾಠೋಡ್, ಕಾಸರಕೋಡಿನ ನಾಜಿಮಾ ಜೆಲಾನಿ ಮನ್ನಾ, ಇಡಗುಂಜಿಯ ಶೈಲಾ ವೆಂಕಟೇಶ ನಾಯ್ಕ, ಚಿತ್ತಾರದ ಮಂಜುನಾಥ ಗೌಡ ಸೇರಿದಂತೆ 8 ಕ್ಕೂ ಹೆಚ್ಚುಮಂದಿಗೆ ಗಂಭೀರ ಗಾಯಗಳಾಗಿದ್ದು ಹೊನ್ನಾವರ ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಟ್ಟು ಹಲವರನ್ನು ಮಂಗಳೂರು, ಉಡುಪಿ, ಮಣಿಪಾಲ್ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ನಡುವೆ ಅಫಗಾತ ಸಂಭವಿಸಿದ್ದರಿಂದ 2 ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.
Leave a Comment