• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜೇನು ಸಂಘಕ್ಕೆ ಅತ್ಯುತ್ತಮ ಸಾಧನಾ ಪ್ರಶಸ್ತಿ

November 12, 2018 by Gaju Gokarna 1 Comment

ಎಸ್.ಕೆ. ಕಲ್ಲಾಪುರ ,ಸಂಘದ ಸಂಸ್ಥಾಪಕರು
ಎಸ್.ಕೆ. ಕಲ್ಲಾಪುರ

ಹೊನ್ನಾವರ  : ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ ಜೇನು ಕೃಷಿಗೆ ಪ್ರೋತ್ಸಾಹ, ಮಾರ್ಗದರ್ಶನ, ಜೇನುತುಪ್ಪ ಖರೀದಿ, ಮಾರಾಟದಲ್ಲಿ ತೊಡಗಿರುವ ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರಿ ಸಂಘಕ್ಕೆ 65ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಶಿರ್ಸಿ ಟಿಎಸ್‍ಎಸ್ ಆವಾರದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಸಾಧನಾ ಪ್ರಶಸ್ತಿ’ ದಿನಾಂಕ 15ರಂದು ಪ್ರದಾನವಾಗಲಿದೆ.
ಹೊನ್ನಾವರ ಜಿಲ್ಲಾ ಕೇಂದ್ರವಾಗಿದ್ದಾಗ ಜಿಲ್ಲಾ ನ್ಯಾಯಾಲಯವಿತ್ತು. ಇಲ್ಲಿ ನ್ಯಾಯವಾದಿಯಾಗಿ ಕೆಲಸಮಾಡಲು ಬಂದ ಗಾಂಧಿವಾದಿ ಧಾರವಾಡದ ಎಸ್.ಕೆ. ಕಲ್ಲಾಪುರ ಎಂಬವರು ಜೇನು ಸಂಘವನ್ನು ಸ್ಥಾಪಿಸಿದರು. ಶೇ. 80ರಷ್ಟು ಕಾಡಿನಿಂದ ತುಂಬಿದ ಉ.ಕ. ಜಿಲ್ಲೆಯಲ್ಲಿ ಸಾವಿರಾರು ಟನ್ ಜೇನುತುಪ್ಪ ಹಾಳಾಗುತ್ತಿತ್ತು. ಇದನ್ನು ಮನಗಂಡು ಜೇನುಸಾಕುವದನ್ನು, ಅಹಿಂಸಾತ್ಮಕವಾಗಿ ಜೇನುತುಪ್ಪ ತೆಗೆಯುವುದನ್ನು ರೈತರಿಗೆ ಕಲಿಸಲು ಈ ಸಂಘ ಸ್ಥಾಪನೆಯಾಗಿತ್ತು. ಜೊತೆಯಲ್ಲಿ ಸತ್ತದನಗಳ ಕೋಡಿನ ಬಾಚಣ ಕೆ, ಅಲಂಕಾರಿಕ ವಸ್ತು, ಕಾಡು ಉತ್ಪತ್ತಿಯ ಸಂಸ್ಕರಣೆ ಮೊದಲಾದವನ್ನು ಕಲ್ಲಾಪುರ ಕಲಿಸಿಕೊಟ್ಟಿದ್ದರು. ಜಿಲ್ಲೆಯ ನಾಲ್ಕಾರು ತಾಲೂಕುಗಳಲ್ಲಿ ಜೇನುಸಂಘ ಸ್ಥಾಪನೆಯಾದರೂ ನಿರಂತರವಾಗಿ 77ವರ್ಷಗಳಿಂದ ನಡೆದುಕೊಂಡಿರುವ ಸಂಘ ಇದೊಂದೇ ಆಗಿದೆ. ಸ್ವಂತ ಕಟ್ಟಡ, ಸಿಬ್ಬಂದಿಯನ್ನು ಹೊಂದಿರುವ ಸಂಘ ವಾರ್ಷಿಕವಾಗಿ 35ಟನ್ ಜೇನುತುಪ್ಪವನ್ನು ಸಂಸ್ಕರಿಸಿ, ಅಗ್‍ಮಾರ್ಕ್‍ನೊಂದಿಗೆ ಮಾರಾಟಮಾಡುತ್ತಿದೆ. ನವೆಂಬರ್ ತಿಂಗಳಲ್ಲಿ ಬರುವ ಅಂಟವಾಳ ಜೇನುತುಪ್ಪ ಅತ್ಯಂತ ಬೇಡಿಕೆಯಿದ್ದು ಕಿಲೋಗೆ 1500 ರೂಪಾಯಿಗೆ ಮಾರಾಟವಾಗುತ್ತಿದೆ.
ಸರ್ಕಾರದ ವಿವಿಧ ಯೋಜನೆ ಅನ್ವಯ ಜೇನುಸಾಕುವವರಿಗೆ ಉಪಕರಣ ರಿಯಾಯತಿಯಲ್ಲಿ ಮಾರಾಟಮಾಡುತ್ತದೆ ಮಾರ್ಗದರ್ಶನ, ತರಬೇತಿಯನ್ನು ನೀಡುತ್ತದೆ. ಕಾಡು ಜೇನನ್ನು ಖರೀದಿಸಿ ಸಂಸ್ಕರಿಸುತ್ತಿದೆ. ಕಲಬೆರೆಕೆ ಇಲ್ಲದೆ ಜೇನುತುಪ್ಪವನ್ನು ಮಾರಲಾಗುತ್ತಿದ್ದು ಹೊನ್ನಾವರದ ಮಧು ಬ್ರಾಂಡ್ ಜೇನುತುಪ್ಪಕ್ಕೆ ಹೆಸರಿದೆ. 1500ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಖಾದಿ ಬೋರ್ಡ್ ಮತ್ತು ಖಾದಿ ಕಮೀಶನ್‍ನ ಮಾರ್ಗದರ್ಶನ ಇದೆ. ಆರ್ಥಿಕ ಬೆಂಬಲ ಇದೆ. ಜೇನುಕೃಷಿ ಅಭಿವೃದ್ಧಿಗೆ 97ಲಕ್ಷ ರೂಪಾಯಿ ಯೋಜನೆಯೊಂದು ಸಂಘಕ್ಕೆ ಮಂಜೂರಾಗಿದೆ.
ಖಾದಿ ಗ್ರಾಮೋದ್ಯೋಗದ ಹಲವಾರು ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರಶಸ್ತಿಗಳಿಸಿದ ಸಂಘಕ್ಕೆ ಪ್ರಶಸ್ತಿ ದೊರೆತಿರುವುದರಿಂದ, ಆಡಳಿತ ಮಂಡಳಿಯ ಸಹಕಾರದಿಂದ ಹೆಚ್ಚು ಉತ್ಸಾಹದಿಂದ ಕೆಲಸಮಾಡಲು ಪ್ರೇರಣೆ ದೊರಕಿದೆ ಎಂದು ಸಂಘದ ಕಾರ್ಯನಿರ್ವಾಹಕ ಶ್ರೀಧರ ಹೆಗಡೆ ಹೇಳಿದ್ದಾರೆ.
watermarked 10 Honavar 02

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: 35ಟನ್ ಜೇನುತುಪ್ಪ, Jenu Society, ಅಗ್‍ಮಾರ್ಕ್‍, ಅತ್ಯುತ್ತಮ ಸಾಧನಾ ಪ್ರಶಸ್ತಿ, ಉ.ಕ. ಜಿಲ್ಲೆಯಲ್ಲಿ, ಉಪಕರಣ ರಿಯಾಯತಿ, ಎಸ್.ಕೆ. ಕಲ್ಲಾಪುರ, ಕಾಡು ಜೇನನ್ನು ಖರೀದಿಸಿ, ಗಾಂಧಿವಾದಿ, ಗ್ರಾಮೀಣ ಕೈಗಾರಿಕಾ ಸಹಕಾರಿ ಸಂಘ, ಜೇನು ಕೃಷಿಗೆ ಪ್ರೋತ್ಸಾಹ, ಜೇನು ಸಾಕುವವರ, ಜೇನುತುಪ್ಪ ಖರೀದಿ, ಜೇನುಸಾಕುವವರಿಗೆ, ಧಾರವಾಡದ, ನ್ಯಾಯವಾದಿಯಾಗಿ ಕೆಲಸಮಾಡಲು ಬಂದ, ಮಧು ಬ್ರಾಂಡ್ ಜೇನುತುಪ್ಪ, ಮಾರಾಟ, ಮಾರ್ಗದರ್ಶನ, ರೈತರಿಗೆ ಕಲಿಸಲು, ವಾರ್ಷಿಕವಾಗಿ, ಸಂಘದ ಸಂಸ್ಥಾಪಕರು, ಸಂಸ್ಕರಿಸಿ, ಸಾವಿರಾರು ಟನ್ ಜೇನುತುಪ್ಪ

Explore More:

Reader Interactions

Comments

  1. Jagadeesh says

    November 12, 2018 at 6:09 pm

    Office address send me

    Reply

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...