ಹೊನ್ನಾವರ: ತಾಲೂಕಿನ ಜಲವಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿ ಕಳಪೆಯಾದ ಕುರಿತಂತೆ ಸಾರ್ವಜನಿಕರ ಲಿಖಿತ ದೂರಿನ ಹಿನ್ನಲೆಯಲ್ಲಿ ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಸ್ಥಳಕ್ಕೆ ಅಧಿಕಾರಿಗಳನ್ನು ಕರೆದೊಯ್ದು ಸಾರ್ವಜನಿಕರ ಸಮಕ್ಷಮದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ಕಳಪೆಯಾದ ಸ್ಥಳಗಳನ್ನು ಸರಿಪಡಿಸಿಯೇ ಕಾಮಗಾರಿ ಮುಂದುವರೆಸುವಂತೆ ಖಡಕ್ ಎಚ್ಚರಿಕೆ ನೀಡಿದರು.
ಕಳೆದ ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ಮಾಜಿ ಶಾಸಕ ಮಂಕಾಳು ವೈದ್ಯರ ಅವಧಿಯಲ್ಲಿ ನಡೆದ ಜಲವಳ್ಳಿ ರಿಂಗ್ ರಸ್ತೆಯ ಕಳಪೆ ಹಾಗೂ ಆಮೆಗತಿಯ ಕಾಮಗಾರಿ ನಡೆಸುತ್ತಿದ್ದ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡು ಕಾಮಗಾರಿ ನಡೆಸಿದವರಿಗೆ ಹಿಡಿ ಶಾಪ ಹಾಕಿದ್ದಾರೆ. ಅಷ್ಟು ಸಾಲದ್ದು ಅಂತಾ ಶಾಸಕರಿಗೆ ಲಿಖಿತ ದೂರು ಸಲ್ಲಿಸಿ ಕಾಮಗಾರಿ ಬಗ್ಗೆ ಕಣ್ಣಾಯಿಸುವಂತೆ ಮನವಿ ಮಾಡಿದ್ದಾರೆ. ಗ್ರಾಮಸ್ಥರ ದೂರಿನ ಹಿನ್ನಲೆ ಶಾಕ ಸುನೀಲ್ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಒಟ್ಟಾಗಿ ಸೇರಿಸಿ ಕಳಪೆ ಕಾಮಗಾರಿ ವೀಕ್ಷಿಸಿದ್ದಾರೆ. ಗ್ರಾಮಸ್ಥರ ಆರೋಪಗಳ ಸುರಿಮಳೆ ಹಿನ್ನಲೆ ಕಾಮಗಾರಿ ಪರೀಶಿಲಿಸಿ ಅಧಿಕಾರಿಗಳಿಗೆ ಶಾಸಕ ಸುನೀಲ್ ಸೂಚಿಸಿ ಇದು ನೂರಕ್ಕೆ ನೂರರಷ್ಟು ಕಳಪೆ ಕಾಮಗಾರಿಯಾಗಿದೆ. ಸಂಪೂರ್ಣ ಕಾಮಗಾರಿ ಅಚ್ಚುಕಟ್ಟಾಗಿ ನಡೆದ ಮೇಲೆ ಪರೀಶೀಲನೆ ನಡೆಸಿಯೇ ಬಿಲ್ ಪಾವತಿಸುವಂತೆ ಖಡಕ್ ಎಚ್ಚರಿಕೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸುನೀಲ್ ನಾಯ್ಕ ಈ ಭಾಗದಲ್ಲಿ ಸಾರ್ವಜನಿಕರು ನೀಡಿದ ಲಿಖಿತ ದೂರನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ಕಳಪೆಯಾದ ಬಗ್ಗೆ ಗಮನಕ್ಕೆ ಬಂದಿದೆ. ಪ್ರಾರಂಭದಿಂದಲೇ ಸರಿಪಡಿಸಿ ಮುಂದುವರೆಸುವಂತೆ ಸೂಚನೆ ನೀಡಿದ್ದೇನೆ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ನಡೆದ ಬಗ್ಗೆ ವರದಿ ಪಡೆದು ಚರ್ಚಿಸುತ್ತೇನೆ ಅಧಿವೇಶನದಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಪ್ರಾಮಾಣ ಕ ಪ್ರಯತ್ನ ನಡೆಸುತ್ತೇನೆ. ಅನಿಲಗೋಡ ಭಾಗದಲ್ಲಿ ನಿರ್ಮಾಣವಾದ ರಸ್ತೆ ಹದಗೆಟ್ಟ ಬಗ್ಗೆ ಪ್ರಶ್ನಿಸಿದಾಗ ಈ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಕಳಪೆ ಕೆಲಸ ನನ್ನ ಅವಧಿಯಲ್ಲಿ ಬೇಕಿಲ್ಲ. ಅಂತಹ ಯಾವುದೇ ಸನ್ನಿವೇಶ ಎದುರಾದಲ್ಲಿ ಸಂಭಂದಿಸಿದ ಅಧಿಕÁರಿಗಳನ್ನು ನೇರಹೊಣೆ ಯನ್ನಾಗಿ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
“ನಮ್ಮ ಗ್ರಾಮದ ರಸ್ತೆ ಕೆಲಸದ ಬಗ್ಗೆ ಈ ಹಿಂದೆ ಅಧಿಕಾರಿಗಳಿಗೆ,ಗುತ್ತಿಗೆದಾರರಿಗೆ ಪ್ರಶ್ನೆ ಮಾಡಿದ್ದೇವು ಆದರೆ ಅವರು ಹಾರಿಕೆಯ ಉತ್ತರ ನೀಡಿದ್ದರು ಈ ಹಿನ್ನಲೆಯಲ್ಲಿ ಶಾಸಕರ ಗಮನಕ್ಕೆ ತಂದಿದ್ದೇವೆ ಶಾಸಕರ ಭೇಟಿಯಿಂದ ಅಧಿಕಾರಿಗಳು ಎಚ್ಚೆತ್ತು ಮುಂದಿನ ದಿನಗಳಲ್ಲಿ ಉತ್ತಮ ರೀತಿಯ ಕಾಮಗಾರಿ ನಡೆಯುವ ವಿಶ್ವಾಸವಿದೆ”.-ಗ್ರಾಮ ಪಂಚಾಯತ ಅಧ್ಯಕ್ಷೆ ಲೀಲಾವತಿ ನಾಯ್ಕ
ಸಂಪೂರ್ಣ ಕಳಪೆ ಕಾಮಗಾರಿ ನಡೆದಿಲ್ಲ: “ಮಳೆಗಾಲದಲ್ಲಿ ನಡೆದ ಕಾಮಗಾರಿಯಾಗಿರೋದ್ರಿಂದ ಲೋಪದೋಷಗಳಾಗಿರಬಹುದು ಈ ಬಗ್ಗೆ ಗುತ್ತಿಗೆದಾರರಿಗು ನೋಟಿಸ್ ನೀಡಿದ್ದೇವೆ ಅದಕ್ಕೆ ಯಾವುದೇ ಉತ್ತರ ನೀಡಿಲ್ಲ. .ರಸ್ತೆಗೆ ಕಡಿಕರಣ ಬಾಕಿ ಇದ್ದು ಗುಣಮಟ್ಟ ಪರಿಕ್ಷಿಸಿ ಡಾಂಬರೀಕರಣ ನಡೆಸುತ್ತೇವೆ ಎಂದರು. ಈ ಭಾಗದ ರಸ್ತೆ ಕೆಲಸದ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಕೆಲವು ಸಲಹೆ ಸೂಚನೆ ನೀಡಿದ್ದಾರೆ. ಅದನ್ನು ಮುಂದಿನ ದಿನದಲ್ಲಿ ಅನುಷ್ಟಾನ ಗೊಳಿಸಿ ಕೆಲಸ ಆರಂಭಿಸುತ್ತೇವೆ ಎಂದರು. ತಾಲೂಕಿನ ವಿವಿಧಡೆ ನಿರ್ಮಾಣವಾದ ರಸ್ತೆ 1 ವರ್ಷದಲ್ಲಿ ದುಸ್ಥಿತಿಯ ಬಗ್ಗೆ ಪ್ರಶ್ನಿಸಿದಾಗ ಸಮಸ್ಯೆ ಬಗ್ಗೆ ಈಗಾಗಲೇ ಸಂಭದಿಸಿದವರಿಗೆ ನೋಟಿಸ್ ನೀಡಲಾಗಿದೆ. ಯಾವುದೇ ಹಣ ಪಾವತಿಯಾಗದ ಹಿನ್ನಲ್ಲೆಯಲ್ಲಿ ಜನಸಾಮನ್ಯರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತೇವೆ” ಎಂದು ಸಹಾಯಕ ಕಾರ್ಯಕಾರಿ ಇಂಜಿನಿಯರ್ ವಸಂತ ನಾಯ್ಕ ತಿಳಿಸಿದ್ದಾರೆ.
Leave a Comment