ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸಕ್ಲಬ್ ಸಭಾಭವನದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತಅಂಗನವಾಡಿ ಮಕ್ಕಳಿಂದ ಛದ್ಮವೇಷ ಪ್ರದರ್ಶನಕಾರ್ಯಕ್ರಮಎರ್ಪಡಿಸಲಾಯಿತು.
ಲಯನ್ಸಎಸ್.ಜೆ.ಕೈರನ್ನರು ಮಾತನಾಡಿ ನೆಹರೂರವರು ಮಕ್ಕಳನ್ನು ಬಹಳವಾಗಿ ಪ್ರೀತಿಸುತ್ತಿದ್ದರು.ಅದರ ಸಲುವಾಗಿ ನೆಹರೂರವರಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿಆಚರಿಸಲಾಗುತ್ತದೆ.ಅವರಆದರ್ಶ ಗುಣಗಳನ್ನು ಮಕ್ಕಳು ಪಾಲಿಸÀಬೇಕು ಎಂದÀರು.
ವಿವಿಧ ವೇಷಭೂಷಣಗಳೊಂದಿಗೆ ಛದ್ಮವೇಷ ಪ್ರದರ್ಶಿಸಿದ ಅಂಗನವಾಡಿ ಮಕ್ಕಳಿಗೆ ಸಿಹಿತಿಂಡಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಪ್ರಾಯೋಜಕರಾಗಿ ಲಯನ್ಕೃಷ್ಣಮೂರ್ತಿ ಭಟ್ಟ ಶಿವಾನಿ ಸಹಕರಿಸಿದರು.
ಪದಾಧಿಕಾರಿಗಳಾದ ಡಿ.ಡಿ. ಮಡಿವಾಳ, ಎನ್.ಜಿ.ಭಟ್ಟ ವಸಂತ ಪ್ರಭು, ಶಾಂತಾರಾಮ ನಾಯ್ಕ , ಶೇಖರ ಅಧ್ಯಕ್ಷರಾಜೇಶ ಸಾಲೇಹಿತ್ಲು ಸ್ವಾಗತಿಸಿದರು.ಖಾಜಾಂಚಿಯೋಗೇಶರಾಯಕರ ವಂದಿಸಿದರು.
Leave a Comment