ಹೊನ್ನಾವರ,ತಾಲೂಕಿನ ಹೊಸಾಕುಳಿಯ ಶ್ರೀ ಉಮಾಮಹೇಶ್ವರ ಯಕ್ಷಗಾನ ಕಲಾವರ್ದಕ ಸಂಘದ ಮೂವತ್ತೋಂಬತ್ತನೇ ವರ್ಷದ ಚಾತುರ್ಮಾಸ್ಯ ಏಕಾದಶಿ ಸರಣ ತಾಳಮದ್ದಲೆ ಕೂಟಗಳ ಸಮಾರೋಪ ಸಮಾರಂಭವು ಹೊಸಾಕುಳಿಯ ಶ್ರೀ ಉಮಾಮಹೇಶ್ವರ ದೇವಾಲಯದಲಸಲ್ಲಿ ಜರುಗಿತು. ಇದೆ ಸಂದರ್ಭದಲ್ಲಿ ಗಣೇಶ ನಾಯ್ಕ ಮುಗ್ವಾ (ಯಕ್ಷಗಾನ ಕಲಾವಿದರು ಹಾಗು ಸಾಮಾಜಿಕ ಕಾರ್ಯಕರ್ತರು) ಇವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಡಾ|| ಎನ್.ಆರ್. ನಾಯಕ ಮಾತನಾಡಿ ,ಜಾನಪದ
ಕನ್ನಡ ಭಾಷೆ ಶುದ್ಧವಾಗಿ ಉಳಿದದ್ದು ಯಕ್ಷಗಾನದಲ್ಲಿ ಮಾತ್ರ ಯಕ್ಷಗಾನ ಉಳಿಯುವ ತನಕ ಕನ್ನಡ ಉಳಿಯುತ್ತದೆ. ಯಕ್ಷಗಾನವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಗವು ನಡೆಸುತ್ತಿರುವ ನಿರಂತರ ಚಟುವಟಿಕೆಗಳು ಪ್ರಶಂಸನೀಯ ಎಂದರು.
ಮುಖ್ಯತಿಥಿಗಳಾಗಿ ಪಾಲ್ಗೋಂಡ ಮಾತನಾಡಿ ಎಂ.ಆರ್.ಹೆಗಡೆ ಕಾನಗೋಡ ಸಂಗದಚಟುವಟಿಕೆಯನ್ನು ಶ್ಲಾಘಿಸುತ್ತ ಕಲಾವಿದರು ಯಕ್ಷಗಾನ ಪಾವಿತ್ರತೆಯನ್ನು ಉಳಿಸಿಕೊಂಡು ಹೋಗಲು ಕರೆನೀಡಿದರು.
ಗಣೇಶ ನಾಯ್ಕ ಮುಗ್ವಾ ಅವರು ಸನ್ಮಾನ ಸ್ವಿಕರಿಸಿದ ನಂತರ ಮಾತನಾಡಿ ಸಂಘವು ಆತ್ಮೀಯವಾಗಿ ನೀಡಿದ ಸನ್ಮಾನ ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದರು.
ಯಕ್ಷಗಾನಕಲಾವದ ಈಶ್ವರ ಭಟ್ಟ ಅಂಸಳ್ಳಿ ಸನ್ಮಾನಪತ್ರ ವಾಚಿಸಿದರು. ಸಂಘದ ಕಾರ್ಯದರ್ಶಿ ಎಸ್.ಎಂ.ಹೆಗಡೆ ಮುಡಾರೆ ಸನ್ಮಾನಿತರ ಕುರಿತು ಅಭಿನಂದನಾ ನುಡಿಗಳನ್ನಾಡಿದರು. ಆಡಳಿತ ಮಂಡಳಿಯ ಸದಸ್ಯ ಗಜಾನನ ಹೆಗಡೆ ಗುಡ್ಡೇಬಾಳ ಸರಣ ತಾಳಮದ್ದಲೆ ಕೂಟಗಳ
ವರದಿ ವಾಚಿಸಿದರು ಪ್ರಾರಂಭದಲ್ಲಿ ಸಂಘದ ಅಧ್ಯಕ್ಷ ಡಾ|| ಜಿ.ಕೆ.ಹೆಗಡೆ ಹರಿಕೇರಿ ಸ್ವಾಗತಿಸಿ ಕೊನೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಯು.ಎಸ್.ಹೆಗಡೆ ತರಟಗೇರಿ ಆಭಾರ ಮನ್ನಿಸಿದರು.
ನಂತರ ನಡೆದ “ಪಾದುಕಾ ಕಿರೀಟಿ” ತಾಳಮದ್ದಳೇಯಲ್ಲಿ ಭಾಗವತರಾಗಿ ಸುಬ್ರಾಯ ಭಾಗವತ ಕಪ್ಪೇಕೇರಿ,
ಮದ್ದಲೆ ವಾದಕರಾಗಿ ಪಿ.ಕೆ.ಹೆಗಡೆ ಹರಿಕೇರಿ ಮಂಜುನಾಥ ಭಂಡಾರಿ ಕರ್ಕಿ ಚಂಡೆ ವಾದಕರಾಗಿ ಕೃಷ್ಣಯಾಜಿ ಇಡಗುಂಜಿ, ರಾಮನಪಾತ್ರದಲ್ಲಿ ವಿಷ್ಣು ಭಟ್ಟ ನೀಲಕೋಡ, ಲಕ್ಷಮಣನಾಗಿ ಈಶ್ವರ ಭಟ್ಟ ಅಂಸಳ್ಳಿ, ಭರತನಾಗಿ ಡಾ|| ಜಿ.ಕೆ.ಹೆಗಡೆ ಹರಿಕೇರಿ ವಸಿಷ್ಥನಾಗಿ ಪ್ರಭಾಕರ ಹೆಗಡೆ ಚಿಟ್ಟಾಣ ಇವರುಗಳು ಭಾಗವಹಿಸಿ ರಂಜಿಸಿದರು.
ಗೋವಿಂದ ಭಟ್ಟ ನೀಲಕೋಡ (ನ್ಯಾಯವಾದಿಗಳು) ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಆಡಳಿತ ಸದಸ್ಯರಾದ ಜಿ.ಎಂ.ಹೆಗಡೆ (ಶಿವಪ್ಪನ್)ಹೆಬ್ಬಾರ್ತಕೇರಿ ಹಾಗು ಗಜಾನನ ಹೆಗಡೆ ಗುಡ್ಡೇಬಾ ಇವರು ಸಂಯೋಜಿಸಿದರು.
Leave a Comment